ಚಿತ್ರ ನಿರ್ದೇಶಕ Vidhu Vinod Chopra ವಿರುದ್ಧ ಗಂಭೀರ ಆರೋಪ ಮಾಡಿದ Chetan Bhagat

ಬಾಲಿವುಡ್ ಚಿತ್ರ 'ದಿಲ್ ಬೇಚಾರಾ'ಗೆ ಸಂಬಂಧಿಸಿದಂತೆ ಖ್ಯಾತ ಲೇಖಕ ವಿಧು ವಿನೋದ್ ಚೋಪ್ರಾ ಹಾಗೂ ಚಿತ್ರ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ ಪತ್ನಿ ಹಾಗೂ ಚಿತ್ರ ವಿಮರ್ಶಕಿ ಅನುಪಮ್ ಚೋಪಡಾ ಮಧ್ಯ ವಿವಾದ ಸೃಷ್ಟಿಯಾಗಿದೆ.

Last Updated : Jul 22, 2020, 12:15 PM IST
ಚಿತ್ರ ನಿರ್ದೇಶಕ  Vidhu Vinod Chopra ವಿರುದ್ಧ ಗಂಭೀರ ಆರೋಪ ಮಾಡಿದ Chetan Bhagat title=

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ (ಸುಶಾಂತ್ ಸಿಂಗ್ ರಜಪೂತ್) ಅವರ ಸಾವಿನ ಬಳಿಕ ಚಿತ್ರರಂಗದಲ್ಲಿ ಆತಂಕವೇ ಸೃಸ್ಥಿಯಾಗಿದೆ. ಒಂದೆಡೆ ಒಳಗಿನವ-ಹೊರನಗಿನವ ಎಂಬ ಚರ್ಚೆ ಇದ್ದರೆ, ಇನ್ನೊಂದೆಡೆ ಉದ್ಯಮದಲ್ಲಿ ನಡೆಯುತ್ತಿರುವ ಶೋಷಣೆ ಕುರಿತು ಚರ್ಚೆ ನಡೆಯುತ್ತಿವೆ. ಜನರು ಪರಸ್ಪರರ ಮೇಲೆ ಆರೋಪಗಳನ್ನು ಸುರಿಮಳೆಗೈಯ್ಯುತ್ತಿದ್ದಾರೆ. ಕಂಗನಾ ರನೌತ್ ಮತ್ತು ತಾಪ್ಸಿ ಪನ್ನು ನಡುವೆ ಟ್ವಿಟರ್ ಯುದ್ಧ ನಡೆಯುತ್ತಿದ್ದರೆ, ಅನುರಾಗ್ ಕಶ್ಯಪ್ ಕೂಡ ಯಾರನ್ನಾದರೂ ಖಂಡಿಸುತ್ತಿರುವುದು ಕಂಡುಬರುತ್ತದೆ. ಆದರೆ ಈ ನಡುವೆ ಬರಹಗಾರ ಚೇತನ್ ಭಗತ್ ಅವರ ಟ್ವೀಟ್‌ಗಳು ಭಾರಿ ಹಲ್-ಚಲ್ ಸೃಷ್ಟಿಸಿವೆ. ತಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಆಣಿ ಮಾಡಲಾಗಿತ್ತು ಎಂಬುದರ ಕುರಿತು ಚೇತನ್ ಭಗತ್ ತನ್ನ ಟ್ವೀಟ್ ನಲ್ಲಿ ಹೇಳಿದ್ದಾರೆ.

Sushant's last film releases this week. I want to tell the snob and elitist critics right now, write sensibly. Don't act oversmart. Don't write rubbish. Be fair and sensible. Don't try your dirty tricks. You have ruined enough lives. Now stop. We'll be watching.

— Chetan Bhagat (@chetan_bhagat) July 21, 2020

ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬರುವ ಚಿತ್ರ 'ದಿಲ್ ಬೆಚರಾ' ಕುರಿತಂತೆ ಚೇತನ್ ಭಗತ್ ಹಾಗೂ ವಿಧು ವಿನೋದ್ ಚೋಪ್ರಾ ಅವರ ಪತ್ನಿ ಮತ್ತು ಚಲನಚಿತ್ರ ವಿಮರ್ಶಕಿ ಅನುಪಮ್ ಚೋಪ್ರಾ ಮಧ್ಯೆ ಇದೀಗ ವಿವಾದ ಸೃಷ್ಟಿಯಾಗಿದೆ. ಈ ಚರ್ಚೆಯ ಮಧ್ಯೆ, ಅನುಪಮ್ ಅವರ ಪತಿ ಮತ್ತು ನಿರ್ದೇಶಕ ವಿಧು ವಿನೋದ್ ಚೋಪ್ರಾ ತನ್ನನ್ನು ಆತ್ಮಹತ್ಯೆ ಮಾಡಿಕೊಳ್ಳಲು ಆಣಿಮಾಡಿದ್ದರು ಎಂದು ಚೇತನ್ ಭಗತ್ ಆರೋಪಿಸಿದ್ದಾರೆ.

