ಬಹಳ ಅದ್ಭುತವಾಗಿದೆ ವ್ಯಾಪಾರ & ಉದ್ಯೋಗದಲ್ಲಿ ಪ್ರಗತಿ ಸಾಧಿಸುವ ‘ಕಾಳಿ ಗುಂಜ’ದ ಚಮತ್ಕಾರ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಗುಂಜಾಳದ ಮಾಲೆಯನ್ನು ಧರಿಸುವುದರಿಂದ ದೃಷ್ಟಿ ದೋಷಗಳು ಬರುವುದಿಲ್ಲ. ಕಾಳಿ ಗುಂಜವನ್ನು ಮಾಲೆ, ಬಳೆ ರೂಪದಲ್ಲಿ ಧರಿಸಬಹುದು.

Written by - Zee Kannada News Desk | Last Updated : Jan 4, 2022, 08:05 PM IST
  • ಜ್ಯೋತಿಷ್ಯದಲ್ಲಿ ಕಾಳಿ ಗುಂಜದ ತಂತ್ರಗಳನ್ನು ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ
  • ಕಪ್ಪು ಗುಂಜಾಳದ ಮಾಲೆಯನ್ನು ಧರಿಸುವುದರಿಂದ ಮನುಷ್ಯನಿಗೆ ಸಂತೋಷ ಮತ್ತು ನೆಮ್ಮದಿ ಸಿಗುತ್ತದಂತೆ
  • ಕಾಳಿ ಗುಂಜದ ಮಾಲೆ ಧರಿಸುವುದರಿಂದ ಸಂಪತ್ತಿನ ಕೊರತೆಯುಂಟಾಗುವುದಿಲ್ಲ
ಬಹಳ ಅದ್ಭುತವಾಗಿದೆ ವ್ಯಾಪಾರ & ಉದ್ಯೋಗದಲ್ಲಿ ಪ್ರಗತಿ ಸಾಧಿಸುವ ‘ಕಾಳಿ ಗುಂಜ’ದ ಚಮತ್ಕಾರ! title=
‘ಕಾಳಿ ಗುಂಜ’ದ ಚಮತ್ಕಾರ ತಿಳಿಯಿರಿ

ನವದೆಹಲಿ: ಕಲಿಯುಗದಲ್ಲಿ ಹಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅನೇಕ ಜನರು ಹಣಕ್ಕಾಗಿ ವಿವಿಧ ರೀತಿಯ ಪರಿಹಾರ ಮತ್ತು ತಂತ್ರಗಳನ್ನು ಮಾಡುತ್ತಾರೆ. ಆದರೆ ಕೆಲವೊಮ್ಮೆ ಕೆಲ ಪರಿಹಾರಗಳು ಅಥವಾ ತಂತ್ರಗಳು ಸರಿಯಾದ ಸಮಯಕ್ಕೆ ವರ್ಕೌಟ್ ಆಗುವುದಿಲ್ಲ. ಜ್ಯೋತಿಷ್ಯದಲ್ಲಿ ಕಾಳಿ ಗುಂಜದ ತಂತ್ರ(Kali Gunja Vastu Tips)ಗಳನ್ನು ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಕಪ್ಪು ಗುಂಜಾಳದ ಮಾಲೆಯನ್ನು ಧರಿಸುವುದರಿಂದ ಮನುಷ್ಯನಿಗೆ ಸಂತೋಷ ಮತ್ತು ನೆಮ್ಮದಿ ಸಿಗುತ್ತದಂತೆ. ಇದಲ್ಲದೇ ಕಾಳಿ ಗುಂಜವು ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗಿದೆ. ಇದರ ಮಾಲೆಯು ಕಣ್ಣಿನ ದೋಷಗಳಿಂದ ನಮ್ಮನ್ನು ರಕ್ಷಿಸುತ್ತದೆ. ಯಾವುದೇ ರೀತಿಯ ಬಿಕ್ಕಟ್ಟು ಸಂಭವಿಸುವ ಮೊದಲು ಅದರ ಮಾಹಿತಿ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಕಾಳಿ ಗುಂಜದ ವಿಶೇಷ ತಂತ್ರಗಳ ಬಗ್ಗೆ ತಿಳಿಯಿರಿ.

ಇದನ್ನೂ ಓದಿ: ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದರ ಮಹತ್ವವೇನು ಗೊತ್ತೇ?

