ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ; ಇಲ್ಲವೆ ನೋಡಿ ಸಲಹೆಗಳು

Parenting : ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಮಾತಿನಂತೆ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುವುದು ಪೋಷಕರ ಕರ್ತವ್ಯ. ಮಕ್ಕಳು ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದರೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಅಗತ್ಯ. ಹಾಗಾದರೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಏನು ಮಾಡಬೇಕು ಎನ್ನುವ ಸಣ್ಣ ಮಾಹಿತಿ ಇಲ್ಲಿದೆ ನೋಡಿ.  

Written by - Zee Kannada News Desk | Last Updated : Jun 3, 2023, 02:49 PM IST
  • ಮಕ್ಕಳಿಗೆ ಆತ್ಮ ವಿಶ್ವಾಸ ಬಹಳ ಮುಖ್ಯ
  • ಅದು ಹೇಗೆ ಸಾದ್ಯ ಎಂಬುದು ಪೋಷಕರ ಚಿಂತೆ.
  • ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲವು ಅಂಶಗಳು ಇಲ್ಲಿವೆ ನೋಡಿ
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ; ಇಲ್ಲವೆ ನೋಡಿ ಸಲಹೆಗಳು  title=

ಮಕ್ಕಳಿಗೆ ಆತ್ಮ ವಿಶ್ವಾಸ ಬಹಳ ಮುಖ್ಯ ಅದು ಹೇಗೆ ಸಾದ್ಯ ಎಂಬುದು ಪೋಷಕರ ಚಿಂತೆ. ಮುಖ್ಯವಾಗಿ ಮಕ್ಕಳಿಗೆ ಬೇಕಾಗಿರುವುದು ಸಂಸ್ಕಾರ, ಸಂಸ್ಕೃತಿ, ಕಷ್ಟ, ದುಡ್ಡಿನ ಕೊರತೆ, ಶಿಸ್ತು, ಎಲ್ಲವನ್ನು ಕಲಿಸಬೇಕು. ಇದರಲ್ಲಿ ಮುಖ್ಯವಾಗಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದನ್ನು ನಾವು ಕಲಿಸಬೇಕಾಗುತದೆ. ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲವು ಅಂಶಗಳು ಇಲ್ಲಿವೆ ನೋಡಿ 

ಪಾಸಿಟಿವ್‌ ಮಾತುಗಳನ್ನೇ ಆಡಿ 
ಮಕ್ಕಳ ಎದುರು ಎಂದಿಗೂ ನೆಗೆಟಿವ್‌ ಮಾತುಗಳನ್ನು ಆಡದಿರಿ ಏಕೆಂದರೆ ಅವು ಮಕ್ಕಳ ಮೇಲೆ ಋನಾತ್ಮಕ ಪರಿಣಾಮವನ್ನು ಬೀರಬಹುದು. ಮಕ್ಕಳಿಗೆ ಅತೀಯಾಗಿ ಬಿಗಿ ಅಂದರೆ ಹೆದರಿಸುವುದನ್ನು ಕಡಿಮೆ ಮಾಡಬೇಕು. ಪರೀಕ್ಷಾ ಸಮಯದಲ್ಲಿ ಪದೇ ಪದೇ ಓದು ಎಂದು ಹಿಂಸಿಸುವುದು, ಓದದಿದ್ದರೆ ಫೇಲಾಗುತ್ತಿಯಾ ಎಂದು ಭಯಪಡಿಸುವುದು. ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಮಕ್ಕಳನ್ನು ವೇದಿಕೆ ಮೇಲೆ ಕಳುಹಿಸಬೇಕು. ಕತ್ತಲೆಯಲ್ಲಿ ನಡೆದಾಡುವುದನ್ನು ಕಲಿಸಬೇಕು. ನಿರ್ಭಂದಗಳನ್ನು ಹೇರಬಾರದು.

