ಗಂಡ ಲೇಟಾಗಿ ಮನೆಗೆ ಬಂದನೆಂದು ರೈಲಿಗೆ ತಲೆಕೊಟ್ಟ ಪತ್ನಿ; ಸೂಸೈಡ್‌ ಮಾಡಿಕೊಂಡ ಪತಿ!

Karwa Chauth Tragedy: ಪತ್ನಿಯ ಸಾವಿನಿಂದ ಮನನೊಂದ ಘನಶ್ಯಾಮ್ ಮನೆಗೆ ಮರಳಿದ್ದು, ಆಕೆಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

Written by - Puttaraj K Alur | Last Updated : Oct 22, 2024, 10:36 PM IST
  • ಕರ್ವಾ ಚೌತ್‌ ಹಬ್ಬದ ದಿನವೇ ನಡೆಯಿತು ಘೋರ ದುರಂತ
  • ಲೇಟಾಗಿ ಮನೆಗೆ ಬಂದ ಗಂಡನ ಜೊತೆಗೆ ಜಗಳವಾಡಿದ ಪತ್ನಿ ಆತ್ಮಹತ್ಯೆ
  • ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣು
ಗಂಡ ಲೇಟಾಗಿ ಮನೆಗೆ ಬಂದನೆಂದು ರೈಲಿಗೆ ತಲೆಕೊಟ್ಟ ಪತ್ನಿ; ಸೂಸೈಡ್‌ ಮಾಡಿಕೊಂಡ ಪತಿ! title=
ಕರ್ವಾ ಚೌತ್‌ ದಿನವೇ ಘೋರ ದುರಂತ!

Karwa Chauth Tragedy: ಕರ್ವಾ ಚೌತ್‌ ಹಬ್ಬದ ದಿನ ಲೇಟಾಗಿ ಮನೆಗೆ ಬಂದ ಗಂಡನ ಜೊತೆಗೆ ಜಗಳವಾಡಿದ ಪತ್ನಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಅಕ್ಟೋಬರ್ 20ರಂದು ಜೈಪುರದ ಹರ್ಮಾಡಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡವಳನ್ನು ಮೋನಿಕಾ (35) ಎಂದು ಗುರುತಿಸಲಾಗಿದೆ.‌

ಕರ್ವಾ ಚೌತ್‌ ಹಬ್ಬದಂದು ಪತಿ ಘನಶ್ಯಾಮ್ ಬಂಕರ್ (38) ತಡವಾಗಿ ಮನೆಗೆ ಬಂದಿದ್ದರಂತೆ. ಇದರಿಂದ ಕೋಪಿಸಿಕೊಂಡ ಮೋನಿಕಾ ಗಂಡನ ಜೊತೆಗೆ ಜಗಳ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳದ ನಂತರ ಮೋನಿಕಾಳ ಮನವೊಲಿಸಲು ಘನಶ್ಯಾಮ್ ಪ್ರಯತ್ನಿಸಿದ್ದಾನೆ. 

ಇದನ್ನೂ ಓದಿ: ಮೆಟ್ರೊ ನಿಲ್ದಾಣದ ಬಳಿ ಚಿರತೆ..! ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಆದರೆ ಮೋನಿಕಾ ಮನೆಯಿಂದ ಹೊರಬಂದು ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ನಿಯ ಸಾವಿನಿಂದ ಮನನೊಂದ ಘನಶ್ಯಾಮ್ ಮನೆಗೆ ಮರಳಿದ್ದು, ಆಕೆಯ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ಘನಶ್ಯಾಮ್ ತನ್ನ ಅಣ್ಣನಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾನೆ. ಅದರಲ್ಲಿ ʼಸಹೋದರ.. ನಾನು ಸೋತಿದ್ದೇನೆ.. ಕ್ಷಮಿಸಿ... ಗಣಪತ್ ಜಿ ಮತ್ತು ಘನಶ್ಯಾಮ್ ಕಾಂಡೆಲ್ ಅವರೊಂದಿಗೆ ಮಾತನಾಡಿ, ಅವರು ನಿಮಗೆ ಸಹಾಯ ಮಾಡುತ್ತಾರೆ. ಈಗ ನೀವು ನನ್ನ ಐಡಿಯಲ್ಲಿ ಕೆಲಸ ಮಾಡಬೇಕು.. ನನ್ನ ಪತ್ನಿ ರೈಲಿನ ಮುಂದೆ ಹಾರಿ ಸಾವನ್ನಪ್ಪಿದ್ದಾಳೆʼ ಅಂತಾ ತಿಳಿಸಿದ್ದಾನೆ.

ಇದನ್ನೂ ಓದಿ: 8th Pay Commission: ನೀವು ಸರ್ಕಾರಿ ಉದ್ಯೋಗಿಯೇ ಹಾಗಾದರೆ ನಿಮಗೊಂದು ಸಿಹಿ ಸುದ್ದಿ..! 25,000 ವರೆಗೆ ನಿಮ್ಮ ವೇತನ ಹೆಚ್ಚಳ..!

ಈ ಘಟನೆಯ ಬಗ್ಗೆ ಮಾತನಾಡಿರುವ ಜೈಪುರ ಪೊಲೀಸ್ ಅಧಿಕಾರಿ, ʼನೆಟ್‌ವರ್ಕ್ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಘನಶ್ಯಾಮ್ ಅವರು ಕರ್ವಾ ಚೌತ್‌ನಲ್ಲಿ ತಡವಾಗಿ ಮನೆಗೆ ಬಂದಿದ್ದರು, ಇದು ಅವರ ಮತ್ತು ಅವರ ಪತ್ನಿ ನಡುವೆ ಜಗಳಕ್ಕೆ ಕಾರಣವಾಯಿತು, ನಂತರ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದರು. ಘಟನೆಯ ಬಳಿಕ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News