Money Vastu tips : 2023 ರಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ ಈ ವಾಸ್ತು ಸಲಹೆಗಳು! 

Vastu tips to attract Money : ವಾಸ್ತು ಶಾಸ್ತ್ರದ ತಜ್ಞರ ಪ್ರಕಾರ, ಮನೆಯ ಪ್ರಗತಿಗೆ ಕನ್ನಡಿ ತುಂಬಾ ಪರಿಣಾಮಕಾರಿಯಾಗಿದೆ. ಇದರೊಂದಿಗೆ, ಸರಿಯಾದ ಕನ್ನಡಿಯನ್ನು ಆಯ್ಕೆ ಮಾಡುವುದು ಸಹ ಮುಖ್ಯವಾಗಿದೆ. ಮನೆಯಲ್ಲಿರುವ ಹೊಸ ಕನ್ನಡಿಯು ಹೊಸ ವರ್ಷದಲ್ಲಿ ಹೊಸ ಸಂತೋಷವನ್ನು ಕಾಣುವಂತೆ ಮಾಡುತ್ತದೆ. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ.

Written by - Channabasava A Kashinakunti | Last Updated : Dec 9, 2022, 07:10 PM IST
  • ಈ ವರ್ಷದ (2022) ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ
  • ನಿಮ್ಮ ಆರ್ಥಿಕ ಸಮಸ್ಯೆ ತೊಡೆದು ಹಾಕಲು ವಾಸ್ತು ಸಲಹೆ
  • ಮನೆಗೆ ಹೊಸ ಕನ್ನಡಿ ತನ್ನಿ
Money Vastu tips : 2023 ರಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ ಈ ವಾಸ್ತು ಸಲಹೆಗಳು!  title=

Vastu tips to attract Money : ಈ ವರ್ಷದ (2022) ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂಬರುವ ವರ್ಷವು ತನ್ನ ಹಿಂದಿನ ವರ್ಷಕ್ಕಿಂತ ಉತ್ತಮವಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. 2022 ರಲ್ಲಿ ಕರೋನಾದಿಂದಾಗಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹಣದುಬ್ಬರದಿಂದಾಗಿ ಈ ವರ್ಷ ಹಲವು ಜನರ ಬದುಕು ಆರ್ಥಿಕ ಸಮಸ್ಯೆಯಿಂದ ಸಾಗಿದೆ. ನಿಮ್ಮ ಆರ್ಥಿಕ ಸಮಸ್ಯೆಯನ್ನು ಹೊಸ ವರ್ಷದಿಂದ ತೊಡೆದು ಹಾಕಲು, ಕೆಲವು ವಾಸ್ತು ಸಲಹೆಗಳನ್ನು ನಿಮಗಾಗಿ ತಂದಿದ್ದವೇ ಇಲ್ಲಿವೆ. ಇದು ನಿಮ್ಮ ಸಂಪತ್ತನ್ನು ಹೆಚ್ಚಿಸುವುದಲ್ಲದೆ, ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತದೆ.

ಮನೆಯ ಮುಖ್ಯ ಗೇಟಿನ ಮೇಲೆ ಕುದುರೆ ಪಾದರಕ್ಷೆ (ಹಾರ್ಸ್‌ಶೂ) ಹಾಕಿ

ವಾಸ್ತು ಶಾಸ್ತ್ರದಲ್ಲಿ ಕುದುರೆ ಪಾದರಕ್ಷೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮನೆಯಾದ್ಯಂತ ಧನಾತ್ಮಕ ಶಕ್ತಿ ಹರಡುತ್ತದೆ. ಇದು ಮನೆಯಲ್ಲಿ ಸಂತೋಷವನ್ನು ತರುತ್ತದೆ. ಮನೆಯ ಮುಖ್ಯ ಗೇಟ್ ಮೇಲೆ ಕುದುರೆಗಾಡಿ ಹಾಕುವುದರಿಂದ ಕಪ್ಪು ಶಕ್ತಿಗಳು ಮನೆಯಿಂದ ದೂರ ಉಳಿಯುತ್ತವೆ.

ಇದನ್ನೂ ಓದಿ : Garuda Purana : ಈ ವಿಶೇಷ ಗುಣಗಳಿರುವ ಪತ್ನಿ ಸಿಕ್ಕರೆ ಪುರುಷರು ತುಂಬಾ ಅದೃಷ್ಟವಂತರು!

ಮನೆಗೆ ಹೊಸ ಕನ್ನಡಿ ತನ್ನಿ 

ವಾಸ್ತು ಶಾಸ್ತ್ರದ ತಜ್ಞರ ಪ್ರಕಾರ, ಮನೆಯ ಪ್ರಗತಿಗೆ ಕನ್ನಡಿ ತುಂಬಾ ಪರಿಣಾಮಕಾರಿಯಾಗಿದೆ. ಇದರೊಂದಿಗೆ, ಸರಿಯಾದ ಕನ್ನಡಿಯನ್ನು ಆಯ್ಕೆ ಮಾಡುವುದು ಸಹ ಮುಖ್ಯವಾಗಿದೆ. ಮನೆಯಲ್ಲಿರುವ ಹೊಸ ಕನ್ನಡಿಯು ಹೊಸ ವರ್ಷದಲ್ಲಿ ಹೊಸ ಸಂತೋಷವನ್ನು ಕಾಣುವಂತೆ ಮಾಡುತ್ತದೆ. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ.

ಮನೆಯಲ್ಲಿ ಬಿದಿರು ಗಿಡ ನೆಡಿ

ವಾಸ್ತು ಶಾಸ್ತ್ರದ ತಜ್ಞರು ಬಿದಿರಿನ ಸಸ್ಯವು ದೀರ್ಘಾಯುಷ್ಯಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳುತ್ತಾರೆ. ಈ ವರ್ಷದ ಆರಂಭದಲ್ಲಿ ಬಿದಿರಿನ ಗಿಡವನ್ನು ಮನೆಗೆ ತನ್ನಿ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಬಿದಿರು ಗಿಡ ಮನೆಯ ಧನಾತ್ಮಕ ಶಕ್ತಿಯನ್ನು ಕಾಪಾಡುತ್ತದೆ. ಇದರೊಂದಿಗೆ, ಇದು ಮನೆಯಲ್ಲಿ ಸಂಪತ್ತನ್ನು ಆಕರ್ಷಿಸುತ್ತದೆ.

ಇದನ್ನೂ ಓದಿ : Samudrik Shastra : ನಿಮ್ಮ ಉಗುರುಗಳ ಮೇಲೆ ಬಿಳಿ ಗುರುತುಗಳಿವೆಯೇ? ಹಾಗಿದ್ರೆ ಅದರ ಅರ್ಥ ಏನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News