Daily Horoscope: ದಿನಭವಿಷ್ಯ 06-02-2021 Today astrology

ಶ್ರೀ ಕ್ಷೇತ್ರ  ತಿರುಮಲೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

Written by - Zee Kannada News Desk | Last Updated : Feb 6, 2021, 07:27 AM IST
  • ಕಟಕ ರಾಶಿಯವರು ಮತ್ತೊಬ್ಬರ ವ್ಯಾಪಾರಕ್ಕೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕಿ ಕೊಳ್ಳುವಿರಿ
  • ಧನಸ್ಸು ರಾಶಿಯವರಿಗೆ ವಿನಾಕಾರಣ ಶತ್ರು ಬಾಧೆ ನಿಮ್ಮನ್ನು ಬಾಧಿಸಲಿದೆ
  • ಕುಂಭ ರಾಶಿಯವರಿಗೆ ಕೆಲಸದ ನೆಪ ಹೇಳಿ ಅತಿ ದೈಹಿಕ ಶ್ರಮ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು
Daily Horoscope: ದಿನಭವಿಷ್ಯ 06-02-2021 Today astrology  title=
Daily horoscope (ದಿನಭವಿಷ್ಯ 06-02-2021)

Daily horoscope (ದಿನಭವಿಷ್ಯ 06-02-2021)  :  ಶ್ರೀ ಕ್ಷೇತ್ರ  ತಿರುಮಲೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಮೇಷ :- ಅಸ್ಥಿತಿಗಳು ಸರಿಯಿಲ್ಲದ ಕಾರಣ ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ದುಷ್ಟ ಚಟಗಳಿಗೆ ದಾಸರಾಗುವ ಸಂಭವವಿರುತ್ತದೆ. ಆದಷ್ಟು ಮನಸ್ಸಿಗೆ ಸಾಂತ್ವನ ನೀಡಿಕೊಳ್ಳಿರಿ. ದೇವತಾ ಆರಾಧನೆ ಯೋಗಾಭ್ಯಾಸ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಖಿನ್ನತೆ ದೂರವಾಗುವುದು. ರಾತ್ರಿ ಆದ ಮೇಲೆ ಬೆಳಕು ಬರಲೇ ಬೇಕು. ಹಾಗಾಗಿ ಜೀವನದಲ್ಲಿ ನಿರಾಶೆ ಬೇಡ. ಗುರುವಿನ ಶುಭ ಆಶೀರ್ವಾದ ಪಡೆಯಿರಿ. ಮಾತುಗಳನ್ನು ಆಡುವಾಗ ಎಚ್ಚರದಿಂದಿರಿ. ನೆರೆಹೊರೆಯವರೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಿರಿ.

ವೃಷಭ:- ಸೋದರಿಯರು ಈ ವಾರ ನಿಮಗೆ ಉತ್ತಮ ಸಲಹೆಗಳನ್ನು ನೀಡುವರು. ಅವನ್ನು ಸ್ವೀಕರಿಸುವುದರಿಂದ ಜೀವನದಲ್ಲಿ ಅಧಿಕ ಯಶಸ್ಸು ಹೊಂದುವಿರಿ. ಮನೆ ಕಟ್ಟುವ ಅಥವಾ ಜಾಗ ಖರೀದಿಸುವ ಬಗ್ಗೆ ಈ ವಾರ ಒಂದು ನಿರ್ಧಾರಕ್ಕೆ ಬರುವಿರಿ. ನಿಮ್ಮ ನಿರ್ಧಾರ ಫಲಪ್ರದವಾಗಲು ಭೂ ವರಾಹಸ್ವಾಮಿಯನ್ನು ಪ್ರಾರ್ಥಿಸಿರಿ. ಸೋದರನೊಂದಿಗೆ ಉತ್ತಮ ಸೌಹಾರ್ದತೆಯಿಂದ ನಡೆದುಕೊಂಡಲ್ಲಿ ಕೆಲವು ವಿಚಾರಗಳಲ್ಲಿ ಸುಲಭವಾಗಿ ಪರಿಹಾರ ದೊರೆಯುವುದು. ನವ ವಿವಾಹಿತರಿಗೆ ಸಂತಾನ ಭಾಗ್ಯ ದೊರೆಯಲಿದೆ.

