ಈ ಬಾರಿ ರಾಜ್ಯದಲ್ಲಿ ಜಲಕ್ಷಾಮ ಉಂಟಾಗುತ್ತಾ.?

ರಾಜ್ಯದಲ್ಲಿ ಈ ಬಾರಿ ಶೇಕಡಾ 51 ರಷ್ಟು ಮಳೆ ಕೊರತೆಯುಂಟಾಗಿದೆ.ವಾಡಿಕೆಯ ಪ್ರಕಾರ ಈ ಬಾರಿ 21.7 ಸೆಂ.ಮೀ ಮಳೆಯಾಗಬೇಕಿತ್ತು,ಆದರೆ ಜುಲೈ 2 ರ ವರೆಗೂ ರಾಜ್ಯದಲ್ಲಿ ಮಳೆ ಆಗಿದ್ದು ಶೇಕಡಾ 10.6 ಸೆಂ. ಮೀ ನಷ್ಟು ಎನ್ನಲಾಗಿದೆ.

Written by - Manjunath N | Last Updated : Jul 5, 2023, 11:58 AM IST
  • ದಕ್ಷಿಣ ಒಳನಾಡಿನಲ್ಲಿ ಈ ಬಾರಿ ಶೇಕಡಾ 54 ರಷ್ಟು ಮಳೆ ಕೊರತೆ ಉಂಟಾಗಿದೆ.
  • ಈ ಭಾಗದಲ್ಲಿ ವಾಡಿಕೆಯಂತೆ 16.9 ಸೆಂ.ಮೀ.ಮಳೆಯಾಗಬೇಕಿತ್ತು, ಆಗಿದ್ದು 7.4 ಸೆಂ. ಮೀ ಮಳೆ ಮಾತ್ರ.
  • ಇನ್ನೂ ಬೆಂಗಳೂರು ನಗರದ ಮೇಲೂ ಈ ಬಾರಿ ವರುಣ ಮುನಿಸಿಕೊಂಡಿದ್ದಾನೆ.
ಈ ಬಾರಿ ರಾಜ್ಯದಲ್ಲಿ ಜಲಕ್ಷಾಮ ಉಂಟಾಗುತ್ತಾ.? title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಶೇಕಡಾ 51 ರಷ್ಟು ಮಳೆ ಕೊರತೆಯುಂಟಾಗಿದೆ.ವಾಡಿಕೆಯ ಪ್ರಕಾರ ಈ ಬಾರಿ 21.7 ಸೆಂ.ಮೀ ಮಳೆಯಾಗಬೇಕಿತ್ತು,ಆದರೆ ಜುಲೈ 2 ರ ವರೆಗೂ ರಾಜ್ಯದಲ್ಲಿ ಮಳೆ ಆಗಿದ್ದು ಶೇಕಡಾ 10.6 ಸೆಂ. ಮೀ ನಷ್ಟು ಎನ್ನಲಾಗಿದೆ.

ಈಗ ರಾಜ್ಯದಲ್ಲಿ ಶೇ 51 ರಷ್ಟು ಮಳೆಯ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಮಳೆ ಆಗುತ್ತಿತ್ತು,ಆದರೆ ಈ ಬಾರಿ ಈ ಪ್ರದೇಶಗಳಲ್ಲಿಯೂ ಕೂಡ ಮಳೆ ಕೊರತೆ ಉಂಟಾಗಿದೆ.ಒಟ್ಟಾಗಿ ಕರಾವಳಿ ಭಾಗದಲ್ಲಿ ಶೇ 26 ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆ ಪ್ರಕಾರ 93.9 ಸೆಂ. ಮೀ ಮಳೆಯಾಗಬೇಕಿತ್ತು, ಆಗಿದ್ದು ಕೇವಲ 50.3 ಸೆಂ. ಮೀ ಮಾತ್ರ, ಇನ್ನೂ ಉತ್ತರ ನಾಡಿನಲ್ಲೂ ಶೇಕಡಾ 55.6 ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಪ್ರದೇಶದಲ್ಲಿ 11.6 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ ಜುಲೈ 2 ರವರೆಗೂ ಉತ್ತರ ಒಳನಾಡಿನಲ್ಲಿ ಮಳೆಯಾಗಿದ್ದು 5.6 ಸೆಂ. ಮೀಟರ್ ಮಾತ್ರ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ​ಗೃಹಜ್ಯೋತಿ ಯೋಜನೆ ಸಕ್ಸಸ್: ರಾಜ್ಯದಲ್ಲಿ 97 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಅರ್ಜಿ ಸಲ್ಲಿಕೆ

ದಕ್ಷಿಣ ಒಳನಾಡಿನಲ್ಲಿ ಈ ಬಾರಿ ಶೇಕಡಾ 54 ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಭಾಗದಲ್ಲಿ ವಾಡಿಕೆಯಂತೆ 16.9 ಸೆಂ.ಮೀ.ಮಳೆಯಾಗಬೇಕಿತ್ತು, ಆಗಿದ್ದು 7.4 ಸೆಂ. ಮೀ ಮಳೆ ಮಾತ್ರ.ಇನ್ನೂ ಬೆಂಗಳೂರು ನಗರದ ಮೇಲೂ ಈ ಬಾರಿ ವರುಣ ಮುನಿಸಿಕೊಂಡಿದ್ದಾನೆ.ಬೆಂಗಳೂರಿನಲ್ಲಿ ಶೇ 20 ರಷ್ಟು ಮಳೆ ಕೊರತೆ ಉಂಟಾಗಿದೆ.ವಾಡಿಕೆಯಂತೆ 9 ಸೆಂ.ಮೀ. ಮಳೆಯಾಗಬೇಕಿತ್ತು,ಜುಲೈ 2 ರ ವರೆಗೂ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿದ್ದು 7.2 ಸೆಂ. ಮೀ. ಮಾತ್ರ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಶೇಕಡಾ 14 ರಷ್ಟು ಮಳೆ ಕೊರತೆ ಉಂಟಾಗಿದೆ.ವಾಡಿಕೆಯಂತೆ 6.8 ಸೆಂ. ಮೀ ಮಳೆ ಆಗಬೇಕಿತ್ತು, ಆದರೆ ಆಗಿದ್ದು 5. ಸೆಂ.ಮೀ ಮಳೆ ಮಾತ್ರ. ಇನ್ನೂ ಚಿತ್ರದುರ್ಗ, ದಾವಣಗೆರೆ,  ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು,ತುಮಕೂರು ಜಿಲ್ಲೆಗಳಲ್ಲಿ ವಾಡಿಕೆಯಂತೆ ಮಳೆಯಾಗಿದೆ.

ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!

9 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ರೆ,  15 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.7 ಜಿಲ್ಲೆಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ವರುಣನ ಸಿಂಚನವಾಗಿದೆ.ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ,ಧಾರವಾಡ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಅತೀ ಕಡಿಮೆ ಮಳೆಯಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News