SC: ಎರಡು ಸಾವಿರ ರೂ.ಗಳ ನೋಟು ಬದಲಾವಣೆ ವಿರುದ್ಧ ಅರ್ಜಿ ತಿರಸ್ಕರಿಸಿದ ಸುಪ್ರೀಂ, ಕಾರಣ ಇಲ್ಲಿದೆ

Two Thousand Rupees Currency: ಗುರುತಿನ ಚೀಟಿ ತೋರಿಸದೆ ಎರಡು ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.ಈ ಅರ್ಜಿಯನ್ನು ತ್ವರಿತಗತಿಯಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ.  

Written by - Nitin Tabib | Last Updated : Jun 3, 2023, 12:45 PM IST
  • ಭ್ರಷ್ಟಾಚಾರ, ಮಾಫಿಯಾ ಅಥವಾ ದೇಶವಿರೋಧಿ ತತ್ವಗಳು 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ
  • 2000 ರೂಪಾಯಿ ನೋಟುಗಳನ್ನು ಹೊಂದಿರುವ ಸಾಧ್ಯತೆಗಳಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
  • ಇಂತಹ ಪರಿಸ್ಥಿತಿಯಲ್ಲಿ ಗುರುತಿನ ಚೀಟಿ ನೋಡದೇ ನೋಟು ಬದಲಿಸಿ ಇಂತಹ ಅಂಶಗಳು ಲಾಭ ಪಡೆಯುತ್ತಿವೆ.
  • ಬ್ಯಾಂಕ್ ಖಾತೆಯನ್ನು ಹೊಂದಿರದ ಯಾವುದೇ ಕುಟುಂಬ ಇಂದು ಭಾರತದಲ್ಲಿ ಇಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
SC: ಎರಡು ಸಾವಿರ ರೂ.ಗಳ ನೋಟು ಬದಲಾವಣೆ ವಿರುದ್ಧ ಅರ್ಜಿ ತಿರಸ್ಕರಿಸಿದ ಸುಪ್ರೀಂ, ಕಾರಣ ಇಲ್ಲಿದೆ title=

Supreme Court: ಗುರುತಿನ ಚೀಟಿ ತೋರಿಸದೆ 2000 ರೂಪಾಯಿ ನೋಟು ಬದಲಾವಣೆ ವಿರುದ್ಧದ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ತಕ್ಷಣವೇ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಷ್ಟೇ ಅಲ್ಲ ಇದು ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕಾದ ವಿಷಯವಲ್ಲ ಎಂದು ನ್ಯಾಯಾಲಯದ ರಜಾಕಾಲದ ಪೀಠ ಹೇಳಿದೆ. ಬೇಸಿಗೆ ರಜೆಯ ನಂತರ ಅರ್ಜಿದಾರರು ಮುಖ್ಯ ನ್ಯಾಯಾಧೀಶರಿಂದ ವಿಚಾರಣೆಯನ್ನು ಕೋರಬೇಕು ಎಂದು ಪೀಠ ಸೂಚಿಸಿದೆ. ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. .

ಭ್ರಷ್ಟರು ಮತ್ತು ದೇಶವಿರೋಧಿಗಳು ನೋಟುಗಳನ್ನು ಬದಲಾಯಿಸುವವರ ಗುರುತನ್ನು ಪರಿಶೀಲಿಸದೆ ಅದನ್ನು ಬದಲಾಯಿಸುವ ಮೂಲಕ ಲಾಭ ಪಡೆಯುತ್ತಿದ್ದಾರೆ ಎಂದು ಅರ್ಜಿದಾರರ ವಕೀಲ ಅಶ್ವಿನಿ ಉಪಾಧ್ಯಾಯ ಹೇಳಿದ್ದಾರೆ. ಮೇ 29 ರಂದು ದೆಹಲಿ ಹೈಕೋರ್ಟ್ ಈ ಕುರಿತುಯಾದ ಅರ್ಜಿಯನ್ನು ತಿರಸ್ಕರಿಸಿತ್ತು, ಇದೊಂದು ನೀತಿಗತ ವಿಷಯ ಎಂದು ನ್ಯಾಯಾಲಯ ಹೇಳಿದೆ  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠದ ಮುಂದೆ ತಮ್ಮ ಅರ್ಜಿಯನ್ನು ಇರಿಸಿದ ಉಪಾಧ್ಯಾಯ, ರಿಸರ್ವ್ ಬ್ಯಾಂಕ್ ನಿರ್ಧಾರವು ಅನಿಯಂತ್ರಿತವಾಗಿದೆ ಎಂದು ವಾಧಿಸಿದ್ದಾರೆ. ಅದನ್ನು ಅಂಗೀಕರಿಸುವ ಮೂಲಕ ಹೈಕೋರ್ಟ್ ತಪ್ಪು ಮಾಡಿದೆ. ಆದರೆ ನ್ಯಾಯಾಧೀಶರು ಉಪಾಧ್ಯಾಯ ಅವರ ಮನವಿಯನ್ನು ತಕ್ಷಣವೇ ಆಲಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ-Banking Frauds: ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದ ಆರ್ಬಿಐ, ಗ್ರಾಹಕರು ಏನ್ ಮಾಡ್ಬೇಕು?

