ಬಿಜೆಪಿ ಸರ್ಕಾರ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರಿಕತ್ವ ನೀಡಲಿದೆ- ಅಮಿತ್ ಶಾ

ಲೋಕಸಭಾ ಚುನಾವಣೆ ನಂತರ ಬಂಗಾಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎನ್‌ಆರ್‌ಸಿ ಬಗ್ಗೆ ಭೀತಿ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

Last Updated : Oct 1, 2019, 06:01 PM IST
ಬಿಜೆಪಿ ಸರ್ಕಾರ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರಿಕತ್ವ ನೀಡಲಿದೆ- ಅಮಿತ್ ಶಾ    title=
file photo

ನವದೆಹಲಿ: ಲೋಕಸಭಾ ಚುನಾವಣೆ ನಂತರ ಬಂಗಾಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎನ್‌ಆರ್‌ಸಿ ಬಗ್ಗೆ ಭೀತಿ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಅಮಿತ್ ಶಾ ಅವರು ರಾಜ್ಯದಲ್ಲಿ ಹಿಂದೂ, ಸಿಖ್ ಮತ್ತು ಜೈನರನ್ನು ನಿರಾಶ್ರಿತರು ಎಂದು ಘೋಷಿಸಿ ಅವರನ್ನು ನಾಗರಿಕರ ಪಟ್ಟಿ ಕಾರಣದಿಂದಾಗಿ ದೇಶದಿಂದ ಹೊರಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಸರ್ಕಾರವು ಒಬ್ಬ ಮುಸ್ಲಿಮೇತರ ನಿರಾಶ್ರಿತರನ್ನು ದೇಶವನ್ನು ತೊರೆಯುವಂತೆ ಒತ್ತಾಯಿಸುವುದಿಲ್ಲ' ಎಂದು ಹೇಳಿದರು.

ಎನ್ಆರ್ಸಿ ಜಾರಿಗೆ ತಂದಲ್ಲಿ ಲಕ್ಷಾಂತರ ಬಾಂಗ್ಲಾದೇಶದ ಹಿಂದೂ ನಿರಾಶ್ರಿತರನ್ನು ಹೊರಹಾಕಲಾಗುವುದು ಎಂದು ಮಮತಾ ಬಂಗಾಳದ ಜನರಿಗೆ ಹೇಳುತ್ತಿದ್ದಾರೆ. ಇದಕ್ಕಿಂತ ದೊಡ್ಡ ಸುಳ್ಳು ಇರಲಿಕ್ಕೆ ಸಾಧ್ಯವಿಲ್ಲ...ಮತ್ತು ಇದು ಆಗುವುದಿಲ್ಲ ಎಂದು ಸ್ಪಷ್ಟಪಡಿಸಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ 'ಎಂದು ಶಾ ಹೇಳಿದರು.

ಇದೇ ವೇಳೆ ಈಗಾಗಲೇ ಬಿಜೆಪಿ ಸರ್ಕಾರ 2016 ರಲ್ಲಿ ನೆರೆಯ ದೇಶಗಳಲ್ಲಿನ ಅಲ್ಪ ಸಂಖ್ಯಾತರಿಗೆ ನಾಗರಿಕತ್ವ ನೀಡುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದೆ, ಆದರೆ ಆ ಆವೃತ್ತಿ ಮಸೂದೆ ತೃಣಮೂಲ ಕಾಂಗ್ರೆಸ್ ಸಂಸದರ ಅಡ್ಡಿಪಡಿಸುವುದರಿಂದಾಗಿ ಹಿಂದುಳಿದಿದೆ. ಭಾರತೀಯ ಪೌರತ್ವಕ್ಕೆ ನಿರಾಶ್ರಿತರಿಗೆ ಅರ್ಹತೆ ನೀಡುವ ಈ ಮಸೂದೆಯನ್ನು ಎನ್‌ಆರ್‌ಸಿಗೆ ಮೊದಲು ನರೇಂದ್ರ ಮೋದಿ ಸರ್ಕಾರ ತರಲಿದೆ ಎಂದು ಶಾ ಹೇಳಿದರು.

'ಒಬ್ಬ ನಿರಾಶ್ರಿತನು ಕೂಡ ಹೊರ ಹೋಗಬೇಕಾಗಿಲ್ಲ. ಮತ್ತು ಒಬ್ಬ ನುಸುಳುಕೋರನು ಸಹ ಹಿಂದೆ ಉಳಿಯಲು ನಾವು ಅನುಮತಿಸುವುದಿಲ್ಲ 'ಎಂದು ಅವರು ಹೇಳಿದರು, ಮಮತಾ ಬ್ಯಾನರ್ಜಿ ಅವರು ಈ ಒಳ ನುಸುಳುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. “ನಾವು ಯಾವುದೇ ಒಳನುಸುಳುವವರನ್ನು ಇಲ್ಲಿ ಉಳಿಯಲು ಬಿಡುವುದಿಲ್ಲ. ನಾವು ಅವರನ್ನು ಗುರುತಿಸಿ ಹೊರಹಾಕುತ್ತೇವೆ, ”ಎಂದು  ಹೇಳಿದರು.

Trending News