ರಾಘು ಮೊದಲ ʼಸ್ಪಂದನʼ..! ಮುದ್ದಿನ ಮಡದಿಗೆ ಪ್ರೀತಿಯ ನಮನ

Vijay raghavendra : ನೆಚ್ಚಿನ ಮಡದಿಯ ಅಗಲಿಕೆಯ ನಂತರ ನಟ ವಿಜಯ್‌ ರಾಘವೇಂದ್ರ ಅವರು ಗೂಡು ತೊರೆದ ಹಕ್ಕಿಯಂತೆ, ಉಸಿರು ನಿಂತ ದೇಹದಂತೆ ಜಡವಾಗಿ ಉಳಿದುಬಿಟ್ಟಿದ್ದಾರೆ. ಮೊದಲ ಬಾರಿಗೆ ರಾಘು ವಿಡಿಯೋ ಮೂಲಕ ತಮ್ಮದೇ ಧ್ವನಿಯಲ್ಲಿ ಸ್ಪಂದನ ಅವರಿಗೆ ಪ್ರೀತಿಯ ನಮನ ಸಲ್ಲಿಸಿದ್ದಾರೆ. 

Written by - Krishna N K | Last Updated : Aug 18, 2023, 11:08 AM IST
  • ʼನಾನೆಂದೂ ನಿನ್ನವ, ಕೇವಲ ನಿನ್ನವ, ಚಿನ್ನʼ
  • ನೆಚ್ಚಿನ ಮಡದಿಯ ಅಗಲಿಕೆಗೆ ನಟ ವಿಜಯ್‌ ರಾಘವೇಂದ್ರ
  • ವಿಡಿಯೋ ಹಂಚಿಕೊಂಡು ಪ್ರೀತಿಯ ಮಡದಿ ನೆನೆದ ರಾಘು.
ರಾಘು ಮೊದಲ ʼಸ್ಪಂದನʼ..! ಮುದ್ದಿನ ಮಡದಿಗೆ ಪ್ರೀತಿಯ ನಮನ title=

Spandana Vijay raghavendra : ರಾಜ್‌ ಕುಟುಂಬದ ಸೊಸೆ, ವಿಜಯ್‌ ರಾಘವೇಂದ್ರ ಅವರ ಮುದ್ದಿನ ಮಡದಿ ಸ್ಪಂದನಾ ಅವರು ನಿಧನರಾಗಿರುವ ವಿಚಾರ ಎಲ್ಲರಿಗೂ ಗೊತ್ತು. ಪತ್ನಿಯ ಅಕಾಲಿಕ ಮರಣದ ನಂತರ ರಾಘು ಗೂಡು ತೊರೆದ ಹಕ್ಕಿಯಂತೆ, ಉಸಿರು ನಿಂತ ದೇಹದಂತೆ ಜಡವಾಗಿ ಉಳಿದುಬಿಟ್ಟಿದ್ದಾರೆ. ಹೌದು.. ಪ್ರೀತಿ ಪಾತ್ರರು ಕೆಲಕಾಲ ನಮ್ಮಿಂದ ದೂರವಾದರೂ ಸಹಿಸದ ಮನಸ್ಸು, ಅವರು ಎಂದೆಂದಿಗೂ ಬಾರದ ಊರಿಗೆ ಹೋಗಿದ್ದಾರೆ ಎನ್ನುವ ಸತ್ಯವನ್ನು ಎಂದಿಗೂ ಅರಗಿಸಿಕೊಳ್ಳುವುದಿಲ್ಲ.. ವಿಧಿಯ ಮುಂದೆ ನಾವೇಷ್ಟು.. ಅಲ್ಲವೆ..

ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್‌ 6 ಭಾನುವಾರ ಅಲ್ಲಿನ ಹೋಟೆಲ್‌ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಶಾಪಿಂಗ್‌ ಮುಗಿಸಿ ಹೋಟೆಲ್‌ ಕೊಠಡಿಗೆ ಬಂದು ನಿದ್ರೆಗೆ ಜಾರಿದ ಸ್ಪಂದನಾ ಮತ್ತೆ ಮೇಲೇಳಲೇ ಇಲ್ಲ. ಆಗಸ್ಟ್‌ 9 ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆಗಸ್ಟ್‌ 16ಕ್ಕೆ ಸ್ಪಂದನಾ ಅವರು ಅಗಲಿ 11 ದಿನಗಳಾಗಿತ್ತು. ಬೆಂಗಳೂರಿನ ನಿವಾಸದಲ್ಲಿ ಉತ್ತರ ಕ್ರಿಯೆ ವಿಧಿ ವಿಧಾನಗಳನ್ನು ಸಹ ನೆರವೇರಿಸಲಾಗಿದೆ.

 
 
 
 

 
 
 
 
 
 
 
 
 
 
 

A post shared by Vijay Raghavendra (@raagu.vijay)

ಇದನ್ನೂ ಓದಿ: ಕವಲಾ’ ಹಾಡಿಗೆ ʼಜಪಾನ್ ರಾಯಭಾರಿʼ ಡ್ಯಾನ್ಸ್ ..! ವಿಡಿಯೋ ವೈರಲ್

ಮೇಲೆ ಕುಳಿತು ಆಡಿಸುವಾತನ ಆಟದ ಮುಂದೆ ನಾವೇಲ್ಲ ಗೊಂಬೆಯಂತೆ. ಅವನು ಆಡಿಸಿದಂತೆ ನಮ್ಮ ಜೀವನ ಸಾಗುತ್ತದೆ. ಇದನ್ನ ಅರಿತು ಸಾಗಲೇಬೇಕು.. ಸಧ್ಯ ಪತ್ನಿಯ ಅಗಲಿಕೆಯ ನಂತರ ಮೊದಲ ಬಾರಿಗೆ ನಟ ವಿಜಯ್‌ ರಾಘವೇಂದ್ರ ಅವರು ವಿಡಿಯೋ ಮೂಲಕ ತಮ್ಮದೇ ಧ್ವನಿಯಲ್ಲಿ ಸ್ಪಂದನ ಅವರಿಗೆ ಪ್ರೀತಿಯ ನಮನ ಸಲ್ಲಿಸಿದ್ದಾರೆ. ಈ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ.

ʼಸ್ಪಂದನ... ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ, ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ, ನಮಗೆಂದೇ ಮಿಡಿದೆ ನಿನ್ನ ಹೃದಯವ, ನಿಲ್ಲದು ನಿನ್ನೊಂದಿಗಿನ ಕಲರವ.!, ನಾನೆಂದೂ ನಿನ್ನವ, ಕೇವಲ ನಿನ್ನವ, ಚಿನ್ನ...ʼ ಎಂದು ಭಾವುಕ ನುಡಿಗಳನ್ನಾಡಿದ್ದಾರೆ. ಒಂದು ಕ್ಷಣ ಈ ವಿಡಿಯೋ ನೋಡಿದ್ರೆ ಹೃದಯ ತುಂಬಿ ಬರುತ್ತದೆ. ರಾಘು ಅವರ ಧ್ವನಿಯಲ್ಲಿರುವ ಅಗಾಧ ನೋಡು ಅರ್ಥವಾಗುತ್ತದೆ.. ಆದ್ರೆ ಬದುಕಲೇಬೇಕು.... ಜೀವನ ಸಾಗಲೇಬೇಕು.. ಎನ್ನವುದು ಸತ್ಯ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News