Morning Tips: ಕಣ್ಣು ತೆರೆದ ತಕ್ಷಣ ಇವು ಕಾಣಿಸಿಕೊಂಡರೆ ಅಶುಭ, ಬಡತನದ ಸಂಕೇತ!

Unauspicious Things: ಬೆಳಗ್ಗಿನ ದಿನವನ್ನು ಒಳ್ಳೆಯದರೊಂದಿಗೆ ಪ್ರಾರಂಭಿಸಿದರೆ ವ್ಯಕ್ತಿಯ ಇಡೀ ದಿನವು ಉತ್ತಮವಾಗಿರುತ್ತದೆ. ಆದರೆ ಬೆಳಗ್ಗೆ ಕೆಲವು ಅಶುಭ ವಸ್ತುಗಳನ್ನು ನೋಡುವುದು ವ್ಯಕ್ತಿಯ ಇಡೀ ದಿನವನ್ನೇ ಹಾಳು ಮಾಡುತ್ತದೆ. ಅಲ್ಲದೆ ಇದು ಬಡತನವನ್ನು ಆಹ್ವಾನಿಸುತ್ತದೆ.

Written by - Puttaraj K Alur | Last Updated : Apr 29, 2023, 11:30 AM IST
  • ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಬೆಳಗ್ಗೆ ಕಣ್ಣು ತೆರೆದಾಗ ಕನ್ನಡಿ ನೋಡುವುದನ್ನು ತಪ್ಪಿಸಬೇಕು
  • ಕೊಳಕು ಪಾತ್ರೆಗಳನ್ನು ರಾತ್ರಿ ಅಡುಗೆಮನೆಯಲ್ಲಿ ಇಡಬಾರದು, ಇದು ಮನೆಯಲ್ಲಿ ಬಡತನ ತರುತ್ತದೆ
  • ಮನೆಯಲ್ಲಿ ಬಂದ್ ಆಗಿರುವ ಗಡಿಯಾರ ಇಟ್ಟುಕೊಳ್ಳುವುದು ಮತ್ತು ವೀಕ್ಷಿಸುವುದು ಕೂಡ ಅಶುಭ
Morning Tips: ಕಣ್ಣು ತೆರೆದ ತಕ್ಷಣ ಇವು ಕಾಣಿಸಿಕೊಂಡರೆ ಅಶುಭ, ಬಡತನದ ಸಂಕೇತ! title=
Morning Vastu Tips

ನವದೆಹಲಿ: ಮುಂಜಾನೆಯ ಆರಂಭವು ಶುಭವಾಗಿದ್ದರೆ, ವ್ಯಕ್ತಿಯ ಇಡೀ ದಿನವು ಉತ್ತಮವಾಗಿರುತ್ತದೆ. ವ್ಯಕ್ತಿಯು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಆದರೆ ಯಾವುದೇ ಒಬ್ಬ ವ್ಯಕ್ತಿ ಬೆಳಗ್ಗೆ ಕಣ್ಣು ತೆರೆದ ತಕ್ಷಣ ಕೆಲವು ವಸ್ತುಗಳನ್ನು ನೋಡಿದ್ರೆ ಅದು ಅಶುಭವೆಂದು ಪರಿಗಣಿಸಲ್ಪಡುತ್ತದೆ. ಆಗ ಆ ವ್ಯಕ್ತಿಯ ಇಡೀ ದಿನವೇ ಹಾಳಾಗುತ್ತದೆ ಅಲ್ಲದೆ ಆ ವ್ಯಕ್ತಿ ಬಡತನವನ್ನು ಎದುರಿಸಬೇಕಾಗುತ್ತದೆ.

ವಾಸ್ತುಶಾಸ್ತ್ರದಲ್ಲಿ ಇಂತಹ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಮುಂಜಾನೆ ಕೆಲವು ವಸ್ತುಗಳನ್ನು ನೋಡುವುದು ಅಶುಭ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗಾಗಿ ಯಾವುದೇ ವ್ಯಕ್ತಿಯು ಪ್ರತಿ ಕೆಲಸದಲ್ಲಿಯೂ ವೈಫಲ್ಯ ಎದುರಿಸಬೇಕಾಗುತ್ತದೆ. ಆತನಿಗೆ ಶ್ರಮದ ಪೂರ್ಣ ಫಲ ಸಿಗುವುದಿಲ್ಲ. ಅಷ್ಟೇ ಅಲ್ಲ ವ್ಯಕ್ತಿ ಮಾಡುವ ಕೆಲಸವೂ ಕೆಡತೊಡಗುತ್ತದೆ. ಇದಕ್ಕೆ ಮುಖ್ಯ ಕಾರಣ ಬೆಳಗ್ಗೆ ಎದ್ದು ಕೆಟ್ಟದ್ದನ್ನು ನೋಡುವುದು. ಬೆಳಗ್ಗೆ ಏನು ನೋಡಬಾರದು ಅನ್ನೋದರ ಬಗ್ಗೆ ತಿಳಿಯಿರಿ.

