5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?

Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ.  ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...

1 /9

ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ.  ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...  

2 /9

ಪಾಕಿಸ್ತಾನಿ ಮೂಲದ ಪಂಜಾಬಿ ಖ್ಯಾತ ನಟಿ , ಲಾಹೋರ್‌ನಲ್ಲಿ ಹುಟ್ಟಿ ಬೆಳೆದರು, ನಟಿಯ ಸಹೋದರಿ ಮುಂಬೈ ಮೂಲದ ವ್ಯಕ್ತಿಯನ್ನು ಮದುವೆಯಾದ ಕಾರಣ, ನಟಿ ತನ್ನ ಸಹೋದರಿಯೊಂದಿಗೆ ಮುಂಬೈನಲ್ಲಿ ಬಂದು ನೆಲೆಸಿದರು. ಅಷ್ಟಕ್ಕೂ ಆ ನಟಿಯ ಹೆಸರು  ಖುರ್ಷಿದ್ ಬೇಗಂ. ಸೊಹ್ರಾಬ್ ಮೋದಿ ಅವರು ನಟಿಯಾಗಲು ಸಹಾಯ ಮಾಡಿದರು ಮತ್ತು ಆಕೆಗೆ ಮೀನಾ ಎಂಬ ಪರದೆಯ ಹೆಸರನ್ನು ನೀಡಿದರು.

3 /9

ಖುರ್ಷಿದ್ ಬೇಗಂ ಅವರು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು. ತಮ್ಮ ಮನೆಯಲ್ಲಿ ಆಕೆಯೇ ಎರಡನೇ ಹಿರಿಯ ಮಗು. ಭೂಮಾಲೀಕ ಕುಟುಂಬಕ್ಕೆ ಸೇರಿದವಳು, ಆದರೆ ಅವಳ ತಂದೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ನಂತರ, ಆಕೆಗೆ ಯಾವುದೇ ಆದಾಯದ ಮೂಲವಿರಲಿಲ್ಲ, ಹಣಕಾಸಿನ ಮುಗ್ಗಟ್ಟಿನಿಂದಾಗಿ ತಂದೆ ಮಗಳು ಮತ್ತು ತಾಯಿಯನ್ನು ನಿಂದಿಸ ತೊಡಗಿದ್ದರು.  

4 /9

ತಂದೆ ನಟಿಯ ಅಕ್ಕ ವಜೀರ್ ಬೇಗಂ ಅವರನ್ನು ಶ್ರೀಮಂತ ಹುಡುಗನಿಗೆ ಮದುವೆ ಮಾಡಿಕೊಟ್ಟರು, ನಂತರ ಅವರು ಮುಂಬೈಗೆ ಹೋಗಿ ವಾಸಿಸಲು ಪ್ರಾರಂಭಿಸಿದರು. ನಂತರ ಖುರ್ಷಿದ್‌ಗೆ ಒಳ್ಳೆಯ ಹುಡುಗನನ್ನು ಹುಡುಕಲು ವಜೀರ್ ತಾಯಿ ಮತ್ತು ಸಹೋದರಿಯನ್ನು ಮುಂಬೈಗೆ ಕರೆತರಲಾಯಿತು.  

5 /9

ಒಂದು ದಿನ ಖುರ್ಷಿದ್ ಬೇಗಂ ಅವರ ಸಹೋದರಿ ಮತ್ತು ಅವರ ಸೋದರರು ಅವರನ್ನು ಸೊಹ್ರಾಬ್ ಮೋದಿಯವರ ಚಿತ್ರ 'ಸಿಕಂದರ್' ಬಿಡುಗಡೆಗೆ ಕರೆದೊಯ್ದರು. ಆಗ ಖುರ್ಷಿದ್ ಬೇಗಂ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಸೊಹ್ರಾಬ್ ಮೋದಿ ನಟಿಯನ್ನು ನೋಡಿ ತುಂಬಾ ಪ್ರಭಾವಿತರಾದರು ಮತ್ತು ಅವರ ಚಿತ್ರದಲ್ಲಿ ಅವರನ್ನು ನಟಿಸಲು ನಿರ್ಧರಿಸಿದರು. ಚಿತ್ರನಿರ್ಮಾಪಕರು ಅವರಿಗೆ 'ಸಿಕಂದರ್' ಚಿತ್ರದಲ್ಲಿ ರಾಜನ ಸಹೋದರಿ ಅಂಬಿಯ ಪಾತ್ರವನ್ನು ನೀಡಿದರು.