ಮಿಥುನ:- ಕೆಲವೊಮ್ಮೆ ನೀವೇ ಎಲ್ಲಾ ತಿಳಿದವರಂತೆ ಮಾತನಾಡಲು ಹೋಗಿ ಅಪಹಾಸ್ಯಕ್ಕೆ ಹಾಗೂ ಅವಮಾನಕ್ಕೆ ಗುರಿಯಾಗುವಿರಿ. ತಿಳಿದಿದ್ದರೂ ತಿಳಿಯದಂತಿರುವುದು ಜಾಣರ ಲಕ್ಷ ಣ ಎಂಬುದನ್ನು ಮರೆಯದಿರಿ. ಅನುಭವಿಗಳ ಸಲಹೆಗಳನ್ನು ಅಲಕ್ಷಿಸಬೇಡಿ. ಸ್ನೇಹಿತರ ಸಂಪೂರ್ಣ ಬೆಂಬಲದಿಂದಾಗಿ ನಿಮ್ಮ ಕಾರ್ಯಗಳೆಲ್ಲವೂ ನಿರಂತರವಾಗಿ ಸಾಗಲಿವೆ. ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಉಷ್ಣ ಸಂಬಂಧ ಅನಾರೋಗ್ಯ ಕಾಡುವುದು. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಕಟಕ: ಮತ್ತೊಬ್ಬರ ವ್ಯಾಪಾರಕ್ಕೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕಿ ಕೊಳ್ಳುವಿರಿ. ಮಿತ್ರರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದ ಇರುವುದು ಒಳ್ಳೆಯದು. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಬೇಡ. ನಿಮ್ಮ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಿರಿ. ಹಿರಿಯರ ಸಲಹೆಯು ಸಕಾಲಕ್ಕೆ ದೊರೆಯುವುದು. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷವಾಗಿ ಭಾಗವಹಿಸುವುದರಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಮಕ್ಕಳ ನಡಾವಳಿಯು ಮನೆಯಲ್ಲಿ ಮುಜುಗರದ ಪ್ರಸಂಗವನ್ನು ತರುವುದು. ಆರೋಗ್ಯದ ಕಡೆ ಗಮನ ನೀಡಿರಿ.

ಇದನ್ನೂ ಓದಿ - ದೇವಿ ಲಕ್ಷ್ಮಿ ಮನೆ ತೊರೆಯುತ್ತಿದ್ದಾಳೆ ಎನ್ನುತ್ತವೆ ಈ ಸಂಕೇತಗಳು, ಎಚ್ಚರ ವಹಿಸಿ

ಸಿಂಹ:- ನಿಮ್ಮ ಉದಾಸೀನ ಪ್ರವೃತ್ತಿಯಿಂದಾಗಿ ಆರೋಗ್ಯದಲ್ಲಿ ಅಡ್ಡ ಪರಿಣಾಮ ಎದುರಿಸಬೇಕಾಗುವುದು. ಕೂಡಲೇ ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ. ಆದಷ್ಟು ನಿಮ್ಮ ಪಾಡಿಗೆ ನೀವಿರುವುದು ಎಲ್ಲಾ ದೃಷ್ಟಿಯಿಂದ ಹಿತ. ಪರರ ಚಿಂತೆ ಪರದಾಡುವಂತೆ ಮಾಡುವುದು. ಬಂಧುಗಳ ಆಗಮನ ವಿಶೇಷವಾಗಿ ನಡೆಯಲಿದ್ದು, ಮನೆಯಲ್ಲಿ ಹಬ್ಬದ ವಾತಾವರಣ ಮೂಡಲಿದೆ. ಊಟೋಪಚಾರದಲ್ಲಿ ಅಜೀರ್ಣದ ಸಮಸ್ಯೆಗಳು ಕಾಣಬಹುದು. ಯಾರಾದರೂ ಸಲಹೆ ಕೇಳಿದಲ್ಲಿ ಮಾತ್ರ ಸಹಕರಿಸಿರಿ.

ಕನ್ಯಾ:- ಆಗದ ಕೆಲಸಗಳನ್ನು ಮತ್ತಾರದೋ ಒತ್ತಾಯಕ್ಕೆ ಒಪ್ಪಿಕೊಂಡಲ್ಲಿ ಸಮಸ್ಯೆಗಳು ನಿಮ್ಮನ್ನು ಅಪ್ಪಿಕೊಳ್ಳಲಿವೆ. ನಿಮ್ಮ ಕೆಲಸಗಳನ್ನು ಮತ್ತೊಬ್ಬರಿಗೆ ವಹಿಸಿದಲ್ಲಿ ಅಲ್ಲೂ ತೊಂದರೆಗಳು ತಪ್ಪಿದ್ದಲ್ಲ. ಪ್ರತಿಯೊಂದನ್ನು ಕೂಡಾ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ. ಮತ್ತೊಬ್ಬರಿಗೆ ಧನ ಸಹಾಯ ಮಾಡುವುದಾಗಿ ಕೊಟ್ಟ ಮಾತು ತಪ್ಪಿಹೋಗಬಹುದು. ತಂದೆ ಮಕ್ಕಳ ನಡುವೆ ಅನೇಕ ಭಿನ್ನಾಭಿಪ್ರಾಯಗಳು ಬರಲಿವೆ. ಆಸ್ತಿ ಹಂಚಿಕೆ ವಿಚಾರವನ್ನು ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