ವಿಷಯ ಏನು ಅಂದ್ರೆ, 'ದಿಲ್ ಬೇಚಾರಾ' ಚಿತ್ರದ ಕುರಿತಂತ ಟ್ವೀಟ್ ಮಾಡಿರುವ ಚೇತನ್ ಭಗತ್ ಚಿತ್ರ ವಿಮರ್ಶಕರನ್ನು ಗುರಿಯಾಗಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಭಗತ್, 'ಸುಶಾಂತ್ ಅವರ ಕೊನೆಯ ಚಿತ್ರ ಈ ವಾರ ತೆರೆಕಾಣುತ್ತಿದೆ. ಎಲ್ಲ ಚಿತ್ರ ವಿಮರ್ಶಕರು ಜಾಣ್ಮೆಯಿಂದ ತಮ್ಮ ಅಭಿಪ್ರಾಯ ಮಂಡಿಸಬೇಕು. ಓವರ್ ಸ್ಮಾರ್ಟ್ನೆಸ್ ಮೂಲಕ ಕೆಲಸ ಮಾಡಬಾರದು. ಬಕ್ವಾಸ್ ಬರೆಯಬಾರದು. ನಿಸ್ಪಕ್ಷವಾಗಿ ತಮ್ಮ ಅನಿಸಿಕೆ ಮಂಡಿಸಬೇಕು. ತಮ್ಮ ಕಳಪೆ ಮಟ್ಟದ ಟ್ರಿಕ್ಸ್ ಬಳಸಬಾರದು. ಹಾಳಾದ ಪದ್ಧತಿಯ ಬಳಕೆ ಬೇಡ. ಈಗಾಗಲೇ ನೀವು ಹಲವು ಜೀವಗಳನ್ನು ಹಾಳು ಮಾಡಿದ್ದೀರಿ. ಇನ್ನೂ ಸಾಕು... ನಾವೆಲ್ಲಾ ಗಮನಿಸುತ್ತಿದ್ದೇವೆ" ಎಂದಿದ್ದಾರೆ.

ಚೇತನ್ ಭಗತ್ ಅವರ ಟ್ವೀಟ್ ಅನುಪಮಾ ಚೋಪ್ರಾ ಅವರಿಗೆ ಸರಿಹೋಗಿಲ್ಲ ಎಂಬಂತೆ ಕಾಣಿಸುತ್ತಿದೆ. ಏಕೆಂದರೆ ಇದಕ್ಕೆ ಉತ್ತರಿಸಿರುವ ಅವರು, 'ಯಾರೂ ಇದಕ್ಕಿಂತ ಕೆಳ ಮಟ್ಟಕ್ಕೆ ಬೀಳಲು ಸಾಧ್ಯವಿಲ್ಲ ಎಂದು ನೀವು ಭಾವಿಸುತ್ತೀರಿ, ಆದರೆ ಅವರು ಬಿದ್ದುಹೋಗುತ್ತಾರೆ." ಎಂದಿದ್ದಾರೆ.

Each time you think the discourse can’t get lower, it does! https://t.co/yhkBUd8VSQ

— Anupama Chopra (@anupamachopra) July 21, 2020

ಆದರೆ, ಈ ಟ್ವೀಟ್ ಗಳು ಇಲ್ಲಿಗೆ ನಿಂತು ಹೋಗಿಲ್ಲ. ಅನುಪಮಾ ಟ್ವೀಟ್ ನಿಂದ ಆಕ್ರೋಶಗೊಂಡ ಚೇತನ್ ಭಗತ್, ಪುನಃ ಅನುಪಮಾಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಅವರು ಅನುಪಮಾ ಅವರ ಪತಿ ವಿಧು ವಿನೋದ್ ಚೋಪ್ರಾ ಅವರು ತಮ್ಮನ್ನು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಬರೆದಿರುವ ಚೇತನ್ ಭಗತ್. "ಮೇಡಂ, ನಿಮ್ಮ ಪತಿ ನನ್ನನ್ನು ಸಾರ್ವಜನಿಕವಾಗಿ ಅವಮಾನಿಸಿ, ಎಲ್ಲ ಉತ್ತಮ ಕಥೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಮತ್ತು ನನಗೆ ನನ್ನ ಕಥೆಗೆ ಮನ್ನಣೆ ನೀಡಲು ನಿರಾಕರಿಸಿ, ಒಂದು ಕ್ಷಣ ಆತ್ಮಹತ್ಯೆ ಮಾಡಿಕೊಳ್ಳಲು ಆಣಿಮಾಡಿದ್ದರು. ಇದಕ್ಕೆಲ್ಲ ಸಾಕ್ಷಿಯಾದ ನಿಮ್ಮ ಆಲೋಚನಾ ಮಟ್ಟ ಆಗ ಎಲ್ಲಿತ್ತು?" ಎಂದು ಪ್ರಶ್ನಿಸಿದ್ದಾರೆ.

Ma'am, when your husband publicly bullied me, shamelessly collected all the best story awards, tried denying me credit for my story and drove me close to suicide, and you just watched, where was your discourse? https://t.co/CeVDT2oq47

— Chetan Bhagat (@chetan_bhagat) July 21, 2020

Trending News