/kannada/photo-gallery/anjeer-fruit-for-high-blood-sugar-control-249311 ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! 249311

ಯುಪಿ ಮಾದರಿಯಲ್ಲಿ ರಾಜ್ಯದಲ್ಲೂ ಕಮಲ ಜಾತ್ರೆಗೆ ಸಜ್ಜಾದ ಬಿಜೆಪಿ

ಉತ್ತರಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಕಮಲ ಜಾತ್ರೆಗೆ ಸಜ್ಜಾಗುತ್ತಿದೆ ಬಿಜೆಪಿ.

Last Updated : Feb 14, 2018, 04:54 PM IST
ಯುಪಿ ಮಾದರಿಯಲ್ಲಿ ರಾಜ್ಯದಲ್ಲೂ ಕಮಲ ಜಾತ್ರೆಗೆ ಸಜ್ಜಾದ ಬಿಜೆಪಿ title=

ಕಲಬುರಗಿ: ಕಳೆದ ವರ್ಷ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಮಯದಲ್ಲಿ ಆಯೋಜಿಸಲಾಗಿದ್ದ ಕಮಲ ಜಾತ್ರೆ ಮಾದರಿಯಲ್ಲಿ ರಾಜ್ಯದಲ್ಲೂ ಕಮಲ ಜಾತ್ರೆ ಮಾಡಲು ಬಿಜೆಪಿ ಸಜ್ಜಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತಾ, ಜನರನ್ನು ಬಿಜೆಪಿಯತ್ತ ಸೆಳೆಯುವ  ಉದ್ದೇಶವನ್ನು ಕಮಲ ಜಾತ್ರೆ ಹೊಂದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಫೆ. 16 ರಿಂದ 18 ರವರೆಗೆ ಬಿಜೆಪಿ ಕಮಲ ಜಾತ್ರೆ ನಡೆಸಲು ತಯಾರಿ ನಡೆಸಲಾಗಿದೆ. ಈ ಜಾತ್ರೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಹೇಳುವ ಮತ್ತು ರಾಜ್ಯ ಸರ್ಕಾರದ ವೈಫಲ್ಯವನ್ನು ತೋರಿಸುವ ಕೆಲಸವನ್ನು ಕೈಗೊಳ್ಳಲಾಗುವುದು ಎಂದು ಪಕ್ಷ ತಿಳಿಸಿದೆ.

ಈ ಕಮಲ ಜಾತ್ರೆಯಲ್ಲಿ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಲ್ಲಕಂಬ, ಮಕ್ಕಳ ಆಟಗಳು, ನಗೆ ಹಬ್ಬ, ಮೆಹಂದಿ, ಮ್ಯಾಜಿಕ್ ಶೋ ಸೇರಿದಂತೆ ಹತ್ತಾರು ಮನರಂಜನಾ ಕಾರ್ಯಕ್ರಮಗಳನ್ನು ಕಮಲ ಜಾತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.