3 ಲಕ್ಷ ಕೋಟಿಗೂ ಹೆಚ್ಚು ನೋಟುಗಳು ತಪ್ಪು ಕೈಯಲ್ಲಿವೆ
ಭ್ರಷ್ಟಾಚಾರ, ಮಾಫಿಯಾ ಅಥವಾ ದೇಶವಿರೋಧಿ ತತ್ವಗಳು 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 2000 ರೂಪಾಯಿ ನೋಟುಗಳನ್ನು ಹೊಂದಿರುವ ಸಾಧ್ಯತೆಗಳಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗುರುತಿನ ಚೀಟಿ ನೋಡದೇ ನೋಟು ಬದಲಿಸಿ ಇಂತಹ ಅಂಶಗಳು ಲಾಭ ಪಡೆಯುತ್ತಿವೆ. ಬ್ಯಾಂಕ್ ಖಾತೆಯನ್ನು ಹೊಂದಿರದ ಯಾವುದೇ ಕುಟುಂಬ ಇಂದು ಭಾರತದಲ್ಲಿ ಇಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಆದ್ದರಿಂದ 2000 ರೂಪಾಯಿ ನೋಟುಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಒಬ್ಬ ವ್ಯಕ್ತಿಯು ತನ್ನ ಸ್ವಂತ ಖಾತೆಯಲ್ಲಿ ಮಾತ್ರ ನೋಟುಗಳನ್ನು ಜಮಾ ಮಾಡಬಹುದು ಮತ್ತು ಬೇರೆಯವರ ಖಾತೆಯಲ್ಲಿ ಅಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.

ಇದನ್ನೂ ಓದಿ-Petrol-Diesel ಬೆಲೆಯಲ್ಲಿ ಭಾರಿ ಇಳಿಕೆ, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯೇ ಇದಕ್ಕೆ ಕಾರಣ

ದೆಹಲಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಅರ್ಜಿಯನ್ನು ವಿರೋಧಿಸಿತು. ರಿಸರ್ವ್ ಬ್ಯಾಂಕ್ ಪರವಾಗಿ ಹಾಜರಾದ ಹಿರಿಯ ವಕೀಲ ಪರಾಗ್ ತ್ರಿಪಾಠಿ, 1981 ರ 'ಆರ್ ಕೆ ಗಾರ್ಗ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ' ಪ್ರಕರಣದ ನಿರ್ಧಾರವನ್ನು ಉಲ್ಲೇಖಿಸಿದರು. ಹಣಕಾಸು ಮತ್ತು ಹಣಕಾಸು ನೀತಿಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಂತಿಲ್ಲ ಎಂಬುದು ಅವರ ವಾದವಾಗಿತ್ತು. ನೋಟುಗಳನ್ನು ಬಿಡುಗಡೆ ಮಾಡುವುದು ಮತ್ತು ಹಿಂಪಡೆಯುವುದು ರಿಸರ್ವ್ ಬ್ಯಾಂಕ್‌ನ ಹಕ್ಕು ಎಂದು ತ್ರಿಪಾಠಿ ಹೇಳಿದ್ದರು. ಇದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು ಎಂದು ಅವರು ಹೇಳಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News