ತುಲಾ:- ಎಂಥವರೇ ಆಗಲಿ, ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಅತಿ ಬುದ್ಧಿವಂತಿಕೆಯ ಲೆಕ್ಕಾಚಾರದಿಂದಾಗಿ ಹಣಕಾಸು ನಷ್ಟವಾಗಬಹುದು ಅಥವಾ ಬೇಡದ ವಸ್ತುಗಳ ಕೊಳ್ಳುಬಾಕತನದಿಂದಾಗಿ ವಿಪರೀತ ಖರ್ಚಾಗುವುದು. ಅತಿಯಾದ ನಂಬಿಕೆಯಿಟ್ಟ ವ್ಯಕ್ತಿಯಿಂದ ಕೂಡಿಟ್ಟ ಹಣ ಪರರ ಪಾಲಾಗುವುದು. ಬೇರೆಯವರ ಮಾತಿಗೆ ಮರುಳಾಗದಿರಿ. ನಿಮ್ಮ ಸಣ್ಣ ಅಚಾತುರ್ಯದಿಂದ ಇಡೀ ಕುಟುಂಬವೇ ಕಷ್ಟ ಪಡಬೇಕಾಗುವುದು. ಪ್ರತಿಯೊಂದನ್ನು ಕೂಡಾ ಆತ್ಮ ವಿಶ್ವಾಸದಿಂದ ಎದುರಿಸಿರಿ.

ವೃಶ್ಚಿಕ:- ನಿರುದ್ಯೋಗಿ ಪದವೀಧರ ಮಗಳಿಗೆ ಉತ್ತಮ ನೌಕರಿ ದೊರೆಯಲಿದೆ. ದೇವರ ಅನುಗ್ರಹ ಹಾಗೂ ಹಿರಿಯರ ಆಶೀರ್ವಾದ ನಿಮಗೆ ಪೂರ್ಣವಿದೆ. ಇದರಿಂದ ಅಂದುಕೊಂಡ ಕೆಲಸಗಳು ಕ್ಲುಪ್ತ ಕಾಲದಲ್ಲಿ ಆಗಲಿವೆ. ಆರೋಗ್ಯ ಇಲಾಖೆಯಲ್ಲಿರುವ ವೈದ್ಯರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ವೈದ್ಯರಿಗೆ ಸಮಾಧಾನಕರ ಕಾನೂನುಗಳು ಬರುವವು. ಉದ್ಯಮಿಗಳಿಗೆ ಗುರು ಬಲವಿರುವುದರಿಂದ ಹೊಸ ಹೊಸ ಯೋಜನೆಗಳನ್ನು ಆರಂಭಿಸಲು ಈ ವಾರ ಸೂಕ್ತವಾದುದು.

ಇದನ್ನೂ ಓದಿ - ಮನೆಯಲ್ಲಿ ಬೆಳಿಗ್ಗೆ, ಸಂಜೆ Deepa ಬೆಳಗಿಸುವ ವೇಳೆ ಈ 5 ನಿಯಮಗಳನ್ನು ನೆನಪಿನಲ್ಲಿಡಿ

ಧನಸ್ಸು:- ವಿನಾಕಾರಣ ಶತ್ರು ಬಾಧೆ ನಿಮ್ಮನ್ನು ಬಾಧಿಸಲಿದೆ. ಇಲ್ಲದ ಸಮಸ್ಯೆಗಳು ನಿಮಗೆ ಸಂಬಂಧವಿಲ್ಲದಿದ್ದರೂ ಸುತ್ತಿಕೊಳ್ಳಲಿದೆ. ಸಣ್ಣ ಸಣ್ಣ ಅಡಚಣೆಗಳನ್ನು ನಿಭಾಯಿಸಲು ಅತಿ ಪ್ರಯಾಸ ಪಡುವಿರಿ. ಆಸ್ತಿ ವಿಚಾರದಲ್ಲಿ ಮತ್ತೊಬ್ಬರಿಂದ ಪ್ರೇರಿತರಾದ ಸೋದರಿಯರು ನಿಮ್ಮೊಂದಿಗೆ ಕಲಹ ಮಾಡುವ ಸಾಧ್ಯತೆ ಇರುತ್ತದೆ. ಖಾಸಗಿ ಮಹಿಳಾ ನೌಕರರಿಗೆ ಕೆಲಸದಲ್ಲಿ ಅಸ್ಥಿರತೆ ಬಾಧಿಸುವುದು. ಹೊಸ ಅವಕಾಶಗಳು ಬಂದಲ್ಲಿ ಇದ್ದ ನೌಕರಿಯನ್ನು ಬಿಡಲು ಅಡ್ಡಿ ಇಲ್ಲ. ಗುರುವಿನ ಸ್ತೋತ್ರ ಪಠಿಸುವುದು ಒಳ್ಳೆಯದು.

