ಸೇನಾ ಹೆಲಿಕಾಪ್ಟರ್ ಬಳಸಿ ಬಾಗಲಕೋಟೆ, ಬೆಳಗಾವಿಯ ವಿವಿಧೆಡೆ ಪ್ರವಾಹಕ್ಕೆ ಸಿಲುಕಿದ್ದ 44 ಮಂದಿ ರಕ್ಷಣೆ

ಬಾಗಲಕೋಟೆಯಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ 7 ಜನರ ರಕ್ಷಣೆ

Last Updated : Aug 9, 2019, 03:17 PM IST
ಸೇನಾ ಹೆಲಿಕಾಪ್ಟರ್ ಬಳಸಿ ಬಾಗಲಕೋಟೆ, ಬೆಳಗಾವಿಯ ವಿವಿಧೆಡೆ ಪ್ರವಾಹಕ್ಕೆ ಸಿಲುಕಿದ್ದ 44 ಮಂದಿ ರಕ್ಷಣೆ title=

ಬಾಗಲಕೋಟೆ: ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಪ್ರವಾಹಕ್ಕೆ ಸಿಲುಕಿದ್ದ 44 ಮಂದಿಯನ್ನು ಸೇನೆಯ ಮೂರು ಹೆಲಿಕಾಪ್ಟರ್ ಗಳನ್ನು ಬಳಸಿ ರಕ್ಷಿಸಲಾಗಿದೆ.

ಮುಧೋಳ ತಾಲೂಕಿನ ರೂಗಿ ಗ್ರಾಮದ ಬಳಿ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ್ದ 7 ಜನರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಇಂದು ರಕ್ಷಣೆ ಮಾಡಲಾಯಿತು.

ಬೆಳಗಾವಿಯಿಂದ ಬಂದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಈ ರಕ್ಷಣಾ ಕಾರ್ಯ ನಡೆಸಿದ್ದು, ಪ್ರವಾಹದಿಂದ ರಕ್ಷಿಸಲ್ಪಟ್ಟ ರೂಗಿ ಗ್ರಾಮಸ್ಥರು ಸೇನಾ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದ ವಿವಿಧೆಡೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇಲ್ಲಿಯವರೆಗೆ 9 ಜನರು ಸಾವನ್ನಪ್ಪಿದ್ದಾರೆ. 16875 ಜನರು ಮತ್ತು 3010 ಪ್ರಾಣಿಗಳನ್ನು ರಾಜ್ಯದಲ್ಲಿ ತೆರೆಯಲಾದ 272 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

Trending News