NRIಗಳ ಭಾರತದಲ್ಲಿ ಉಳಿಯುವ ದಿನ ವಿಸ್ತರಣೆಗೆ ಅವಕಾಶ ನೀಡಿ: ಕೇಂದ್ರಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಮನವಿ

NRI: ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದೇಶಪಾಂಡೆ ಫೌಂಡೇಶನ್‌ನ 14ನೇ ಅಭಿವೃದ್ಧಿ ಸಂವಾದ ಸಮ್ಮೇಳನದಲ್ಲಿ ಮಾತನಾಡಿದ ಮೂರ್ತಿ ಅವರು, “ಇಂತಹ ದಿನಗಳನ್ನು 250ಕ್ಕೆ ಹೆಚ್ಚಿಸಿದರೆ ದೇಶದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ ಬದಲಾಗಿ ಭಾರತದಲ್ಲಿನ ಸ್ಟಾರ್ಟ್‌ಅಪ್‌ಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಅಮೂಲ್ಯ ವ್ಯಕ್ತಿಗಳೊಂದಿಗೆ ಹೆಚ್ಚು ಸಮಯ ಸೇರಿದಂತೆ ಪ್ರಯೋಜನಗಳನ್ನು ತರುತ್ತದೆ ಎಂದು ಸಲಹೆ ನೀಡಿದರು.

Written by - Bhavishya Shetty | Last Updated : Feb 7, 2023, 01:23 AM IST
    • ಭಾರತದಲ್ಲಿ ಉಳಿಯಲು ಅವಕಾಶ ನೀಡುವ ಹಿಂದಿನ ನೀತಿಯನ್ನು ಮರುಸ್ಥಾಪಿಸಬೇಕು
    • 120 ದಿನಗಳ ಬದಲಿಗೆ ವರ್ಷಕ್ಕೆ ಗರಿಷ್ಠ 182 ದಿನಗಳ ಅವಕಾಶ ನೀಡಿ
    • ಕೇಂದ್ರಕ್ಕೆ ಮನವಿ ಸಲ್ಲಿಸಿದ ಇನ್ಫೋಸಿಸ್‌ ನಾರಾಯಣ ಮೂರ್ತಿ
NRIಗಳ ಭಾರತದಲ್ಲಿ ಉಳಿಯುವ ದಿನ ವಿಸ್ತರಣೆಗೆ ಅವಕಾಶ ನೀಡಿ: ಕೇಂದ್ರಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಮನವಿ title=
Narayana Murthy

ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದ್ದು, ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಪ್ರಸ್ತುತ 120 ದಿನಗಳ ಬದಲಿಗೆ ವರ್ಷಕ್ಕೆ ಗರಿಷ್ಠ 182 ದಿನಗಳ ಕಾಲ ಭಾರತದಲ್ಲಿ ಉಳಿಯಲು ಅವಕಾಶ ನೀಡುವ ಹಿಂದಿನ ನೀತಿಯನ್ನು ಮರುಸ್ಥಾಪಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ಬಜೆಟ್ ನಿಂದ UAE ಎನ್ ಆರ್ ಐಗಳಿಗೆ ಸಿಕ್ಕ ಪ್ರಯೋಜನವೇನು? ಇಲ್ಲಿದೆ ವರದಿ

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದೇಶಪಾಂಡೆ ಫೌಂಡೇಶನ್‌ನ 14ನೇ ಅಭಿವೃದ್ಧಿ ಸಂವಾದ ಸಮ್ಮೇಳನದಲ್ಲಿ ಮಾತನಾಡಿದ ಮೂರ್ತಿ ಅವರು, “ಇಂತಹ ದಿನಗಳನ್ನು 250ಕ್ಕೆ ಹೆಚ್ಚಿಸಿದರೆ ದೇಶದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ ಬದಲಾಗಿ ಭಾರತದಲ್ಲಿನ ಸ್ಟಾರ್ಟ್‌ಅಪ್‌ಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಅಮೂಲ್ಯ ವ್ಯಕ್ತಿಗಳೊಂದಿಗೆ ಹೆಚ್ಚು ಸಮಯ ಸೇರಿದಂತೆ ಪ್ರಯೋಜನಗಳನ್ನು ತರುತ್ತದೆ ಎಂದು ಸಲಹೆ ನೀಡಿದರು.

"ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸರ್ಕಾರಗಳಲ್ಲಿನ ಮಂತ್ರಿಗಳೊಂದಿಗೆ ನಾನು ಅನಿವಾಸಿ ಭಾರತೀಯರನ್ನು ಹೇಗೆ ಹೆಚ್ಚು ಗೌರವ ಮತ್ತು ಅಭಿಮಾನದಿಂದ ಸ್ವಾಗತಿಸಬೇಕು ಎಂಬುದರ ಕುರಿತು ಹಲವಾರು ಚರ್ಚೆಗಳನ್ನು ನಡೆಸಿದ್ದೇನೆ" ಎಂದು ಅವರು ಹೇಳಿದರು.

ವಾಸ್ತವ್ಯವನ್ನು 182 ರಿಂದ 120 ದಿನಕ್ಕೆ ಇಳಿಸುವುದರಿಂದ ಹೆಚ್ಚುವರಿ ತೆರಿಗೆ ಆದಾಯ ಬರುವುದಿಲ್ಲ ಎಂದು ಅವರು ಗಮನ ಸೆಳೆದರು. “ಮಧ್ಯಪ್ರಾಚ್ಯ, ಯುಎಸ್, ಯುಕೆ, ಕೆನಡಾ, ಸಿಂಗಾಪುರ್ ಮತ್ತು ಇತರ ದೇಶಗಳ ಎನ್‌ಆರ್‌ಐಗಳು ಆರ್ಥಿಕ ವರ್ಷದಲ್ಲಿ 182 ದಿನಗಳಿಗಿಂತ ಕಡಿಮೆ ಅವಧಿಗೆ ಭಾರತಕ್ಕೆ ಭೇಟಿ ನೀಡುತ್ತಾರೆ. ಹಣಕಾಸು ಕಾಯಿದೆ 2020 ಭಾರತದಲ್ಲಿ ಒಟ್ಟು ತೆರಿಗೆಯ ಆದಾಯವು ರೂ 15 ಲಕ್ಷಕ್ಕಿಂತ ಹೆಚ್ಚಿರುವ ಸಂದರ್ಭಗಳಲ್ಲಿ ಈ ಅವಧಿಯನ್ನು 120 ದಿನಗಳವರೆಗೆ ಕಡಿಮೆ ಮಾಡಿದೆ. 250 ದಿನಕ್ಕೆ ಹೆಚ್ಚಿಸಿದರೂ ತಪ್ಪಿಲ್ಲ” ಎಂದರು.

ಇದನ್ನೂ ಓದಿ: NRI: ಗಣರಾಜ್ಯೋತ್ಸವದಂದು 2012ರ ಎನ್ಆರ್ಐ ಅಪಹರಣ ಪ್ರಕರಣದ ಅಪರಾಧಿಗಳ ಬಿಡುಗಡೆ

ಅನಿವಾಸಿ ಭಾರತೀಯರನ್ನು ಆತ್ಮೀಯವಾಗಿ ಸ್ವಾಗತಿಸಲು ಹಣಕಾಸು ಸಚಿವರು, ರಾಜಕೀಯ ಮುಖಂಡರು ಮತ್ತು ಅಧಿಕಾರಶಾಹಿಗೆ ತಮ್ಮ ವಿನಂತಿಯನ್ನು ಪುನರುಚ್ಚರಿಸಿದ ಮೂರ್ತಿ, “ಎನ್ ಆರ್ ಐಗಳು ದೇಶಕ್ಕೆ ಹೆಚ್ಚಿನ ಮೌಲ್ಯವನ್ನು ತರುತ್ತಾರೆ. ಪ್ರತಿಯಾಗಿ ಏನನ್ನೂ ಕೇಳಬೇಡಿ" ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News