Assam Incident: ಭಾರತದಲ್ಲಿ ಜನರು ಎಷ್ಟೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನ ಅಳವಡಿಸಿಕೊಂಡು ಹೋಗುತ್ತಿದ್ದರು. ಮೂಢನಂಬಿಕೆ ಹಾಗೂ ಅದರ ಆಚರಣೆಗಳಿಗೆ ಇಂದಿಗೂ ಕೂಡ ತಲೆದೂಗುತ್ತದೆ. ಈ ಮೂಢನಂಬಿಕೆಗಳ ಮೊರೆ ಹೋಗಿ ಅದೆಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡ್ರೆ ಇನ್ನು ಕೆಲವೊಮ್ಮೆ ಇಂತಹ ಮೂಡ ನಂಬಿಕೆ ಮತ್ತು ಆಚರಣೆಗಳಿಗೆ ಜನರ ಪ್ರಾಣವನ್ನ ಬಲಿ ನೀಡುತ್ತಾರೆ. ಅಸ್ಸಾಂನ ತೇಜ್ಪುರದಲ್ಲಿ ಇಂಥದ್ದೇ ಒಂದು ದಾರುಣ ಕೃತ್ಯ ನಡೆದು ಹೋಗಿದೆ.
ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ವಾಮಾಚಾರಕ್ಕೆ 30 ವರ್ಷದ ಮಹಿಳೆಯೊಬ್ಬಳ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಸುಟ್ಟು ಹಾಕಲಾಗಿದೆ. ಹೀಗೆ ಕ್ರೂರವಾಗಿ ಹತ್ಯೆಗೀಡಾದ ಮಹಿಳೆಯನ್ನು ತೇಜ್ಪುರ ಬಳಿಯ ಬನ್ಸ್ಬರಿ ಗ್ರಾಮದ ನಿವಾಸಿಯಾದ ರಾಮ್ ಕಟಿ ಎಂಬುವರ ಪತ್ನಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ: ವೈದ್ಯರೇ ಪ್ರಕರಣದಲ್ಲಿ ಶಾಮೀಲು
ಡಿಸೆಂಬರ್ 24ರ ಭಾನುವಾರ ರಾತ್ರಿ ಸರಿಸುಮಾರು 10 ಗಂಟೆಯಲ್ಲಿ ನೆರೆಹೊರೆಯ ನಿವಾಸಿಯಾದ ಸೂರಜ್ ಬಾಗ್ವಾ ಅವರ ಕುಟುಂಬ ನಾಲ್ವರ ನೆರವಿನಿಂದ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹರಿತವಾದ ಆಯುಧದಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಬಳಿಕ ಅವರನ್ನ ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಇನ್ನು ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಘಟನೆ ನಡೆದ ಸಂದರ್ಭದಲ್ಲಿ ಕೊಲೆಯಾದ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಆಕೆಯ ಇಬ್ಬರು ಪುಟ್ಟ ಮಕ್ಕಳು ಮಾತ್ರ ಮನೆಯಲ್ಲಿ ಇದ್ದರು. ಏನೂ ಅರಿಯದ ಆ ಪುಟ್ಟ ಕಂದಮ್ಮಗಳ ಮುಂದೆ ತಾಯಿಯನ್ನ ಸುಟ್ಟು ಪಾಪಿಗಳು ಆಕೆಯನ್ನು ಕೊಲೆಗೈದಿದ್ದಾರೆ.
ಇದನ್ನೂ ಓದಿ: ನಿಧಿ ಹೆಸರಲ್ಲಿ 11 ಜನರ ಹತ್ಯೆ : ಹಂತಕನ ಬಂಧನ
ಇನ್ನು ಈ ಪಾಪಿಗಳು ಯಾಕೆ ಮಾಹಿಳೆಯನ್ನ ಈ ರೀತಿ ಕೊಂದಿದ್ದಾರೆ ಅಂತ ನೋಡೋದಾದ್ರೆ, ಮಹಿಳೆ ಮಾಟ ಮಂತ್ರ ಮಾಡುತ್ತಿದ್ದಳು ಅಂತ ಆಕೆಯ ಮೇಲೆ ಶಂಕೆ ಇತ್ತು. ಇದೇ ಕಾರಣದಿಂದ ಮಹಿಳೆಯನ್ನ ಕೊಲೆ ಮಾಡಲಾಗಿದೆ ಎಂದು ಪೋಲಿಸರು ಹೇಳಿದ್ದಾರೆ.
ನಾಲ್ವರು ಆರೋಪಿಗಳ ಬಂಧನ:
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು,ಈ ಘಟನೆಗೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳನ್ನು ಅಜಯ್ ಸಂಘರ್, ಟಿಂಕೋ ಮಲ್ದಾರ್ ಮತ್ತು ಸೂರ್ಯ ಬಗ್ವಾರ್ ಎಂದು ಗುರುತಿಸಲಾಗಿದ್ದು ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತಲೆಮರಿಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಸೋನಿತ್ಪುರದ ಪೊಲೀಸ್ ವರಿಷ್ಠಾಧಿಕಾರಿ ಮಧುರಿಮಾ ದಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆ ಹಿಂದಿನ ದಿನ ಕೈ ಕೊಟ್ಟ ವರ: ಹುಡುಗನ ಮನೆ ಮುಂದೆ ಯುವತಿ ಧರಣಿ
ಈ ಭೀಕರ ಘಟನೆಯ ಹಿಂದೆ ವೈಯಕ್ತಿಕ ದ್ವೇಷದ ಹಿನ್ನೆಲೆ ಕೂಡ ಇದೆ ಎಂದು ಶಂಕಿಸಲಾಗಿದೆ. ಮಾಟಮಂತ್ರದಂತಹ ಮೂಢನಂಬಿಕೆಗಳು ಈ ಪ್ರದೇಶದಲ್ಲಿ ಇನ್ನು ಜೀವಂತವಾಗಿವೆ ಇದರಿಂದಾಗಿಯೇ ಇಂತಹ ಪ್ರಕರಣಗಳು ಇಲ್ಲಿ ನಡೆಯುತ್ತಲೇ ಇವೆ.. ಏನೇ ಆಗ್ಲಿ ಎಷ್ಟೆ ದ್ವೇಷ ಇದ್ರು ಆ ಪುಟ್ಟ ಮಕ್ಕಳ ಮುಂದೆ ತಾಯಿಯನ್ನ ಕ್ಷುಲಕ ಕಾರಣಕ್ಕೆ ಕೊಂದದ್ದು ಬಹಳ ತಪ್ಪು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.