  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ಗುಂಜಾಳದ ಮಾಲೆ(Black Gunja Benefits)ಯನ್ನು ಧರಿಸುವುದರಿಂದ ದೃಷ್ಟಿ ದೋಷಗಳು ಬರುವುದಿಲ್ಲ. ಕಾಳಿ ಗುಂಜವನ್ನು ಮಾಲೆ, ಬಳೆ ರೂಪದಲ್ಲಿ ಧರಿಸಬಹುದು.
  • ಕರಿಗುಂಜದ ಮಾಲೆಗೆ ಶತ್ರುವೂ ಹೆದರುತ್ತಾನಂತೆ. ಕಪ್ಪು ಗುಂಜದ ಮಾಲೆಯನ್ನು ಧರಿಸುವುದರಿಂದ ಶತ್ರುವೂ ಮಿತ್ರನಾಗುತ್ತಾನೆ. ಇದನ್ನು ಧರಿಸುವುದರಿಂದ ಶತ್ರುವಿನ ಪ್ರಭಾವ ಕಡಿಮೆಯಾಗುತ್ತದೆ.
  • ನೀವು ಒಬ್ಬ ವ್ಯಕ್ತಿಯನ್ನು ಪಳಗಿಸಲು ಬಯಸಿದರೆ ಕರವಸ್ತ್ರದಲ್ಲಿ ಅಥವಾ ಆ ವ್ಯಕ್ತಿಯ ಬಟ್ಟೆಯಲ್ಲಿ ಪರಿಪೂರ್ಣ ಕಪ್ಪು ಗುಂಜಾ(Black Gunja Benefits)ವನ್ನು ಕಟ್ಟಬೇಕು. ಹೀಗೆ ಮಾಡಿದರೆ ಶೀಘ್ರವೇ ಅದರ ಪರಿಣಾಮ ಕಾಣಿಸಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ನೀವು ನಿಯಂತ್ರಿಸಲು ಬಯಸುವ ವ್ಯಕ್ತಿಗೆ ಕಪ್ಪು ಗುಂಜಾದ ಮಾಲೆಯನ್ನು ಧರಿಸುವಂತೆ ಹೇಳಬೇಕು.
  • 1 ತಾಮ್ರದ ನಾಣ್ಯ ಮತ್ತು ಕಪ್ಪು ಗುಂಜಾಳ ಮಾಲೆ(Kali Gunja Tricks For Business)ಯನ್ನು ಕೆಂಪು ಬಟ್ಟೆಯಲ್ಲಿ 1 ತಿಂಗಳು ಕಟ್ಟಿಕೊಳ್ಳಬೇಕು. ಇದಾದ ಬಳಿಕ ಮಧ್ಯಾಹ್ನದ ವೇಳೆ ಏಕಾಂತ ಸ್ಥಳದಲ್ಲಿ ಮೇಲಿನಿಂದ 11 ಬಾರಿ ಕೆಳಗಿಳಿಸಿ 11 ಇಂಚು ಆಳದ ಗುಂಡಿ ತೋಡಿ ಅದರಲ್ಲಿ ಹೂಳಬೇಕು. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಆರ್ಥಿಕ ಪ್ರಗತಿಯಾಗುತ್ತದೆ. ಇದಲ್ಲದೆ ನಿಮಗೆ ಹಣದ ಕೊರತೆ ಎಂದಿಗೂ ಬರುವುದಿಲ್ಲವಂತೆ.
  • ಕಾಳಿ ಗುಂಜನ ಪ್ರಭಾವದಿಂದ ಉದ್ಯೋಗ ಅಥವಾ ವ್ಯವಹಾರದಲ್ಲಿನ ಅಡೆತಡೆಗಳು ತಾನಾಗಿಯೇ ಕೊನೆಗೊಳ್ಳಲು ಪ್ರಾರಂಭಿಸುತ್ತವೆ ಎಂದು ನಂಬಲಾಗಿದೆ. ಅಲ್ಲದೆ ಮನೆಯಲ್ಲಿ ಸಂಪತ್ತಿನ ಕೊರತೆ ಎಂದಿಗೂ ಇರುವುದಿಲ್ಲ. ಹಲವೆಡೆ ನವದಂಪತಿಗಳಿಗೆ ಕಪ್ಪು ಗುಂಜ ಮಾಲೆ ಹಾಕಲಾಗುತ್ತದೆ. ಇದರಿಂದ ಅವರ ಜೀವನಕ್ಕೆ ಉತ್ತಮ ದಾರಿ ಸಿಕ್ಕಂತಾಗುತ್ತದೆ.   

ಇದನ್ನೂ ಓದಿ: ಸೂರ್ಯಾಸ್ತದ ನಂತರ ಮರೆತು ಕೂಡ ಈ ಕೆಲಸ ಮಾಡಬೇಡಿ, ಬೆನ್ನಟ್ಟಿ ಬರುತ್ತೆ ಬಡತನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News