ಇದನ್ನೂ ಓದಿ-ಅಪ್ಪಿತಪ್ಪಿಯೂ ಮನೆಯ ಹತ್ತಿರ ಈ ಗಿಡಗಳನ್ನು ನೆಡಬೇಡಿ : ದರಿದ್ರ, ಕೌಟುಂಬಿಕ ಜಗಳ ಕಟ್ಟಿಟ್ಟ ಬುತ್ತಿ

ಮಕ್ಕಳನ್ನು ಮುದ್ದು ಮಾಡುವುದಕ್ಕೆ ಮಿತಿ ಇರಲಿ
ಮಕ್ಕಳು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುವುದು ತುಂಬಾ ಕೆಟ್ಟದ್ದು. ಅಂದರೆ ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುವುದನ್ನು ಬಿಡಬೇಕು. ಏಕೆಂದರೆ ಭವಿಷ್ಯದಲ್ಲಿ ಅದೇ ಅಭ್ಯಾಸವಾಗಿಬಿಡುತ್ತದೆ. ಪ್ರತಿ ಬಾರಿ ಕೇಳಿದ್ದನ್ನು ಕೊಡಿಸಿ ಒಂದು ಬಾರಿ ಇಲ್ಲವೆಂದರೆ ಡಿಸ್ಟರ್ಬ್‌ ಆಗುತ್ತಾರೆ. ನಾವು ಬೇಡ ಎನ್ನುವುದು ಅವರಿಗೆ ಗೊತ್ತಿರಬೇಕು ಇದರಿಂದ ಮಕ್ಕಳು ತಾಳ್ಮೆಯನ್ನು ಕಲಿಯುತ್ತಾರೆ.

ಮಕ್ಕಳ ಆಯ್ಕೆಗೂ ಅವಕಾಶ ನೀಡಿ
ಬೆಳಿಗ್ಗೆ ಅಮ್ಮ ಮಾಡಿದ ತಿಂಡಿ ಬಗ್ಗೆ ಮಕ್ಕಳು ಕಿರಿಕಿರಿ ಮಾಡುವುದುಂಟು. ಇದು ಬೇಡ ಅದು ಬೇಕು ಎನ್ನವುದು ಮಕ್ಕಳ ಸಾಮಾನ್ಯ ಸ್ವಭಾವ. ಅವರಿಗೆ ಬೇಕಾದ ತಿಂಡಿಯನ್ನು ಮಾಡಿಕೊಡಿ ಇಷ್ಟಪಟ್ಟು ತಿನ್ನುತ್ತಾರೆ. 

ಇದನ್ನೂ ಓದಿ-Astro Tips: ಈ ರಾಶಿಯ ಜನರು ಕೊನೆ ಉಸಿರು ಇರುವವರೆಗೂ ದ್ವೇಷ ಹೊಂದಿರುತ್ತಾರೆ!

ಅವರ ಚಿಕ್ಕ ಪುಟ್ಟ ಜಗಳಗಳನ್ನು ಅವರೆ ಬಗೆ ಹರಿಸಿಕೊಳ್ಳಲಿ
ಶಾಲೆಯಲ್ಲಿ ಮಕ್ಕಳು ತಮ್ಮ ಸ್ನೇಹಿತರೋಂದಿಗೆ ಜಗಳವಾಡುತ್ತಾರೆ. ಅಮ್ಮನ ಮುಂದೆ ಬಂದು ಹೇಳುತ್ತಾರೆ. ಆಗ ಒಳ್ಳೆಯ ಮಾತುಗಳನ್ನಾಡುವುದು ಉತ್ತಮ. ನಿಮ್ಮ ಸ್ನೇಹವನ್ನು ನೀವೆ ಸರಿ ಮಾಡಿಕೊಳ್ಳಿ ಎಂದು ಬುದ್ದಿಬವಾದದ ಮಾತುಗಳನ್ನು ಹೇಳಿ. ಇದರಿಂದಲೇ ಅವರಿಗೆ ಮುಂದಿನ ದಿನಗಳಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳುವುದನ್ನು ಕಲಿಯುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News