ನಮಗೆ ಮನೆ ಮಾರೋ ಪರಿಸ್ಥಿತಿ ಬಂದಿಲ್ಲ, ಮುಂದೆ ಬರೋದು ಇಲ್ಲ - ರವಿಚಂದ್ರನ್ ಪುತ್ರ ಮನೋರಂಜನ್

Crazystar Son Manoranjan Exclusive Interview: ಜೀ ಕನ್ನಡ ನ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಕ್ರೇಜಿಸ್ಟಾರ್ ಪುತ್ರ ನಟ ಮನೋರಂಜನ್, ಚಂದನವನದ ಕ್ರೇಜಿಸ್ಟಾರ್, ಎಲ್ಲರ ನೆಚ್ಚಿನ ರವಿಮಾಮ ಮನೆ ಮಾರಿದ್ದಾರೆ ಎಂಬ ಬಗ್ಗೆಯೂ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟರು.

Written by - YASHODHA POOJARI | Edited by - Yashaswini V | Last Updated : Dec 15, 2022, 12:47 PM IST
  • ನಮ್ಮ ತಂದೆ ಸೂಪರ್ ಸ್ಟಾರ್. ಅವರು ಯಾವತ್ತಿಗೂ ಸೂಪರ್ರೆ.
  • ಸೊಸೆ ಬಂದ ಬಳಿಕ ಮನೆಯಲ್ಲಿ ತುಂಬಾ ಖುಷಿಯಿದೆ.
  • ತಮ್ಮ ಸೊಸೆ ಜೊತೆಗೆ ರವಿಮಾಮನ ಬಾಂಧವ್ಯ ಹೇಗಿದೆ ಗೊತ್ತಾ!
ನಮಗೆ ಮನೆ ಮಾರೋ ಪರಿಸ್ಥಿತಿ ಬಂದಿಲ್ಲ, ಮುಂದೆ ಬರೋದು ಇಲ್ಲ - ರವಿಚಂದ್ರನ್ ಪುತ್ರ ಮನೋರಂಜನ್  title=
Crazystar Son Manoranjan Exclusive Interview

Crazystar Son Manoranjan Exclusive Interview: ಇತ್ತೀಚಿಗೆ ಸ್ಯಾಂಡಲ್ವುಡ್ ಕನಸುಗಾರ, ಕನ್ನಡಿಗರ ನೆಚ್ಚಿನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಒಂದು ಸುದ್ದಿ ತುಂಬಾ ದೊಡ್ಡ ಮಟ್ಟದಲ್ಲಿ ಸದ್ದಾಗಿತ್ತು. ಅದೇನು ಅಂದ್ರೆ ರವಿಚಂದ್ರನ್ ಅವರಿಗೆ ಹಣದ ಸಮಸ್ಯೆಯಾಗಿ ತಾವಿದ್ದ ಕನಸಿನ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಗೆ ಹೋದ್ರು ಅಂತ. ಆ ವಿಚಾರಕ್ಕೆ ಕ್ರೇಜಿಸ್ಟಾರ್ ಕುಟುಂಬ ಕಡೆಯಿಂದ ಯಾವುದೇ ರಿಯಾಕ್ಷನ್ ಬಂದಿರಲಿಲ್ಲ. ಅರೇ ಆ ಸುದ್ದಿ ನಿಜಾನಾ ಅಂತ ಅಭಿಮಾನಿಗಳು ಕೂಡ ತುಂಬಾ ನೋವು ಅನುಭವಿಸಿದ್ದು ಇದೆ. ಆದ್ರೆ ಅದು ಶುದ್ಧ ಸುಳ್ಳು ಅನ್ನೋದು ಇತ್ತೀಚಿಗೆ ಎಲ್ಲರ ಗಮನಕ್ಕೆ ಬಂದಿತ್ತು. ಇದೀಗ ಜೀ ಕನ್ನಡ ನ್ಯೂಸ್ ಜೊತೆ Exclusive ಆಗಿ ಮಾತನಾಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಮನೆ ಬಗ್ಗೆ ಆದ ಗಾಸಿಪ್ ಬಗ್ಗೆ ಮೌನ ಮುರಿದಿದ್ದಾರೆ. 

ಜೀ ಕನ್ನಡ ನ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಕ್ರೇಜಿಸ್ಟಾರ್ ಪುತ್ರ ನಟ ಮನೋರಂಜನ್, ಚಂದನವನದ ಕ್ರೇಜಿಸ್ಟಾರ್, ಎಲ್ಲರ ನೆಚ್ಚಿನ ರವಿಮಾಮ ಮನೆ ಮಾರಿದ್ದಾರೆ ಎಂಬ ಬಗ್ಗೆಯೂ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟರು. ನಮಗೆ ಮನೆ ಮಾರೋ ಪರಿಸ್ಥಿತಿ ಬಂದಿಲ್ಲ, ಮುಂದೆ ಬರೋದು ಇಲ್ಲ. ನಮ್ಮ ತಂದೆ ಸೂಪರ್ ಸ್ಟಾರ್. ಅವರು ಯಾವತ್ತಿಗೂ ಸೂಪರ್ರೆ. ಸೋಶಿಯಲ್ ಮೀಡಿಯಾ ಈಗ ತುಂಬಾ ಸ್ಟ್ರಾಂಗ್ ಆಗಿದ್ದು ಏನೇ ಒಂದು ಸಣ್ಣ ವಿಷಯವಾದರೂ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತೆ. ಈ ವಿಷಯದಲ್ಲೂ ಅದೇ ಆಗಿದೆ ಎಂದು ಹೇಳುವ ಮೂಲಕ ಮನೆ ಮಾರಾಟದ ಗಾಸಿಪ್ ಗೆ ತೆರೆ ಎಳೆದಿದ್ದಾರೆ.  

