ಜಯದೇವ ಆಸ್ಪತ್ರೆಯ ಐಸಿಯುಗೆ ರವಿ ಬೆಳಗೆರೆ ದಾಖಲು..!

ನಿರಂತರ ಏರಿಳಿತವಾಗುತ್ತಿರುವ ಬೆಳಗೆರೆ ಶುಗರ್ ಲೆವೆಲ್.

Last Updated : Dec 14, 2017, 02:21 PM IST
  • ಎಸಿಎಂಎಂ ನ್ಯಾಯಾಲಯ ಸೋಮವಾರ ರವಿ ಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
  • ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮಧುಸೂದನ್. ಬಿ. ಬುಧವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಜಯದೇವ ಆಸ್ಪತ್ರೆಯ ಐಸಿಯುಗೆ ರವಿ ಬೆಳಗೆರೆ ದಾಖಲು..! title=
Pic: Youtube

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ನಿನ್ನೆಯಷ್ಟೇ ಮಧ್ಯಂತರ ಜಾಮೀನು ಪಡೆದಿದ್ದ ಪತ್ರಕರ್ತ ರವಿ ಬೆಳಗೆರೆ ಇಂದು ಬೆಳಿಗ್ಗೆ ನಗರದ ಜಯದೇವ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ.

ಬೆಳಗಿನ ಉಪಹಾರದ ನಂತರ ರವಿ ಬೆಳಗೆರೆ ಅವರ ಶುಗರ್ ಲೆವೆಲ್ ತೀವ್ರವಾಗಿತ್ತು, ನಿರಂತರ ಏರಿಳಿತವಾಗುತ್ತಿರುವ ಶುಗರ್ ಲೆವೆಲ್ ನಿಂದಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಹೃದಯ ಸಂಬಂಧಿ ತೊಂದರೆ ಇರುವುದರಿಂದ ಅವರಿಗೆ ಹೃದಯ ಸಂಬಂಧ ಪಟ್ಟ ತಪಾಸಣೆ ಮಾಡುವ ಸಾಧ್ಯತೆ ಇದೆ. 

ಬುಧವಾರ ರವಿ ಬೆಳಗೆರೆಗೆ ಮಧ್ಯಂತರ ಜಾಮೀನು ಸಿಕ್ಕಿದೆಯಾದರೂ, ಅವರ ಬಿಡುಗಡೆ ಪ್ರಕ್ರಿಯೆಗಳು ಇನ್ನೂ ಪೂರ್ಣಗೊಂಡಿಲ್ಲ. ಇಂದು ಬಿಡುಗಡೆ ಪ್ರಕ್ರಿಯೆ ಕೂಡ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ. 

Trending News