ಮಕರ:- ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ವಿಚಾರದಲ್ಲಿ ಉದಾಸೀನ ಸಲ್ಲದು. ವಿದೇಶ ವ್ಯಾಸಂಗದ ಇಚ್ಛೆಯಿದ್ದಲ್ಲಿ ಅದಕ್ಕೆ ಪೂರ್ವ ಸಿದ್ಧತೆ ಚೆನ್ನಾಗಿರಲಿ. ಮತ್ತೊಬ್ಬರು ಕೊಟ್ಟ ಸಲಹೆಯಲ್ಲಿ ಹಿತಾಹಿತಗಳ ಚಿಂತನೆ ಮುಂದೆ ಉಪಯೋಗಕ್ಕೆ ಬರಲಿದೆ. ಮಕ್ಕಳ ಅನಾರೋಗ್ಯದ ವಿಷಯದಲ್ಲಿ ನಿಮ್ಮ ಉದಾಸೀನವಾಗಲಿ, ಜಿಪುಣತನವಾಗಲಿ ಸಲ್ಲದು. ಅಪರಿಚಿತರೊಂದಿಗೆ ಗೆಳೆತನ ಬೆಳೆಯಲಿದ್ದು, ಅದು ನಿಮ್ಮ ವ್ಯವಹಾರಕ್ಕೆ ಸಹಾಯವಾಗುವುದು. ನಿಂತು ಹೋಗಿದ್ದ ಕೆಲಸಗಳಿಗೆ ಪುನಃ ಚಾಲನೆ ದೊರೆಯುವುದರಿಂದ ನೆಮ್ಮದಿ ಉಂಟಾಗುವುದು.

ಕುಂಭ:- ಕೆಲಸದ ನೆಪ ಹೇಳಿ ಅತಿ ದೈಹಿಕ ಶ್ರಮ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು. ಅತಿ ಸರ್ವತ್ರ ವಜ್ರ್ಯಯೇತ್‌ ಎನ್ನುವಂತೆ ಕೆಲಕಾಲ ವಿಶ್ರಾಂತಿ ಪಡೆದು ಕಾರ್ಯವನ್ನು ಮುಂದುವರೆಸಿರಿ. ಕೈಗೊಂಡ ಹೊಸ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಸಾಧ್ಯವಾದಲ್ಲಿ ಕುಲದೇವತಾ ಸೇವೆಯಿಂದ ನಿಯೋಜಿತ ಕಾರ್ಯಗಳಲ್ಲಿ ಸಾಫಲ್ಯವನ್ನು ಹೊಂದಬಹುದು. ಕೃಷಿಕ ಮಿತ್ರರಿಗೆ ಬಿಡುವಿಲ್ಲದ ಕೆಲಸ ಬರುವುದು. ಬಾಕಿ ಬರಬೇಕಾದ ಹಣ ಬರುವುದು.

ಮೀನ:- ಕಚೇರಿಯಲ್ಲಿ ಕೆಲಸ ಮಾಡುವ ನೌಕರರಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆರ್ಥಿಕ ಸಂಸ್ಥೆಗಳಿಂದ ಸಹಾಯ ಹಸ್ತ ದೊರೆಯುವುದು. ಅದು ಸದುಪಯೋಗವಾಗುವಂತೆ ನೋಡಿಕೊಳ್ಳಿರಿ. ಮಂಗಳ ಕಾರ್ಯಗಳು ಪೂರ್ವ ನಿಗದಿತವಾಗಿದ್ದಲ್ಲಿ ಅವು ನಿರ್ವಿಘ್ನವಾಗಿ ನೆರವೇರಲಿವೆ. ಸ್ನೇಹಿತರೊಂದಿಗೆ ನಡೆಸಲಿರುವ ಚರ್ಚೆ ನಿಮಗೆ ವ್ಯವಹಾರದಲ್ಲಿ ಉಪಯೋಗವಾಗುವುದು. ಮಕ್ಕಳ ಪ್ರಗತಿ ಮುದ ನೀಡಲಿದೆ.

ಇದನ್ನೂ ಓದಿ - Mercury Retrograde 2021: ಬುಧ ಗ್ರಹದ ರಾಶಿ ಪರಿವರ್ತನೆಯಿಂದ ಯಾವ ರಾಶಿಗೆ ಶುಭ, ಯಾರಿಗೆ ಅಶುಭ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News