ಇದನ್ನೂ ಓದಿ- ‘ಕ್ರಿಸ್ಟಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ವಿಕ್ರಂ ರವಿಚಂದ್ರನ್ ಮುಂದಿನ ಸಿನಿಮಾ ಬಗ್ಗೆ ಸಿಕ್ತು ಬ್ರೇಕಿಂಗ್ ನ್ಯೂಸ್:
ಇನ್ನು ಈ ವೇಳೆ ತಮ್ಮ ತಮ್ಮನ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿರುವ ಮನೋರಂಜನ್ ರವಿಚಂದ್ರನ್ ತಮ್ಮ ವಿಕ್ರಮ್ ಮುಂದಿನ ಸಿನಿಮಾಗೂ ಪ್ರೊಡ್ಯೂಸರ್ ಆಗುತ್ತಾರೆ ಅನ್ನೋ ಬ್ರೇಕಿಂಗ್ ನ್ಯೂಸ್ ಕೂಡ ಕೊಟ್ಟಿದ್ದಾರೆ. 

ಮಾವ-ಸೊಸೆ ಬಾಂಧವ್ಯ ಹೇಗಿದೆ?
ಮದ್ವೆ ಬಳಿಕ  ಮೊದಲ ಬಾರೀ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ಕ್ರೇಜಿಸ್ಟಾರ್ ಸನ್ ಮನು ಸೊಸೆ ಬಂದ ಬಳಿಕ ಮನೆಯಲ್ಲಿ ತುಂಬಾ ಖುಷಿಯಿದೆ. ನನ್ನ ಪತ್ನಿ ತಂದೆಯೊಂದಿಗೆ ತುಂಬಾ ಖುಷಿಯಾಗಿ ಇರುತ್ತಾರೆ ಅನ್ನೋ ವಿಚಾರದ ಬಗ್ಗೆಯೂ ತಿಳಿಸಿದರು.

ಇದನ್ನೂ ಓದಿ- Pathaan boycott : ಅಕ್ಷಯ್‌ ಮಾಡಿದ್ರೆ Ok ಶಾರುಖ್‌ಗೆ NO ಯಾಕೆ..? ಇಲ್ಲೂ ಇದೆ ʼಕೇಸರಿʼ...!

ಮುಂದಿನ ಚಿತ್ರಕ್ಕಾಗಿ 10 ಕೆಜಿ ತೂಕ ಇಳಿಸಿರುವ ಮನೋರಂಜನ್:
ಜನವರಿ 15ರ ನಂತರ ಮನೋರಂಜನ್ ಮುಂದಿನ ಸಿನಿಮಾ ಯಾವುದು ಅನ್ನೋದನ್ನ ಅನೌನ್ಸ್ ಮಾಡೋದಾಗಿ ತಿಳಿಸಿದ ಮನೋರಂಜನ್, ತಮ್ಮ ಮುಂದಿನ ಸಿನಿಮಾಗಾಗಿ  ಸುಮಾರು 10ಕೆಜಿ ತೂಕ ಇಳಿಸಿರುವುದಾಗಿಯೂ ಮಾಹಿತಿ ಹಂಚಿಕೊಂಡಿದ್ದಾರೆ. 

ಇಂತಹ ಸಂದರ್ಭದಲ್ಲಿ ಮಾತ್ರ ತಂದೆ ಹೆಸರು ಬಳಸಿದ್ರಂತೆ ಮನೋರಂಜನ್:
ನಾನು ಕ್ರೇಜಿಸ್ಟಾರ್ ಪುತ್ರ ಅಂತ ಎಲ್ಲೂ ಹೇಳಿಕೊಳ್ಳಲು ಬಯಸೋದಿಲ್ಲ. ಆದ್ರೆ ಕಾಲೇಜು ದಿನಗಳಲ್ಲಿ ನಮ್ಮ ಗಾಡಿಯನ್ನ ಪೊಲೀಸರು ಹಿಡಿದ್ರೆ ಹಣವಿಲ್ಲದ ಸಮಯದಲ್ಲಿ ಮಾತ್ರ ನನ್ನ ಫ್ರೆಂಡ್ಸ್ ಕ್ರೇಜಿಸ್ಟಾರ್ ಮಗ ಅಂತ ಹೇಳುತ್ತಿದ್ದರು. ಆದರೆ, ನಾವೆಂದೂ ನಮ್ಮ ಎಲ್ಲಿಯೂ ತಂದೆ ಹೆಸರನ್ನ ಬಳಸಿಕೊಳ್ಳುತ್ತಿರಲಿಲ್ಲ. ಇದಕ್ಕೆ ನಮ್ಮ ತಾಯಿ ನಮ್ಮನ್ನು ಬೆಳಸಿದ್ದ ರೀತಿಯೇ ಕಾರಣ ಅನ್ನೋದನ್ನ ತುಂಬಾ ಹೆಮ್ಮೆಯಿಂದ ಹೇಳಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News