Shani Dev: 24 ಗಂಟೆಗಳ ನಂತರ ಈ ರಾಶಿಗಳಿಗೆ ಕೆಟ್ಟ ಸಮಯ ಪ್ರಾರಂಭವಾಗಲಿದೆ!

Shani Rise 2023: ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಫಲ ನೀಡುತ್ತಾನೆ. ಒಳ್ಳೆಯ ಕೆಲಸ ಮಾಡುವವರಿಗೆ ಶನಿದೇವನ ಆಶೀರ್ವಾದವಿರುತ್ತದೆ, ಕೆಟ್ಟ ಕೆಲಸ ಮಾಡುವವರು ಶನಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ.

Written by - Puttaraj K Alur | Last Updated : Mar 4, 2023, 01:25 PM IST
  • ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಫಲ ನೀಡುತ್ತಾನೆ
  • ಮಾರ್ಚ್ 5ರ ರಾತ್ರಿ ಶನಿಯು ತನ್ನದೇಯಾದ ರಾಶಿ ಕುಂಭದಲ್ಲಿ ಉದಯಿಸಲಿದ್ದಾನೆ
  • ಶನಿ ದೇವನ ಉದಯದಿಂದ ಕೆಲವು ರಾಶಿಯವರ ಜೀವನದ ಮೇಲೆ ಕೆಟ್ಟ ಪರಿಣಾಮವುಂಟಾಗಲಿದೆ
Shani Dev: 24 ಗಂಟೆಗಳ ನಂತರ ಈ ರಾಶಿಗಳಿಗೆ ಕೆಟ್ಟ ಸಮಯ ಪ್ರಾರಂಭವಾಗಲಿದೆ! title=
ಈ ರಾಶಿಯ ಜನರು ಜಾಗರೂಕರಾಗಿರಬೇಕು

ನವದೆಹಲಿ: ಜ್ಯೋತಿಷ್ಯದಲ್ಲಿ ಶನಿ ದೇವನಿಗೆ ವಿಶೇಷ ಸ್ಥಾನವಿದೆ. ಶನಿ ದೇವನನ್ನು ನ್ಯಾಯ ಮತ್ತು ಕರ್ಮದ ಫಲದಾತನೆಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಫಲ ನೀಡುತ್ತಾನೆ. ಒಳ್ಳೆಯ ಕೆಲಸ ಮಾಡುವವರಿಗೆ ಶನಿದೇವನ ಆಶೀರ್ವಾದವಿರುತ್ತದೆ, ಕೆಟ್ಟ ಕೆಲಸ ಮಾಡುವವರು ಶನಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ.

ಮಾರ್ಚ್ 5ರ ರಾತ್ರಿ ಶನಿಯು ತನ್ನದೇಯಾದ ರಾಶಿ ಕುಂಭದಲ್ಲಿ ಉದಯಿಸಲಿದ್ದಾನೆ. ಯಾವುದೇ ಗ್ರಹದ ಉದಯವು ಎಲ್ಲಾ ರಾಶಿಗಳ ಮೇಲೆ ಮಂಗಳಕರ ಪರಿಣಾಮ ಬೀರುತ್ತದೆಯಾದರೂ, ಕೆಲವು ರಾಶಿಯವರು ಈ ಅವಧಿಯಲ್ಲಿ ಜಾಗರೂಕರಾಗಿರಬೇಕು. ಯಾವ ರಾಶಿಯವರಿಗೆ ಈ ಸಮಯ ಕೆಟ್ಟದಾಗಿರುತ್ತದೆ ಎಂದು ತಿಳಿಯಿರಿ.  

ಇದನ್ನೂ ಓದಿ: Shani Uday In Kumbha: ಕುಂಭ ರಾಶಿಯಲ್ಲಿ ಶನಿ ಉದಯ, ಈ 5 ರಾಶಿಯವರಿಗೆ ದೊಡ್ಡ ಗಂಡಾಂತರ!

