ಯಾವ ಟೆಸ್ಟ್ ಗೂ ಕಾಯಬೇಕಿಲ್ಲ!ಮೈ ಮೇಲೆ ಈ ಗುರುತು ಮೂಡಿದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿ

ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಚರ್ಮವೇ  ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. 

Written by - Ranjitha R K | Last Updated : Oct 2, 2024, 02:46 PM IST
  • ಮಧುಮೇಹ ಸಾಧಾರಣ ಕಾಯಿಲೆಯಂತೆ ಕಂಡರೂ ಬಲು ಅಪಾಯಕಾರಿ.
  • ಶುಗರ್ ಹೆಚ್ಚಾಗುತ್ತಿದ್ದ ಹಾಗೆ ಬೇರೆ ಬೇರೆ ಕಾಯಿಲೆಗಳ ಪ್ರವೇಶವೂ ದೇಹದೊಳಗೆ ಆಗುತ್ತದೆ
  • ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಡರ್ಮೋಪತಿಯ ಅಪಾಯ ಕೂಡಾ ಕಾಡುತ್ತದೆ.
ಯಾವ ಟೆಸ್ಟ್ ಗೂ ಕಾಯಬೇಕಿಲ್ಲ!ಮೈ ಮೇಲೆ ಈ ಗುರುತು ಮೂಡಿದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿ  title=

ಬೆಂಗಳೂರು : ಮಧುಮೇಹ  ಸಾಧಾರಣ ಕಾಯಿಲೆಯಂತೆ ಕಂಡರೂ ಬಲು ಅಪಾಯಕಾರಿ.ರಕ್ತದಲ್ಲಿ ಶುಗರ್ ಹೆಚ್ಚಾಗುತ್ತಿದ್ದ ಹಾಗೆ ಬೇರೆ ಬೇರೆ ಕಾಯಿಲೆಗಳ ಪ್ರವೇಶವೂ ದೇಹದೊಳಗೆ ಆಗುತ್ತದೆ.ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಡರ್ಮೋಪತಿಯ ಅಪಾಯ ಕೂಡಾ ಕಾಡುತ್ತದೆ.ಇದು ಮಧುಮೇಹದಿಂದ ಉಂಟಾಗುವ ಚರ್ಮದ ಕಾಯಿಲೆಯಾಗಿದೆ.ನೀವು ನಿಮಗೆ ಮಧುಮೇಹ ಇಲ್ಲ ಎಂದುಕೊಂಡಿದ್ದು, ಚರ್ಮದ ಮೇಲೆ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಬ್ಲಡ್ ಶುಗರ್ ಖಂಡಿತಾ ಹೆಚ್ಚಾಗಿರಬಹುದು.ಹೌದು,ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಚರ್ಮವೇ  ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. 

ಮಂಡಿಯ ಚರ್ಮ : 
ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮಂಡಿಯ ಚರ್ಮದ ಮೇಲೆ ಸಣ್ಣ ಕಪ್ಪು ಮತ್ತು ಕಂದು ಬಣ್ಣದ ಗಾಯಗಳು ಕಾಣಿಸಿಕೊಳ್ಳುತ್ತವೆ.ಆ ಗಾಯಗಳು ಡರ್ಮೋಪತಿಯ ಕಾರಣದಿಂದ ಉಂಟಾಗಬಹುದು. ಈ ಲಕ್ಷಣ ಕಂಡು ಬಂದರೆ ದೀರ್ಘಕಾಲದವರೆಗೆ ನಿರ್ಲಕ್ಷಿಸಬೇಡಿ.

ಇದನ್ನೂ ಓದಿ : ಬಿಸಿ ನೀರಿಗೆ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್! ಪಥ್ಯ ಮಾತ್ರೆ ಎಲ್ಲವನ್ನೂ ಪಕ್ಕಕ್ಕಿಡಿ

ಗಾಯಗಳು ಮತ್ತು ಹುಣ್ಣುಗಳು : 
ದೇಹದಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾದಾಗ,ಚರ್ಮದ ಮೇಲೆ ಗಾಯಗಳು ಮತ್ತು ಹುಣ್ಣುಗಳು ಕಾಣಿಸಿಕೊಳ್ಳುತ್ತವೆ.ಈ ಗಾಯಗಳು ಬೇಗ ವಾಸಿಯಾಗುವುದಿಲ್ಲ. ಹೀಗಾದಾಗ ತಜ್ಞ ವೈದ್ಯರ ಸಲಹೆ ಪಡೆಯಿರಿ. 

ಸಣ್ಣ ದದ್ದುಗಳು : 
ಯಾವುದೇ ಕಾರಣವಿಲ್ಲದೆ ಚರ್ಮದ ಮೇಲೆ ಸಣ್ಣ ದದ್ದುಗಳು ಕಾಣಿಸಿಕೊಂಡರೆ ಅದು ಅಧಿಕ ರಕ್ತದ ಸಕ್ಕರೆಯ ಕಾರಣದಿಂದ ಚರ್ಮದ ಮೇಲೆ ಕಾಣಿಸಿಕೊಂಡಿರಬಹುದು. ನಿಮ್ಮ ಚರ್ಮದ ಮೇಲೆ ಕೂಡಾ ಅಂಥಹ ಚಿಹ್ನೆಗಳು ಕಾಣಿಸಿಕೊಂಡರೆ ಎಚ್ಚರ ವಹಿಸಿ. 

ನೇರಳೆ ಗುರುತುಗಳು :
ಚರ್ಮದ ಮೇಲೆ ನೇರಳೆ,ಕೆಂಪು,ಕಂದು ಅಥವಾ ಹಳದಿ ಗುರುತುಗಳು ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ.ಆ ಚಿಹ್ನೆಗಳು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು.ಈ ಚಿಹ್ನೆಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ, ಅಪಾಯ ಹೆಚ್ಚಾಗುತ್ತಲೇ ಹೋಗಬಹುದು.

ಇದನ್ನೂ ಓದಿ : ಭೋಜನದ ಬಳಿಕ ಮಜ್ಜಿಗೆ: ಈ ರೀತಿ ತಯಾರಿಸಿ ಕುಡಿದರಷ್ಟೇ ಸಿಗುತ್ತೆ ಸಂಪೂರ್ಣ ಆರೋಗ್ಯ ಪ್ರಯೋಜನ

ಫಂಗಲ್ ಇನ್ಫೆಕ್ಷನ್ : 
ಪದೇ ಪದೇ ಫಂಗಲ್ ಇನ್ಫೆಕ್ಷನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ,ಅದು  ಮಧುಮೇಹದ ಚಿಹ್ನೆಯಾಗಿರಬಹುದು.ಇದರಿಂದ ಚರ್ಮದ ಮೇಲೆ ತುರಿಕೆ ಕಾಣಿಸಿಕೊಳ್ಳಬಹುದು.ದೀರ್ಘಕಾಲದವರೆಗೆ ಅದನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News