Astro Tips: ಶನಿವಾರದಂದು ಈ ಬಣ್ಣದ ನಾಯಿಗೆ ಇಂತಹ ಆಹಾರ ನೀಡಿದರೆ ಹಣದ ಮಳೆಯನ್ನೇ ಸುರಿಸುತ್ತಾನೆ ಶನಿದೇವ!

Benefits of Black Dog: ಜ್ಯೋತಿಷ್ಯದ ಪ್ರಕಾರ, ಶನಿ ಮತ್ತು ಕೇತು ಎರಡೂ ಗ್ರಹಗಳು ಕಪ್ಪು ನಾಯಿಯ ಮೇಲೆ ಪ್ರಭಾವ ಬೀರುತ್ತವೆ. ಇದರಿಂದಾಗಿ ಎರಡೂ ಗ್ರಹಗಳು ಶಾಂತವಾಗಿರುತ್ತವೆ. ಮನೆಯ ಹೊರಗೆ, ರಸ್ತೆಯಲ್ಲಿ ಎಲ್ಲಿಯಾದರೂ ಕಪ್ಪು ಬಣ್ಣದ ನಾಯಿ ಕಂಡರೆ ಅವುಗಳಿಗೆ ಆಹಾರ ನೀಡಿ. ಹೀಗೆ ಮಾಡುವುದರಿಂದ ಶನಿದೇವನು ಸಂತೃಪ್ತನಾಗುತ್ತಾನೆ. ಜೊತೆಗೆ ಆಶೀರ್ವಾದ ನೀಡುತ್ತಾನೆ ಎಂಬುದು ನಂಬಿಕೆ.

Written by - Bhavishya Shetty | Last Updated : Mar 10, 2023, 10:23 PM IST
    • ಹೆಚ್ಚಿನ ಜನರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ.
    • ಕಪ್ಪು ನಾಯಿಯನ್ನು ಸಾಕುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಬರುವುದಿಲ್ಲ.
    • ಕಪ್ಪು ನಾಯಿ ಮನೆ ಮತ್ತು ಕುಟುಂಬ ಸದಸ್ಯರನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ
Astro Tips: ಶನಿವಾರದಂದು ಈ ಬಣ್ಣದ ನಾಯಿಗೆ ಇಂತಹ ಆಹಾರ ನೀಡಿದರೆ ಹಣದ ಮಳೆಯನ್ನೇ ಸುರಿಸುತ್ತಾನೆ ಶನಿದೇವ! title=
Black Dog

Benefits of Black Dog: ಶನಿ, ರಾಹು ಮತ್ತು ಕೇತು ಗ್ರಹಗಳು ಎಂದಿಗೂ ನಕಾರಾತ್ಮಕ ಪರಿಣಾಮಗಳನ್ನು ಬೀರಬಾರದು ಎಂದು ಪ್ರತಿಯೊಬ್ಬ ವ್ಯಕ್ತಿಯು ಆಶಿಸುತ್ತಾನೆ. ಇದೇ ಕಾರಣದಿಂದ ಜನರು ನಾನಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಈ ಮೂರು ಗ್ರಹಗಳ ಅಶುಭ ದೃಷ್ಟಿ ಇದ್ದರೆ, ವ್ಯಕ್ತಿಯು ಸಿರಿತನದಿಂದ ಬಡವನಾಗಿ ಬದುಕುವ ಕಾಲ ಬರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಇವೆಲ್ಲದರ ಹೊರತಾಗಿ ಮಾತನಾಡುವುದಾದರೆ, ಹೆಚ್ಚಿನ ಜನರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಇವುಗಳ ಮೂಲಕವೂ ನೀವು ಈ 3 ಗ್ರಹಗಳ ಅಶುಭ ದೃಷ್ಟಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರೆ ನೀವು ನಂಬುತ್ತೀರಾ?

ಇದನ್ನೂ ಓದಿ: Surya Gochar 2023 : ಸೂರ್ಯ ಗೋಚರದಿಂದ ಈ 5 ರಾಶಿಯವರಿಗೆ ಭಾರಿ ಆರ್ಥಿಕ ಲಾಭದ ಜೊತೆಗೆ, ಶ್ರೀಮಂತಿಕೆ ಭಾಗ್ಯ!

ಕಪ್ಪು ನಾಯಿಯನ್ನು ಸಾಕುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಬರುವುದಿಲ್ಲ. ಕಪ್ಪು ನಾಯಿ ಮನೆ ಮತ್ತು ಕುಟುಂಬ ಸದಸ್ಯರನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಜ್ಯೋತಿಷ್ಯದ ಪ್ರಕಾರ, ಶನಿ ಮತ್ತು ಕೇತು ಎರಡೂ ಗ್ರಹಗಳು ಕಪ್ಪು ನಾಯಿಯ ಮೇಲೆ ಪ್ರಭಾವ ಬೀರುತ್ತವೆ. ಇದರಿಂದಾಗಿ ಎರಡೂ ಗ್ರಹಗಳು ಶಾಂತವಾಗಿರುತ್ತವೆ. ಮನೆಯ ಹೊರಗೆ, ರಸ್ತೆಯಲ್ಲಿ ಎಲ್ಲಿಯಾದರೂ ಕಪ್ಪು ಬಣ್ಣದ ನಾಯಿ ಕಂಡರೆ ಅವುಗಳಿಗೆ ಆಹಾರ ನೀಡಿ. ಹೀಗೆ ಮಾಡುವುದರಿಂದ ಶನಿದೇವನು ಸಂತೃಪ್ತನಾಗುತ್ತಾನೆ. ಜೊತೆಗೆ ಆಶೀರ್ವಾದ ನೀಡುತ್ತಾನೆ ಎಂಬುದು ನಂಬಿಕೆ.

ಶನಿದೋಷ, ಶನಿಯ ಸಾಡೆಸಾತಿ ಮತ್ತು ಶನಿ ಧೈಯಾ ಇರುವವರು ಈ ಕೆಲಸವನ್ನು ತಪ್ಪದೆ ಮಾಡಬೇಕು. ಶನಿ ದೋಷವನ್ನು ತಪ್ಪಿಸಲು ಕಪ್ಪು ಬಣ್ಣದ ನಾಯಿಗಳಿಗೆ ಸಾಸಿವೆ ಎಣ್ಣೆಯೊಂದಿಗೆ ಚಪಾತಿ ಅಥಾ ಅನ್ನವನ್ನು ಆಹಾರವಾಗಿ ನೀಡಬೇಕು. ಇನ್ನು ಕಪ್ಪು ಬಣ್ಣದ ನಾಯಿಯನ್ನು ಸಾಕುವುದರಿಂದ ಅಥವಾ ಅವುಗಳ ಸೇವೆ ಮಾಡುವುದರಿಂದ, ಕಾಲಭೈರವನು ಸಂತೋಷಪಡುತ್ತಾನೆ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Shani Nakshatra Gochar 2023: ಶತಭಿಷಾ ನಕ್ಷತ್ರದಲ್ಲಿ ಶನಿಯ ಭ್ರಮಣೆ, ಈ ರಾಶಿಗಳ ಜನರು ಎಚ್ಚರಿಕೆಯಿಂದಿರಬೇಕು.. ಇಲ್ದಿದ್ರೆ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News