ಜನ್ಮಾಷ್ಟಮಿಗೂ ಮುನ್ನ ಈ ನಾಲ್ಕು ರಾಶಿಯವರ ಮೇಲೆ ಸೂರ್ಯ ದೇವ ಹರಿಸಲಿದ್ದಾನೆ ಕೃಪಾ ಕಟಾಕ್ಷ

ಆಗಸ್ಟ್ 17 2022 ರಂದು, ಸೂರ್ಯನು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಸಿಂಹ ರಾಶಿಗೆ ಸೂರ್ಯನ ಪ್ರವೇಶವು 4 ರಾಶಿಯವರಿಗೆ ಸ್ಥಾನಮಾನ-ಹಣ-ಪ್ರತಿಷ್ಠೆ ಎಲ್ಲವನ್ನೂ ನೀಡಲಿದೆ. 

Written by - Ranjitha R K | Last Updated : Aug 12, 2022, 10:27 AM IST
  • ರಾಶಿ ಬದಲಿಸಲಿರುವ ಸೂರ್ಯ
  • ನಾಲ್ಕು ರಾಶಿಯವರುಗೆ ತರಲಿದ್ದಾನೆ ಅದೃಷ್ಟ
  • ಕೈ ಹಾಕಿದ ಎಲ್ಲಾ ಕೆಲಸಗಳಲ್ಲಿಯೂ ಸಿಗುವುದು ಯಶಸ್ಸು
ಜನ್ಮಾಷ್ಟಮಿಗೂ ಮುನ್ನ ಈ ನಾಲ್ಕು ರಾಶಿಯವರ ಮೇಲೆ ಸೂರ್ಯ ದೇವ ಹರಿಸಲಿದ್ದಾನೆ ಕೃಪಾ ಕಟಾಕ್ಷ  title=
Sun transit effect (file photo)

ಬೆಂಗಳೂರು : ಆಗಸ್ಟ್ ತಿಂಗಳ ದ್ವಿತೀಯಾರ್ಧವು 4 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಭಗವಾನ್ ಕೃಷ್ಣ ಮತ್ತು ಸೂರ್ಯ ದೇವರು ಈ ಜನರ ಮೇಲೆ ತಮ್ಮ ವಿಶೇಷ ಆಶೀರ್ವಾದ ಹರಿಸಲಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಾದ್ರಪದ ಮಾಸದ ಅಷ್ಟಮಿಯಂದು ಆಗಸ್ಟ್ 18, 2022 ರಂದು ಆಚರಿಸಲಾಗುತ್ತದೆ. ಅದಕ್ಕೂ ಒಂದು ದಿನ ಮೊದಲು ಅಂದರೆ ಆಗಸ್ಟ್ 17 2022 ರಂದು, ಸೂರ್ಯನು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಸಿಂಹ ರಾಶಿಗೆ ಸೂರ್ಯನ ಪ್ರವೇಶವು 4 ರಾಶಿಯವರಿಗೆ ಸ್ಥಾನಮಾನ-ಹಣ-ಪ್ರತಿಷ್ಠೆ ಎಲ್ಲವನ್ನೂ ನೀಡಲಿದೆ. 

ಈ ರಾಶಿಯವರ ಅದೃಷ್ಟವು ಜನ್ಮಾಷ್ಟಮಿ ದಿನದಂದು ಬೆಳಗಲಿದೆ :  
ಮೇಷ ರಾಶಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಒಂದು ದಿನ ಮುಂಚಿತವಾಗಿ ಸಂಭವಿಸುವ ಸೂರ್ಯನ ಸಂಕ್ರಮಣವು ಮೇಷ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಈ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಂತು ಹೋಗಿರುವ ಕೆಲಸಗಳು ಪ್ರಾರಂಭವಾಗುತ್ತವೆ. ಹಣವು ಪ್ರಯೋಜನಕಾರಿಯಾಗಲಿದೆ. ಪ್ರೇಮ ಜೀವನ, ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.  

ಇದನ್ನೂ ಓದಿ : ಮನೆಯ ಭಾಗ್ಯವನ್ನು ಕೂಡಾ ದೌರ್ಭಾಗ್ಯವಾಗಿ ಬದಲಾಯಿಸಿ ಬಿಡುತ್ತವೆ ಸುತ್ತ ಇರುವ ಈ ಮರ ಗಿಡ ಗಳು

ಕರ್ಕಾಟಕ: ಸೂರ್ಯನು ಇನ್ನೂ ಕರ್ಕಾಟಕ ರಾಶಿಯಲ್ಲಿದ್ದಾನೆ ಮತ್ತು ಆಗಸ್ಟ್ 17 ರಂದು,  ಕರ್ಕ ರಾಶಿಯಿಂದ ಸೂರ್ಯನ ನಿರ್ಗಮನವು ಈ ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಅವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿಯನ್ನು ಪಡೆಯಬಹುದು. ವರ್ಗಾವಣೆ, ಬಡ್ತಿ, ಹೊಸ ಕೆಲಸ ಸಿಗುವ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೂ ಲಾಭವಾಗಲಿದೆ. 

ಸಿಂಹ: ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಈ ಬದಲಾವಣೆಯು ಸಿಂಹ ರಾಶಿಯ ಜನರಿಗೆ ಶುಭವಾಗಿ ಪರಿಣಮಿಸಲಿದೆ. ಈ ಜನರು ಗೌರವವನ್ನು ಪಡೆಯಲಿದ್ದಾರೆ.  ಏನೇ ಸಮಸ್ಯೆ ಇದ್ದರೂ ಸುಲಭವಾಗಿ ಪರಿಹಾರವಾಗಲಿದೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೆ ಪರಿಹಾರ ಸಿಗುವುದು. 

ಇದನ್ನೂ ಓದಿ : Zodiac signs : ಈ ರಾಶಿಯವರು ಅದೇನೇ ಆಗಲಿ ಪ್ರೀತಿಸಿದವರನ್ನೇ ಮದುವೆಯಾಗ್ತಾರೆ!

ತುಲಾ: ತುಲಾ ರಾಶಿಯವರಿಗೆ ಸೂರ್ಯನ ಸಂಚಾರವು ಶುಭಕರವಾಗಿರುತ್ತದೆ. ಆದಾಯದ ಮೂಲ ಹೆಚ್ಚಾಗುವುದು. ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ವಿಶೇಷವಾಗಿ ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಅವರ ವ್ಯವಹಾರವು ಉತ್ತಮವಾಗಿ ನಡೆಯುತ್ತದೆ ಮತ್ತು ದೊಡ್ಡ ಆರ್ಡರ್‌ಗಳನ್ನು ಪಡೆಯುವ ಸಾಧ್ಯತೆಗಳಿವೆ. ಆರೋಗ್ಯ ಚೆನ್ನಾಗಿರುತ್ತದೆ. 

 

 ( ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News