6 /9

'ಸಿಕಂದರ್' ಯಶಸ್ವಿಯಾದಾಗ, ಮೀನಾಗೆ ಹಲವು ಚಿತ್ರಗಳಿಗೆ ಆಫರ್‌ಗಳು ಬರಲಾರಂಭಿಸಿದವು, ಅದರಲ್ಲಿ 'ರೂಪ್ ಕುಮಾರ್' ಮತ್ತು 'ಹುಮಾಯೂನ್' ಚಿತ್ರಗಳೂ ಸೇರಿದ್ದವು. ಅವರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಾರಂಭಿಸಿತು. ಆದರೆ, ಮೀನಾಗೆ ಸೊಹ್ರಾಬ್ ಮೋದಿಯಿಂದ ನೋಟಿಸ್ ಬಂದಿದ್ದು, ಅವರು 3 ಚಿತ್ರಗಳಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಮತ್ತು ಆದ್ದರಿಂದ ಹೆಚ್ಚಿನ ಚಿತ್ರಗಳಿಗೆ ಸಹಿ ಹಾಕಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.  

7 /9

ಮೀನಾ ಅವರು 'ಸಿಕಂದರ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದ ನಟ ಮತ್ತು ಚಲನಚಿತ್ರ ನಿರ್ಮಾಪಕ ಜಹೂರ್ ರಾಜಾ ಅವರನ್ನು ಮೊದಲು ವಿವಾಹವಾದರು. ಅಲ್ ನಾಸಿರ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ರೂಪ ಜೊತೆ ಮೀನಾ ಮೂರನೇ ಮದುವೆಯಾದರು,  ಪಾಕಿಸ್ತಾನ ಪ್ರವಾಸದ ನಂತರ ಇಬ್ಬರೂ ಬೇರ್ಪಟ್ಟರು. ಡಿಎನ್‌ಎಇಂಡಿಯಾ ಡಾಟ್‌ಕಾಮ್‌ನ ವರದಿಯ ಪ್ರಕಾರ, ನಟಿ ಪಾಕಿಸ್ತಾನದಲ್ಲಿಯೇ ಉಳಿದರು, ಆದರೆ ರೂಪ್ ಭಾರತಕ್ಕೆ ಮರಳಿದರು.

8 /9

ಮೀನಾ ಅವರ ನಾಲ್ಕನೇ ವಿವಾಹವು ಪಾಕಿಸ್ತಾನಿ ಛಾಯಾಗ್ರಾಹಕ ಮತ್ತು ನಿರ್ಮಾಪಕ ರಜಾ ಮಿರ್ ಅವರೊಂದಿಗೆ ಮತ್ತು ಅವರ ಐದನೇ ವಿವಾಹವು 'ಜಮಾಲೋ' ಚಿತ್ರದ ಕೋಸ್ಟಾರ್ ಅಸದ್ ಬೊಖಾರಿ ಅವರೊಂದಿಗೆ ಆಗಿತ್ತು. ಮೀನಾ ಅವರ ಮದುವೆಯಲ್ಲಿ ಇಬ್ಬರು ಪುತ್ರರು ಸೇರಿದಂತೆ ಮೂವರು ಮಕ್ಕಳಿದ್ದರು. ಮೀನಾ ಆರಂಭಿಕವಾಗಿ ಯಶಸ್ಸು ಪಡೆದರೂ, . 1974-75ರ ನಂತರ ಅವರ ಆರ್ಥಿಕ ಸ್ಥಿತಿ ಹದಗೆಡತೊಡಗಿತು. ಆಕೆ ದಿವಾಳಿಯಾದ ಸಮಯ ಕೂಡ ಬಂದಿತ್ತು, ತಮ್ಮ ಕೊನೆಗಾಲದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಗೆ ತಲುಪಿದರು, ನಂತರ ನಟಿ ನರಳುತ್ತಾ ಪ್ರಾಣ ಬಿಟ್ಟರು.   

9 /9

ಐವರು ಗಂಡಂದಿರಲ್ಲಿ ಯಾರೂ ನಟಿಯ ಕೊನೆಯ ಕ್ಷಣಗಳಲ್ಲಿ ಜೊತೆಗಿರಲಿಲ್ಲ. ಅವರ ಅಂತ್ಯಕ್ರಿಯೆಗಾಗಿ ಜನರು ದೇಣಿಗೆಯ ಮೂಲಕ ಹಣವನ್ನು ಸಂಗ್ರಹಿಸಿದ್ದರು.