Shani Sade Sati Upay: ಸಾಡೇ ಸಾತಿ ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

Shani Sade Sati Upay: ಪ್ರತಿಯೊಬ್ಬ ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಶನಿ ಫಲ ನೀಡುತ್ತಾನೆ. ಒಳ್ಳೆಯ ಕೆಲಸ ಮಾಡುವವರಿಗೆ ಶುಭ ಫಲಗಳು ಸಿಗುತ್ತವೆ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆಯಾಗುತ್ತದೆ. 

Written by - Yashaswini V | Last Updated : Feb 27, 2022, 12:56 PM IST
  • ಶನಿದೇವನ ಕ್ರೋಧಕ್ಕೆ ಮನುಷ್ಯರಷ್ಟೇ ಅಲ್ಲ ದೇವತೆಗಳೂ ನಡುಗುತ್ತಾರೆ.
  • ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ.
  • ಪ್ರತಿಯೊಬ್ಬ ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಶನಿ ಫಲ ನೀಡುತ್ತಾನೆ.
Shani Sade Sati Upay: ಸಾಡೇ ಸಾತಿ ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ title=
Shani Sade Sati Upay

Shani Sade Sati Upay: ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕವನ್ನು ಇಡುವ ಕರ್ಮ ಫಲದಾತ ಶನಿದೇವನು ಪ್ರತಿಯೊಬ್ಬ ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಫಲ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿ ಒಳ್ಳೆಯ ಕೆಲಸ ಮಾಡುವವರಿಗೆ ಶುಭ ಫಲಗಳನ್ನು ಮತ್ತು ಕೆಟ್ಟ ಕೆಲಸ ಮಾಡುವವರಿಗೆ ಅಶುಭ ಫಲಗಳನ್ನು ನೀಡುತ್ತಾನೆ. ಶನಿದೇವನ ಕ್ರೋಧಕ್ಕೆ ಮನುಷ್ಯರಷ್ಟೇ ಅಲ್ಲ ದೇವತೆಗಳೂ ನಡುಗುತ್ತಾರೆ. 

ವ್ಯಕ್ತಿಯ ಜಾತಕದಲ್ಲಿ ಶನಿ ದೋಷದಿಂದಾಗಿ (Shani Dosh), ಅವರು ಮಾನಸಿಕ, ದೈಹಿಕ ಮತ್ತು ಆರ್ಥಿಕ ಹಾನಿಯನ್ನು ಅನುಭವಿಸುವ ಸಾಧ್ಯತೆಯಿದೆ. ಅದರಲ್ಲೂ ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಸಾಡೇ ಸಾತಿ ಪ್ರಭಾವ ನಡೆಯುತ್ತಿದ್ದರೆ, ಅಂತಹ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ- ಮಹಾಶಿವರಾತ್ರಿ: ಭಕ್ತಿಯಿಂದ ಈ ಕೆಲಸ ಮಾಡಿದರೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ

ಸಾಡೇ ಸಾತಿ ಶನಿಯ ಪ್ರಭಾವವು (Shani Sade Sati Effects) ಮೂರು ಹಂತಗಳಲ್ಲಿ ನಡೆಯುತ್ತದೆ. ಅದೇ ಸಮಯದಲ್ಲಿ, ಶನಿ ದೈಯಾವು ಎರಡೂವರೆ ವರ್ಷಗಳವರೆಗೆ ಇರುತ್ತದೆ. ಶನಿವಾರ ಶನಿ ದೇವರಿಗೆ ಸಮರ್ಪಿಸಲಾಗಿದೆ. ಹಾಗಾಗಿ ಶನಿವಾರದಂದು ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ನಂತರ ವ್ಯಕ್ತಿಗೆ ಶನಿ ಸಾಡೇ ಸತಿಯಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Phalguna Amavasya 2022: ಫಾಲ್ಗುಣ ಅಮಾವಾಸ್ಯೆಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ!

ಸಾಡೇ ಸಾತಿ ಶನಿಯಿಂದ ಮುಕ್ತಿ ಪಡೆಯಲು ಪರಿಹಾರ:
>> ಶನಿ ದೋಷವನ್ನು ತೊಡೆದುಹಾಕಲು ಮತ್ತು ಶನಿದೇವನ ಆಶೀರ್ವಾದ ಪಡೆಯಲು, ಮನೆಯಲ್ಲಿ ಶಮಿ ಮರವನ್ನು ನೆಡಿ. ಬೆಳಿಗ್ಗೆ ಮತ್ತು ಸಂಜೆ ನಿಯಮಿತವಾಗಿ ಮರವನ್ನು ಪೂಜಿಸಿ. ಶನಿ ದೇವನು ಶಮಿ ವೃಕ್ಷದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಅವುಗಳನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ತೊಂದರೆಗಳು ದೂರವಾಗುತ್ತವೆ. 
>> ಪ್ರತಿ ಶನಿವಾರದಂದು ಶನಿದೇವನಿಗೆ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳಿನಿಂದ ಪೂಜಿಸುವುದು ಧಾರ್ಮಿಕ ನಂಬಿಕೆಯಾಗಿದೆ. ಇದರೊಂದಿಗೆ ಶನಿ ಚಾಲೀಸವನ್ನು ಪಠಿಸುವುದು ಪ್ರಯೋಜನಕಾರಿ. 
>> ಪ್ರತಿ ಶನಿವಾರ ಶನಿದೇವನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದರಿಂದಲೂ ಶನಿ ದೋಷದಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ.
>> ಧಾರ್ಮಿಕ ಗ್ರಂಥಗಳಲ್ಲಿ ಶನಿದೇವನು ಒಮ್ಮೆ ಹನುಮನ ಭಕ್ತರಿಗೆ ತಾನು ತೊಂದರೆ ನೀಡುವುದಿಲ್ಲ ಎಂದು ವರ ನೀಡಿದ್ದನಂತೆ. ಅದರಂತೆ, ಹನುಮಂತನ ಆರಾಧನೆಯಿಂದ ಶನಿ ದೋಷ ನಿವಾರಣೆಯಾಗುತ್ತದೆ. ಹನುಮಾನ್ ಚಾಲೀಸವನ್ನು ನಿಯಮಿತವಾಗಿ ಪಠಿಸುವುದರಿಂದ, ವ್ಯಕ್ತಿಯು ಶನಿ ದೋಷದಿಂದ ಮುಕ್ತನಾಗಿರುತ್ತಾನೆ. 
>> ಭಗವಾನ್ ಶಿವನನ್ನು ಪೂಜಿಸಿದರೂ ಸಹ ಸಾಡೇ ಸಾತಿ ಶನಿಯ ತೊಂದರೆ ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಶನಿವಾರದಂದು ಶಿವ ಚಾಲೀಸಾ ಮತ್ತು ಮಹಾಮೃತ್ಯುಂಜಯವನ್ನು ಪಠಿಸಿ. ಹೀಗೆ ಮಾಡುವುದರಿಂದ ವ್ಯಕ್ತಿಯು ಶನಿ ದೋಷದಿಂದ ಶೀಘ್ರ ಮುಕ್ತಿ ಹೊಂದುತ್ತಾನೆ ಎಂಬ ನಂಬಿಕೆ ಇದೆ. 

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News