Good luck: ಅದೃಷ್ಟ ಕೈ ಹಿಡಿಯುತ್ತಿಲ್ವೇ ಅದಕ್ಕೆ ಇಲ್ಲಿದೆ ಪರಿಹಾರ!

ನದಿ, ಕೊಳ, ಕಲ್ಯಾಣಿಗಳಿಗೆ ಹೋಗಿ ಮೀನುಗಳಿಗೆ ಹಿಟ್ಟಿನ ಉಂಡೆಗಳನ್ನು ನಿಯಮಿತವಾಗಿ ನೀಡಿದರೆ ನಿಮ್ಮ ಗುರಿಗಳನ್ನು ತಲುಪುವ ಮಾರ್ಗ ಸುಲಭವಾಗುತ್ತದೆ.

Last Updated : Apr 4, 2021, 03:46 PM IST
  • ನಸೀಬು ಸರಿ ಇಲ್ಲ ಎಂದರೆ ಶ್ರೀಮಂತನೂ ತಿರುಕನಾಗುತ್ತಾನೆ
  • ದೇವರ ಮನೆಯಲ್ಲಿರುವ ಮೂರ್ತಿ, ಫೋಟೊಗಳನ್ನು ಪ್ರತಿದಿನ ತಾಜಾ ಹೂವುಗಳಿಂದ ಅಲಂಕರಿಸಬೇಕು.
  • ನದಿ, ಕೊಳ, ಕಲ್ಯಾಣಿಗಳಿಗೆ ಹೋಗಿ ಮೀನುಗಳಿಗೆ ಹಿಟ್ಟಿನ ಉಂಡೆಗಳನ್ನು ನಿಯಮಿತವಾಗಿ ನೀಡಿದರೆ ನಿಮ್ಮ ಗುರಿಗಳನ್ನು ತಲುಪುವ ಮಾರ್ಗ ಸುಲಭವಾಗುತ್ತದೆ.
Good luck: ಅದೃಷ್ಟ ಕೈ ಹಿಡಿಯುತ್ತಿಲ್ವೇ ಅದಕ್ಕೆ ಇಲ್ಲಿದೆ ಪರಿಹಾರ! title=

ಎಲ್ಲದಕ್ಕೂ ಅದೃಷ್ಟ ಸರಿಯಾಗಿರಬೇಕು, ಹಣೆಬರಹ ಸರಿಯಾಗಿರಬೇಕು ಎಂದು ದೊಡ್ಡವರು ಹೇಳುತ್ತಾರೆ. ನಸೀಬು ಸರಿ ಇಲ್ಲ ಎಂದರೆ ಶ್ರೀಮಂತನೂ ತಿರುಕನಾಗುತ್ತಾನೆ ಎನ್ನುವ ಮಾತನ್ನು ಕೂಡ ಕೇಳಿರಬಹುದು. ಇದಕ್ಕೆಲ್ಲ ಪರಿಹಾರ ಕೂಡ ಇದೆ. 

ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಎರಡೂ ಅಂಗೈಗಳನ್ನು ಕೆಲವು ನಿಮಿಷಗಳ ಕಾಲ ನೋಡಿ. ಅದಕ್ಕೂ ಮುನ್ನ ಮೂರು ಬಾರಿ ಪರಸ್ಪರ ಅಂಗೈಗಳನ್ನು ತಿಕ್ಕಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ(Laxmi), ಸರಸ್ವತಿ ಹಾಗೂ ವಿಷ್ಣುವಿನ ಕೃಪೆಗೆ ನೀವು ಪಾತ್ರರಾಗುತ್ತೀರಿ. ಅಂಗೈನಲ್ಲಿ ಈ ಮೂರೂ ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗಿದೆ. ಬೆಳಗ್ಗೆ ಎದ್ದಕೂಡಲೇ ಈ ಮೂವರನ್ನು ನೆನೆಯುವುದರಿಂದ ನಿಮ್ಮ ದಿನದ ಆರಂಭ ಚೆನ್ನಾಗಿರುತ್ತದೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.

