ಜುಲೈ 16 ರಿಂದ ಸೂರ್ಯನಂತೆ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ

Surya Gochar 2022 Effect: ಸೂರ್ಯನ ಈ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಗೋಚರಿಸುತ್ತದೆ. ಆದರೆ, ಇದರ ಪರಿಣಾಮವು ಕೆಲವು ರಾಶಿಯವರಿಗೆ ಶುಭವಾಗಿರುತ್ತದೆ.   

Written by - Ranjitha R K | Last Updated : Jul 4, 2022, 11:43 AM IST
  • ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
  • ಕರ್ಕಾಟಕ ರಾಶಿಗೆ ಪ್ರವೇಶಿಸಲಿರುವ ಸೂರ್ಯ
  • ಮೂರು ರಾಶಿಯವರಿಗೆ ಭಾರೀ ಶುಭ
 ಜುಲೈ 16 ರಿಂದ  ಸೂರ್ಯನಂತೆ ಬೆಳಗಲಿದೆ  ಈ ಮೂರು ರಾಶಿಯವರ  ಅದೃಷ್ಟ  title=
Surya Gochar 2022 Effect (file photo)

ಬೆಂಗಳೂರು : Surya Gochar 2022 Effect : ಜ್ಯೋತಿಷ್ಯದ ಪ್ರಕಾರ, ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು 30 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಜುಲೈ 16 ರಂದು, ಸೂರ್ಯ ಮತ್ತೊಮ್ಮೆ ತನ್ನ ರಾಶಿಯನ್ನು ಬದಲಿಸಿ, ಕರ್ಕಾಟಕ ರಾಶಿಗೆ  ಪ್ರವೇಶಿಸುತ್ತಾನೆ. ಆಗಸ್ಟ್ 17 ರವರೆಗೆ ಇಲ್ಲಿಯೇ ಇರುತ್ತದೆ. ಸೂರ್ಯನ ಈ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಗೋಚರಿಸುತ್ತದೆ. ಆದರೆ, ಇದರ ಪರಿಣಾಮವು ಕೆಲವು ರಾಶಿಯವರಿಗೆ ಶುಭವಾಗಿರುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನ ಈ ರಾಶಿ ಬದಲಾವಣೆಯು 3 ರಾಶಿಗಳ ಜನರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ರಾಶಿಯವರಿಗೆ ಈ ತಿಂಗಳು ಸುವರ್ಣ ಅವಕಾಶಗಳನ್ನು ತೆರೆದಿಡಲಿದೆ. ಈ ಮೂರು ರಾಶಿಯವರ ಅದೃಷ್ಟವು ಈ ತಿಂಗಳಲ್ಲಿ ಸೂರ್ಯನಂತೆ ಬೆಳಗಲಿದೆ. ಈ  ತಿಂಗಳು ಪೂರ್ತಿ ಸೂರ್ಯದೇವನ ಕೃಪೆ, ಈ ರಾಶಿಯವರ ಮೇಲಿರಲಿದೆ. 

ಇದನ್ನೂ ಓದಿ : Guru Purnima 2022: ಗುರು ಪೂರ್ಣಿಮಾ ದಿನ ನಿರ್ಮಾಣಗೊಳ್ಳುತ್ತಿವೆ 4 ಶುಭಯೋಗಗಳು, ಈ ಕೆಲಸ ಮಾಡಿ ಕಷ್ಟಗಳು ನಿವಾರಣೆಯಾಗಲಿವೆ

ಮೇಷ  : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ 16 ರಂದು ಸೂರ್ಯನು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಮೇಷ ರಾಶಿಯವರಿಗೆ ಈ ಸಂಕ್ರಮಣವು ತುಂಬಾ ಮಂಗಳಕರವಾಗಿರಲಿದೆ. ಈ ಅವಧಿಯಲ್ಲಿ ಈ ರಾಶಿಯವರಿಗೆ ಬಡ್ತಿಯಾಗಲಿದೆ. ವೇತನ ಕೂಡಾ ಹೆಚ್ಚಾಗಲಿದೆ. ಇಷ್ಟೇ ಅಲ್ಲ, ಹೊಸ ಉದ್ಯೋಗದ ಆಫರ್ ಕೂಡಾ ಸಿಗಬಹುದು. ವ್ಯಾಪಾರ, ವ್ಯವಹಾರಗಳಲ್ಲಿ ದೊಡ್ಡ ಮಟ್ಟದ ಲಾಭವಾಗಬಹುದು. 
 
ವೃಷಭ ರಾಶಿ : ವೃಷಭ ರಾಶಿಯವರಿಗೆ ಈ ಸಮಯವು ತುಂಬಾ ಮಂಗಳಕರವಾಗಿರುತ್ತದೆ. ಅದೇ ಸಮಯದಲ್ಲಿ, ಉದ್ಯೋಗದಲ್ಲಿರುವವರಿಗೆ ಈ ಅವಧಿಯಲ್ಲಿ ಹೊಸ ಉದ್ಯೋಗಾವಕಾಶ ಸಿಗಲಿದೆ. ವ್ಯಾಪಾರ ಸಂಬಂಧಿತ ಪ್ರಯಾಣದಲ್ಲಿ ಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ. 

ಇದನ್ನೂ ಓದಿ : Shani Dev: ಶನಿ ಮಹಾರಾಜನ ನೆಚ್ಚಿನ ರಾಶಿ ಯಾವುದು ಗೊತ್ತಾ? ಈ ರಾಶಿಗಳ ಜನರಿಗೆ ಶನಿ ಸತಾಯಿಸುವುದಿಲ್ಲ

ಮಿಥುನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯವರ ಅದೃಷ್ಟ ಕೂಡ ಸೂರ್ಯನಂತೆ ಹೊಳೆಯುತ್ತದೆ. ಸೂರ್ಯನ ರಾಶಿ ಬದಲಾವಣೆಯು ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಭಾರೀ ಶುಭವಾಗಿರಲಿದೆ. ಈ ಅವಧಿಯಲ್ಲಿ ಈ ರಾಶಿಯವರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ.  ಬಹಳ ದಿನಗಳಿಂದ ಸಿಲುಕಿಹಾಕಿಕೊಂಡಿರುವ  ಹಣ ಕೈ ಸೇರಿರಬಹುದು.  ಹೂಡಿಕೆ ಮಾಡಲು ಇದು ಶುಭ ಸಮಯ. ಯೋಚಿಸುವವರಿಗೆ ಲಾಭವಾಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News