ವಾಹನಗಳ ಮುಂದಿನ ಸೀಟ್ ನಲ್ಲಿರುವ ಸವಾರರಿಗೆ Airbag ಕಡ್ಡಾಯ, ಏಪ್ರಿಲ್ 1 ರಿಂದ ಹೊಸ ನಿಯಮ!

Airbag For Front Seat Passengers: ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

Written by - Nitin Tabib | Last Updated : Dec 29, 2020, 10:04 PM IST
  • ವಾಹನಗಳ ಮುಂದಿನ ಸೀಟ್ ಸವಾರರಿಗೆ ಏರ್ ಬ್ಯಾಗ್ ಕಡ್ಡಾಯ ಸಾಧ್ಯತೆ.
  • ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಈ ಹೊಸ ನಿಯಮ,
  • ಹೊಸ ನಿಯಮ ಮುಂದಿನ ವರ್ಷ ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆ.
ವಾಹನಗಳ ಮುಂದಿನ ಸೀಟ್ ನಲ್ಲಿರುವ ಸವಾರರಿಗೆ Airbag ಕಡ್ಡಾಯ, ಏಪ್ರಿಲ್ 1 ರಿಂದ ಹೊಸ ನಿಯಮ! title=
Airbag For Front Seat Passengers (File Image)

ನವದೆಹಲಿ: Airbag For Front Seat Passengers - ವಾಹನದಲ್ಲಿ ಮುಂಭಾಗದ ಆಸನದ ಪ್ರಯಾಣಿಕರಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲು ಸರ್ಕಾರ ಪ್ರಸ್ತಾಪಿಸಿದೆ. ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಪ್ರಯಾಣಿಕರ ಸುರಕ್ಷತೆಯನ್ನು ಉತ್ತೇಜಿಸುವ ಮಹತ್ವದ ಕ್ರಮವಾಗಿ, ಚಾಲಕನ ಪಕ್ಕದ ಮುಂಭಾಗದ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಬ್ಯಾಗ್ ಕಡ್ಡಾಯಗೊಳಿಸಲು ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವಾಲಯ ತನ್ನ  ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ- Big Announcement: ಅನ್ನದಾತನ ಖಾತೆಗೆ 18 ಸಾವಿರ ಕೋಟಿ ರೂ. ವರ್ಗಾಯಿಸಲು ಮುಂದಾದ Modi Government

ಈ ಉಪಾಯ ಕಾರ್ಯಗತಗೊಳಿಸಲು ಪ್ರಸ್ತಾವಿತ ಗಡುವನ್ನು ಹೊಸ ವಾಹನಗಳಿಗೆ 1 ಏಪ್ರಿಲ್ 2021 ಮತ್ತು ಅಸ್ತಿತ್ವದಲ್ಲಿರುವ ಮಾದರಿಗಳಿಗೆ 01 ಜೂನ್ 2021 ಆಗಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 28 ರಂದು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಕರಡನ್ನು ಪ್ರಕಟಿಸಲಾಗಿದೆ. ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳ ನಂತರ ಎಲ್ಲಾ ಮಧ್ಯಸ್ಥಗಾರರಿಂದ ಸಲಹೆಗಳು / ಕಾಮೆಂಟ್‌ಗಳನ್ನು morth@gov.inwithin ಎಂಬ ಇಮೇಲ್ ವಿಳಾಸಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ-Subsidy On Sugar Export: ಕಬ್ಬು ಬೆಳೆಗಾರ ರೈತರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ Modi Government, ಇಲ್ಲಿದೆ ವಿವರ

ವಾಹನಗಳ ದರ ಏರಿಕೆ
ಸರ್ಕಾರದ ಈ ಪ್ರಸ್ತಾವನೆಯ ಹಿನ್ನೆಲೆ ವಾಹನಗಳ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(FADA) ಹೇಳಿದೆ. ಮಾರಾಟದ ಮೇಲೆ ಪರಿಣಾಮ ಬೀರದಂತೆ ವಾಹನ ಉತ್ಪಾದಕರು ದರ ಏರಿಕೆಯ ಬಹುಭಾಗವನ್ನು ಸ್ವತಃ ಭರಿಸಬೇಕು. ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಸರ್ಕಾರದ (Modi Government) ಪ್ರಸ್ತಾಪ ಶ್ಲಾಘನೀಯ ಎಂದು FADA ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ. ಇದು ಬಹಳ ಮುಖ್ಯವಾದ ಸುರಕ್ಷತಾ ರೂಢಿಯಾಗಿದ್ದು,, ಭಾರತವು ಜಾಗತಿಕ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅನುಸರಿಸಬೇಕು ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News