ತ್ರಿಪುರಾದಲ್ಲಿ ಆಲಿಕಲ್ಲು ಮಳೆಯಿಂದಾಗಿ 4,200 ಜನರು ನಿರಾಶ್ರಿತ

ತ್ರಿಪುರಾದಲ್ಲಿ ಅಪ್ಪಳಿಸಿದ ಆಲಿಕಲ್ಲು ಮಳೆಯಿಂದ 5,500 ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ ಮತ್ತು ಮೂರು ಜಿಲ್ಲೆಗಳ ಒಟ್ಟು 4,200 ಜನರು ನಿರಾಶ್ರಿತರಾಗಿದ್ದಾರೆ ಎಂದು ಅಧಿಕೃತ ವರದಿ ತಿಳಿಸಿದೆ.

Last Updated : Apr 24, 2020, 07:28 PM IST
ತ್ರಿಪುರಾದಲ್ಲಿ ಆಲಿಕಲ್ಲು ಮಳೆಯಿಂದಾಗಿ 4,200 ಜನರು ನಿರಾಶ್ರಿತ title=
ಸಾಂದರ್ಭಿಕ ಚಿತ್ರ

ನವದೆಹಲಿ: ತ್ರಿಪುರಾದಲ್ಲಿ ಅಪ್ಪಳಿಸಿದ ಆಲಿಕಲ್ಲು ಮಳೆಯಿಂದ 5,500 ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ ಮತ್ತು ಮೂರು ಜಿಲ್ಲೆಗಳ ಒಟ್ಟು 4,200 ಜನರು ನಿರಾಶ್ರಿತರಾಗಿದ್ದಾರೆ ಎಂದು ಅಧಿಕೃತ ವರದಿ ತಿಳಿಸಿದೆ.

ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಮತ್ತು ಅಧಿಕಾರಿಗಳೊಂದಿಗೆ ಗುರುವಾರ ಅತಿ ಹೆಚ್ಚು ಹಾನಿಗೊಳಗಾದ ಸೆಪಹಜಾಲ ಜಿಲ್ಲೆಗೆ ಭೇಟಿ ನೀಡಿದರು. ಪಶ್ಚಿಮ ತ್ರಿಪುರ ಮತ್ತು ಖೋವಾಯಿ ಇತರ ಎರಡು ಪೀಡಿತ ಜಿಲ್ಲೆಗಳಾಗಿವೆ."ಸೆಪಾಹಿಜಲಾ, ಪಶ್ಚಿಮ ತ್ರಿಪುರ ಮತ್ತು ಖೋವಾಯ್ ಜಿಲ್ಲೆಗಳು ಎಂಬ ಮೂರು ಜಿಲ್ಲೆಗಳನ್ನು ಅಪ್ಪಳಿಸಿದ ಆಲಿಕಲ್ಲು ಮಳೆಯ ನಂತರ ಕನಿಷ್ಠ 5,000 ಮನೆಗಳಿಗೆ ತೊಂದರೆಯಾಗಿದೆ ಮತ್ತು 4,200 ಕ್ಕೂ ಹೆಚ್ಚು ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ" ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಬಿಡುಗಡೆಯಾದ ವರದಿಯಲ್ಲಿ ತಿಳಿಸಲಾಗಿದೆ.

ಸೆಪಾಹಿಜಲಾ ಜಿಲ್ಲೆಯಲ್ಲಿ ಒಟ್ಟು 12 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 1,170 ಕುಟುಂಬಗಳು ಆಶ್ರಯ ಪಡೆದಿದ್ದಾರೆ. ಜಿಲ್ಲೆಗಳಲ್ಲಿ 200 ಮನೆಗಳು ನಾಶವಾಗಿದ್ದರೆ, 5,417 ಹಾನಿಯಾಗಿದೆ ಎಂದು ವರದಿ ತಿಳಿಸಿದೆ.ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಪ್ರತಿ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ಮುಖ್ಯಮಂತ್ರಿ 5,000 ರೂ.ಗಳ ಚೆಕ್ ಗಳನ್ನು ಹಸ್ತಾಂತರಿಸಿದರು ಮತ್ತು ಅಧಿಕಾರಿಗಳು ಹಾನಿಯನ್ನು ಅಂದಾಜು ಮಾಡಿದ ನಂತರ ಆಡಳಿತದಿಂದ ಹೆಚ್ಚಿನ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದರು.

"ಸೆಪಾಹಿಜಲಾ ಜಿಲ್ಲೆಯ ಬೈದಾರ್ ಡಿಘಿ ಅಡಿಯಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಇಂದು ಭೇಟಿ ನೀಡಿದ್ದೇನೆ. ನೈಜತೆಗಳನ್ನು ಪರಿಶೀಲಿಸಿದೆ ಮತ್ತು ಸ್ಥಳೀಯ ಜನರೊಂದಿಗೆ ಸಂವಹನ ನಡೆಸಿದೆ. ತಕ್ಷಣದ ಆರ್ಥಿಕ ಸಹಾಯವನ್ನು ನೀಡಲಾಗಿದೆ.ಚಂಡಮಾರುತದಿಂದ ಪೀಡಿತ ಜನರೊಂದಿಗೆ ನಮ್ಮ ಸರ್ಕಾರ ನಿಂತಿದೆ" ಎಂದು ಡೆಬ್ ಟ್ವೀಟ್ ಮಾಡಿದ್ದಾರೆ.
 

Trending News