ಈ ರಾಶಿಯ ಜನರು ಜಾಗರೂಕರಾಗಿರಬೇಕು

ಜ್ಯೋತಿಷ್ಯದ ಪ್ರಕಾರ ಯಾವುದೇ ಗ್ರಹದ ಉದಯವು ಎಲ್ಲಾ ರಾಶಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಈ ಅವಧಿಯಲ್ಲಿ ಕೆಲವರ ಕಷ್ಟಗಳು ಹೆಚ್ಚಾಗಲಿವೆ. ಈ ಸಮಯದಲ್ಲಿ ಮಕರ, ಕುಂಭ ಮತ್ತು ಧನು ರಾಶಿಯವರಿಗೆ ಶನಿಯು ಏಳೂವರೆ ವರ್ಷಗಳ ಕಾಲ ಹಾದುಹೋಗುತ್ತದೆ ಮತ್ತು ಮಿಥುನ ಮತ್ತು ತುಲಾ ರಾಶಿಯ ಜನರು ಶನಿಯ ಕಷ್ಟಗಳಿಂದ ಬಳಲುತ್ತಾರೆ. ಈ ಸಮಯದಲ್ಲಿ ಶನಿಯ ಉದಯದಿಂದ ಈ ರಾಶಿಯ ಜನರು ಹೆಚ್ಚು ಜಾಗರೂಕರಾಗಿರಬೇಕು.

ಶನಿ ಉದಯದಿಂದ ಈ ಪ್ರಭಾವ ಇರುತ್ತದೆ

ಶನಿಯ ಉದಯದ ಕಾರಣ ಅನೇಕ ರಾಶಿಯ ಜನರು ಎಚ್ಚರಿಕೆಯಿಂದ ಇರಬೇಕು. ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡಿದ್ರೂ ವ್ಯಕ್ತಿಗೆ ಉತ್ತಮ ಫಲಿತಾಂಶ ಸಿಗುವುದಿಲ್ಲ. ಈ ಸಮಯದಲ್ಲಿ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ಈ ಅವಧಿಯಲ್ಲಿ ಸಾಲ ನೀಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ನೀವು ನಷ್ಟ ಅನುಭವಿಸಬಹುದು. ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಅಷ್ಟೇ ಅಲ್ಲ ವ್ಯಾಪಾರ ಮತ್ತು ಕೆಲಸದ ಸ್ಥಳದಲ್ಲಿ ಅದೃಷ್ಟ ನಿಮ್ಮ ಪರವಾಗಿರುವುದಿಲ್ಲ. ಈ ಅವಧಿಯಲ್ಲಿ ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಈ ಸಮಯದಲ್ಲಿ ನೀವು ದೊಡ್ಡ ಹೂಡಿಕೆಯನ್ನು ತಪ್ಪಿಸಿ. ನೀವು ಕಾನೂನು ಪ್ರಕರಣದಲ್ಲಿ ಸಿಕ್ಕಿಬೀಳಬಹುದು. ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ.

ಇದನ್ನೂ ಓದಿ: Holi 2023 : ಹೋಳಿ ಹಬ್ಬದಂದು ಈ 2 ಬಣ್ಣದ ಬಟ್ಟೆ ಧರಿಸಬೇಡಿ, ಮನೆಯಲ್ಲಿ ದುಷ್ಟ ಶಕ್ತಿಗಳ ಸಮಾಗಮವಾಗುತ್ತೆ

ಈ ಪರಿಹಾರ ಕ್ರಮ ಮಾಡಿ

ಶನಿಯ ಸಾಡೇ ಸಾತಿ ಮತ್ತು ಧೈಯಾವನ್ನು ತಪ್ಪಿಸಲು ಹನುಮಂತನ ಆರಾಧನೆಯು ಪ್ರಯೋಜನಕಾರಿ. ಹನುಮಂತನ ಆರಾಧನೆಯಿಂದ ಶನಿಯ ಅಶುಭ ಪರಿಣಾಮಗಳನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ. ಹನುಮಂತನ ಭಕ್ತರ ಮೇಲೆ ಶನಿದೇವನು ಕೆಟ್ಟ ದೃಷ್ಟಿ ಬೀರುವುದಿಲ್ಲವೆಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಿ ಮತ್ತು ಭಗವಾನ್ ಸೀತಾರಾಮನ ನಾಮವನ್ನು ಪಠಿಸಬೇಕು.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News