M Raghupathy: ಮಾಜಿ ಸಚಿವ ಎಂ.ರಘುಪತಿ ವಿಧಿವಶ

ಮಾಜಿ ಸಚಿವ, ಜನತಾ ಪರಿವಾರದ ಹಿರಿಯ ನಾಯಕ ಎಂ.ರಘುಪತಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

Written by - Zee Kannada News Desk | Last Updated : Jun 18, 2022, 04:52 PM IST
  • ಮಾಜಿ ಸಚಿವ ಎಂ.ರಘುಪತಿ ವಿಧಿವಶ
  • ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಎಂ.ರಘುಪತಿ
  • ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ
M Raghupathy: ಮಾಜಿ ಸಚಿವ ಎಂ.ರಘುಪತಿ ವಿಧಿವಶ   title=
ಮಾಜಿ ಸಚಿವ ಎಂ.ರಘುಪತಿ

ಬೆಂಗಳೂರು: ಮಾಜಿ ಸಚಿವ, ಜನತಾ ಪರಿವಾರದ ಹಿರಿಯ ನಾಯಕ ಎಂ.ರಘುಪತಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ ಲಾಭಾರ್ಥಿಗಳಿಗೆ ಮತ್ತೊಂದು ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ

ಯುವಕರಾಗಿದ್ದಾಗಲಿಂದಲೂ ಸದಾ ಹೋರಾಟದಿಂದ ಮುಂದೆ ಬಂದು ರಾಜಕೀಯ ಕ್ಷೇತ್ರದಲ್ಲಿ ಜನಮನ ಗೆದ್ದು ಇತರರಿಗೆ ಮಾದರಿಯಾಗಿದ್ದರು. ಜನತಾ ಪರಿವಾರದ ನಾಯಕರೆನಿಸಿಕೊಂಡಿದ್ದ ಅವರು, ಕರ್ನಾಟಕ ವಿಧಾನಸಭೆ, ವಿಧಾನ‌ಪರಿಷತ್ತಿನ ಸದಸ್ಯರಾಗಿ, ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪಟದಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.  

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಎಂ.ರಘುಪತಿ ಮಲ್ಲೇಶ್ವರಂ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಶಾಸಕರಾಗಿದ್ದರು. ಇವರ ಅಗಲಿಕೆಗೆ ಕಾಂಗ್ರೆಸ್‌ ನಾಯಕರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಇದನ್ನೂ ಓದಿ: ಫೋನ್ ನಂಬರ್‌ ಸೇವ್‌ ಮಾಡದೆ WhatsApp ಸಂದೇಶ ಕಳುಹಿಸುವುದು ಹೇಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News