ಇದನ್ನೂ ಓದಿ: Vastu Tips: ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ನಿವಾರಿಸಿ ಬೇಗ ಶ್ರೀಮಂತರಾಗಬೇಕೆ? ಇಲ್ಲಿವೇ ಟಿಪ್ಸ್!

ನೀವು ಕಣ್ಣು ತೆರೆದಾಗ ಈ ವಸ್ತು ನೋಡಬೇಡಿ

ಕನ್ನಡಿ: ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯು ಬೆಳಗ್ಗೆ ಕಣ್ಣು ತೆರೆದಾಗ ಕನ್ನಡಿ ನೋಡುವುದನ್ನು ತಪ್ಪಿಸಬೇಕು. ಮುಂಜಾನೆ ವ್ಯಕ್ತಿಯ ದೇಹದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ, ಅದು ಮುಖದ ಮೂಲಕ ಹೊರಬರುತ್ತದೆ ಎಂಬುದು ನಂಬಿಕೆ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಕನ್ನಡಿ  ನೋಡಿದಾಗ ಆತನೊಳಗೆ ಸೇರಿಕೊಳ್ಳುತ್ತದೆ. ಹೀಗಾಗಿ ಬೆಳ್ಳಂಬೆಳಗ್ಗೆ ಎದ್ದತಕ್ಷಣ ಅಪ್ಪಿತಪ್ಪಿಯೂ ಕನ್ನಡಿಯನ್ನು ನೋಡಬಾರದು.

ಕೊಳಕು ಪಾತ್ರೆ: ಕೊಳಕು ಪಾತ್ರೆಗಳನ್ನು ರಾತ್ರಿ ಅಡುಗೆಮನೆಯಲ್ಲಿ ಇಡಬಾರದು. ಇದು ಮನೆಯಲ್ಲಿ ಬಡತನವನ್ನು ತರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಕೊಳಕು ಪಾತ್ರೆಗಳನ್ನು ಸ್ವಚ್ಛಗೊಳಿಸುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಹರಿವು ಕಡಿಮೆಯಾಗುತ್ತದೆ ಮತ್ತು ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಮಲಗುವ ಮುನ್ನ ಅಡುಗೆಮನೆ ಮತ್ತು ಅಡುಗೆಮನೆಯ ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು.

ಇದನ್ನೂ ಓದಿ: Ravi Yog 2023: ಜಾತಕದಲ್ಲಿ ಶನಿ-ದೋಷದಿಂದ ತೊಂದರೆ? ರವಿ ಯೋಗದಂದು ಈ ವಿಶೇಷ ಪರಿಹಾರ ಮಾಡಿ

ಬಂದ್ ಆದ ಗಡಿಯಾರ: ಮನೆಯಲ್ಲಿ ಬಂದ್ ಆಗಿರುವ ಗಡಿಯಾರವನ್ನು ಇಟ್ಟುಕೊಳ್ಳುವುದು ಮತ್ತು ವೀಕ್ಷಿಸುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಬೆಳಗ್ಗೆ ಎದ್ದ ನಂತರ ಬಂದ್ ಆಗಿರುವ ಗಡಿಯಾರ ನೋಡಿದ್ರೆ ಯಾವುದೇ ಒಬ್ಬ ವ್ಯಕ್ತಿಗೆ ಕೆಟ್ಟ ದಿನಗಳು ಪ್ರಾರಂಭವಾಗುತ್ತವೆ. ಕಣ್ಣು ತೆರೆದ ತಕ್ಷಣ ಮುಚ್ಚಿದ ಗಡಿಯಾರ  ನೋಡುವುದು ವ್ಯಕ್ತಿಯ ಕೆಟ್ಟ ಸಮಯವನ್ನು ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೆಳಗ್ಗೆ ಬಂದ್ ಆಗಿರುವ ಗಡಿಯಾರವನ್ನು ನೋಡುವುದನ್ನು ತಪ್ಪಿಸಬೇಕು. 

ಕ್ರೂರ ಪ್ರಾಣಿಗಳ ಫೋಟೋ: ಮನೆಯಲ್ಲಿ ಅಪ್ಪಿತಪ್ಪಿಯೂ ಕ್ರೂರ ಪ್ರಾಣಿ, ಪಕ್ಷಿಗಳ ಚಿತ್ರ ಹಾಕಬಾರದು ಎನ್ನುತ್ತಾರೆ ವಾಸ್ತುತಜ್ಞರು. ಒಂದು ವೇಳೆ ಆ ಫೋಟೋಗಳು ಮನೆಯಲ್ಲಿದ್ದರೂ ಬೆಳಗ್ಗೆ ಈ ಚಿತ್ರಗಳನ್ನು ನೋಡುವುದನ್ನು ತಪ್ಪಿಸಬೇಕು. ಯಾರಾದರೂ ಬೆಳಗ್ಗೆ ಇಂತಹ ಫೋಟೋಗಳನ್ನು ನೋಡಿದ್ರೆ ವ್ಯಕ್ತಿಯ ಇಡೀ ದಿನ ಹಾಳಾಗುತ್ತದೆ.  

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News