Money Remedies: ಹಣದ ನಷ್ಟ ತಪ್ಪಿಸಿ ಆರ್ಥಿಕ ಪ್ರಗತಿ ಹೊಂದಲು ಸಹಾಯಕ ಕಪ್ಪು ಎಳ್ಳಿನ ಈ ಟ್ರಿಕ್ಸ್

Black Sesame Tricks: ಕಪ್ಪು ಎಳ್ಳಿನ ಉಪಾಯವು ವ್ಯರ್ಥ ಖರ್ಚನ್ನು ತಡೆಯುತ್ತದೆ. ಇದಲ್ಲದೆ, ಹಣದ ನಷ್ಟವನ್ನು ತಡೆಯುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ, ಕಪ್ಪು ಎಳ್ಳಿನ ಈ ಉಪಾಯವನ್ನು ಅನುಸರಿಸುವುದರಿಂದ ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಸಮಸ್ಯೆಗಳೂ ದೂರವಾಗುತ್ತವೆ. 

Written by - Yashaswini V | Last Updated : Jan 21, 2022, 01:57 PM IST
  • ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಪ್ಪು ಎಳ್ಳು ಪರಿಹಾರ
  • ಇದರಿಂದ ಉದ್ಯೋಗ-ವ್ಯವಹಾರದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ
  • ಅಷ್ಟೇ ಅಲ್ಲದೆ ದುಂದುವೆಚ್ಚದಿಂದಲೂ ಪರಿಹಾರ ದೊರೆಯುತ್ತದೆ
Money Remedies: ಹಣದ ನಷ್ಟ ತಪ್ಪಿಸಿ ಆರ್ಥಿಕ ಪ್ರಗತಿ ಹೊಂದಲು ಸಹಾಯಕ ಕಪ್ಪು ಎಳ್ಳಿನ ಈ ಟ್ರಿಕ್ಸ್ title=
Money remedies

Black Sesame Tricks: ಕೆಲವು ಮನೆಗಳಲ್ಲಿ ಹಣವು ನೀರಿನಂತೆ ಖರ್ಚಾಗುತ್ತದೆ. ಎಷ್ಟೇ ಯೋಚಿಸಿದರೂ ದುಂದುವೆಚ್ಚವನ್ನು ತಪ್ಪಿಸಲು ಸಾಧ್ಯವಾಗುವುದೇ ಇಲ್ಲ. ವಾಸ್ತವವಾಗಿ, ಇದು ರಾಹುವಿನ ದುಷ್ಪರಿಣಾಮಗಳು ಮತ್ತು ಶನಿಯ ಕೆಟ್ಟ ದಶಾದಿಂದಾಗಿ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಪ್ಪು ಎಳ್ಳಿನ ಟ್ರಿಕ್ ಹಣದ ನಷ್ಟವನ್ನು ತಡೆಯಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. 

ವ್ಯರ್ತ ಖರ್ಚನ್ನು ತಪ್ಪಿಸಲು ಕಪ್ಪು ಎಳ್ಳಿನ ಅದ್ಭುತ ತಂತ್ರಗಳನ್ನು ತಿಳಿಯಿರಿ:
ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರದಿದ್ದರೆ ಅಥವಾ ಹಣ ಉಳಿತಾಯವಾಗದಿದ್ದರೆ, ಬೆಳಿಗ್ಗೆ ಸ್ನಾನ ಮಾಡಿದ ನಂತರ ತಾಮ್ರದ ಪಾತ್ರೆಯಲ್ಲಿ ಗಂಗಾಜಲವನ್ನು ಹೊಂದಿರುವ ಶುದ್ಧ ನೀರನ್ನು ತುಂಬಿಸಿ ಅದರಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಶಿವಲಿಂಗಕ್ಕೆ ಅರ್ಪಿಸಿ. ಶಿವಲಿಂಗಕ್ಕೆ ನೀರನ್ನು ಅರ್ಪಿಸುವಾಗ, ನಿಮ್ಮ ಮನಸ್ಸಿನಲ್ಲಿ ಓಂ ಸಾಂಬ ಸದಾಶಿವಾಯ ನಮಃ ಎಂದು ಜಪಿಸಿ. ಪ್ರತಿದಿನ ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಸಮಸ್ಯೆಗಳೂ (Financial Problems) ದೂರವಾಗುತ್ತವೆ. 

ಇದನ್ನೂ ಓದಿ- Sugar Remedies: ಬೆಟ್ಟದಂತಹ ಸಮಸ್ಯೆಯನ್ನೂ ಸುಲಭವಾಗಿ ಪರಿಹರಿಸುತ್ತೆ ಸಕ್ಕರೆಯ ಈ ಸುಲಭ ಉಪಾಯ

ಮನೆಯಲ್ಲಿ ಎಷ್ಟೇ ಹಣ ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದಾದರೆ, ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಮನೆಯ ಮಾಳಿಗೆಯ ಮೇಲೆ ಒಂದು ಹಿಡಿ ಕಪ್ಪು ಎಳ್ಳನ್ನು ಹಾಕಿ. ಪಕ್ಷಿಗಳು ಎಳ್ಳನ್ನು ತಿಂದರೆ ಬಡತನವೂ ಮನೆಯಿಂದ ದೂರವಾಗುತ್ತದೆ ಎಂದು ನಂಬಲಾಗಿದೆ. ಸೂರ್ಯೋದಯಕ್ಕೆ ಮುನ್ನ ಎಳ್ಳಿನ ಈ ಉಪಾಯವನ್ನು ಮಾಡಿದರೆ ಲಾಭದಾಯಕ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮತ್ತು ಪಿತೃದೋಷದ (Pitru Dosh) ಕೆಟ್ಟ ಸ್ಥಿತಿಯಿಂದ ಹಣವನ್ನು ಅನಗತ್ಯವಾಗಿ ಖರ್ಚು ಮಾಡಲಾಗುತ್ತದೆ. ಸಾಕಷ್ಟು ಪ್ರಯತ್ನ ಮಾಡಿದರೂ ದುಂದುವೆಚ್ಚದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಸ್ಯೆಯನ್ನು ಹೋಗಲಾಡಿಸಲು, ಹರಿಯುವ ನೀರಿನಲ್ಲಿ ಕಪ್ಪು ಎಳ್ಳನ್ನು ಹಾಕಬೇಕು. 

ಇದನ್ನೂ ಓದಿ- ಕಣ್ಣುಗಳೇ ಹೇಳುತ್ತದೆ ನಿಮ್ಮ ಅದೃಷ್ಟ , ಹೀಗಿದೆಯೇ ನಿಮ್ಮ ಅಕ್ಷಿ ಒಮ್ಮೆ ನೋಡಿಕೊಳ್ಳಿ

ನೀವು ಹಣಕಾಸಿನ ಕೆಲಸಕ್ಕಾಗಿ ಹೊರಗೆ ಹೋಗಬೇಕಾದರೆ ಮತ್ತು ಅದರಲ್ಲಿ ಯಶಸ್ಸನ್ನು ಪಡೆಯಬೇಕಾದರೆ, ಮನೆಯ ಹೊರಗೆ ನಾಯಿಗೆ ಒಂದು ಹಿಡಿ ಕಪ್ಪು ಎಳ್ಳನ್ನು ಹಾಕಿ. ನಾಯಿಯು ಈ ಎಳ್ಳನ್ನು ತಿಂದರೆ, ನಿಮ್ಮ ಹಣಕಾಸಿನ ಕೆಲಸವು ಪೂರ್ಣಗೊಳ್ಳುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News