ಈ ಐದು ಸಂಕೇತಗಳು ಎದುರಾದರೆ ಧನ ಪ್ರಾಪ್ತಿಯಾಗುತ್ತದೆಯಂತೆ ..!

ದೇವರ ಮನೆ(God Room)ಯಲ್ಲಿರುವ ಮೂರ್ತಿ, ಫೋಟೊಗಳನ್ನು ಪ್ರತಿದಿನ ತಾಜಾ ಹೂವುಗಳಿಂದ ಅಲಂಕರಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ದೇವರು ಮತ್ತು ದೇವತೆಗಳು ಸಂತಸಗೊಂಡು ಅದೃಷ್ಟ ಒಲಿಯುವಂತೆ ಮಾಡುತ್ತಾರೆ ಎಂದು ನಂಬಲಾಗಿದೆ. ಇರುವೆಗಳಿಗೆ ಪ್ರತಿದಿನ ಸಕ್ಕರೆಯನ್ನು ನೀಡಿ. ಇದರಿಂದ ನಿಮ್ಮ ಪಾಪ ಕಾರ್ಯಗಳು ನಾಶವಾಗಿ ದೇವರ ಅನುಗ್ರಹದಿಂದ ನೀವು ಪಾಪಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತೀರಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

Daily Horoscope: ದಿನಭವಿಷ್ಯ 04-04-2021 Today astrology

ನದಿ(River), ಕೊಳ, ಕಲ್ಯಾಣಿಗಳಿಗೆ ಹೋಗಿ ಮೀನುಗಳಿಗೆ ಹಿಟ್ಟಿನ ಉಂಡೆಗಳನ್ನು ನಿಯಮಿತವಾಗಿ ನೀಡಿದರೆ ನಿಮ್ಮ ಗುರಿಗಳನ್ನು ತಲುಪುವ ಮಾರ್ಗ ಸುಲಭವಾಗುತ್ತದೆ. ನಿಮ್ಮ ಯವ್ವನವು ಮರುಕಳಿಸುತ್ತದೆ. ಯಾವ ವ್ಯಕ್ತಿಯು ಈ ರೀತಿ ಮಾಡುತ್ತಾನೋ ಅಂತಹ ವ್ಯಕ್ತಿಗೆ ಕೆಲವೇ ದಿನಗಳಲ್ಲಿ ಅದೃಷ್ಟವು ಪ್ರಾಪ್ತಿಯಾಗುತ್ತದೆ.

Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?

ನೀವು ಜ್ಯೋತಿಷ್ಯ(Astrology)ವನ್ನು ನಂಬುವುದಾದರೆ ನಿಮ್ಮ ಯಶಸ್ಸಿನ ಬಗ್ಗೆ ನೀವು ಎಂದಿಗೂ ಹೆಮ್ಮೆ ಪಡಬೇಡಿ. ಬದಲಾಗಿ, ಪ್ರತಿಯೊಂದು ಸಾಧನೆಯನ್ನು ದೇವರ ಅನುಗ್ರಹ ಎಂದು ಭಾವಿಸಿ. ಇದಲ್ಲದೆ ಬಡವರಿಗೆ ಮತ್ತು ದುರ್ಬಲರಿಗೆ ಸಹಾಯ ಮಾಡಬೇಕು. ಹಸಿವಿನಿಂದ ಬಳಲುತ್ತಿರುವ ನಿರ್ಗತಿಕ ಜನರಿಗೆ ಆಹಾರವನ್ನು ನೀಡಬೇಕು. ನಿಮ್ಮ ಕೈಲಾದಷ್ಟು ದಾನ - ಧರ್ಮವನ್ನು ಮಾಡಿ ಇದರಿಂದ ಮತ್ತಷ್ಟು ಅದೃಷ್ಟ ನಿಮ್ಮೊಂದಿಗೆ ಸಾಗುತ್ತದೆ.

Jupiter Transit: 13 ತಿಂಗಳ ನಂತರ ಗುರು ರಾಶಿ ಪರಿವರ್ತನೆ, ಯಾವ ರಾಶಿಗೆ ಅದೃಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News