ಮುಂದಿನ ತಿಂಗಳಿನಿಂದ ಈ ರಾಶಿಯವರು ಕಾಲಿಟ್ಟಲೆಲ್ಲಾ ಕಷ್ಟ.! ಯಾಕೆ ಹೀಗೆ ?

ಗ್ರಹಗಳ ರಾಜ, ಸೂರ್ಯ ಮತ್ತು ನ್ಯಾಯದಾತ ಶನಿ ದೇವ ಹೊಸ ವರ್ಷದಲ್ಲಿ ಮುಖಾಮುಖಿಯಾಗಲಿದ್ದಾರೆ. ಶನಿದೇವನು ಜನವರಿ 17 ರಂದು ಮಕರ ರಾಶಿಯನ್ನು ತೊರೆದು ಕುಂಭ ರಾಶಿ ಪ್ರವೇಶಿಸಿದರೆ, ಸೂರ್ಯ ದೇವ ಫೆಬ್ರವರಿ 13 ರಂದು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾರೆ. ಈ ರೀತಿಯಾಗಿ, ಎರಡೂ ಶಕ್ತಿಶಾಲಿ ಗ್ರಹಗಳು ಕುಂಭದಲ್ಲಿ ಭೇಟಿಯಾಗುತ್ತಿವೆ.  ಈ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಕಷ್ಟದ ದಿನಗಳು ಆರಂಭವಾಗಲಿದೆ.  

ಬೆಂಗಳೂರು : ಗ್ರಹಗಳ ರಾಜ, ಸೂರ್ಯ ಮತ್ತು ನ್ಯಾಯದಾತ ಶನಿ ದೇವ ಹೊಸ ವರ್ಷದಲ್ಲಿ ಮುಖಾಮುಖಿಯಾಗಲಿದ್ದಾರೆ. ಶನಿದೇವನು ಜನವರಿ 17 ರಂದು ಮಕರ ರಾಶಿಯನ್ನು ತೊರೆದು ಕುಂಭ ರಾಶಿ ಪ್ರವೇಶಿಸಿದರೆ, ಸೂರ್ಯ ದೇವ ಫೆಬ್ರವರಿ 13 ರಂದು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾರೆ. ಈ ರೀತಿಯಾಗಿ, ಎರಡೂ ಶಕ್ತಿಶಾಲಿ ಗ್ರಹಗಳು ಕುಂಭದಲ್ಲಿ ಭೇಟಿಯಾಗುತ್ತಿವೆ.  ಈ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಕಷ್ಟದ ದಿನಗಳು ಆರಂಭವಾಗಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಕುಂಭ ರಾಶಿ : ಶನಿದೇವ ಮತ್ತು ಸೂರ್ಯನ ಮೈತ್ರಿಯು ಕುಂಭ ರಾಶಿಯಲ್ಲಿಯೇ  ರಚನೆಯಾಗುತ್ತಿದೆ. ಈ ಎರಡು ಶಕ್ತಿಶಾಲಿ ಗ್ರಹಗಳ ಮಿಲನದಿಂದಾಗಿ ಕುಂಭ ರಾಶಿಯವರಿಗೆ ಸಂಕಷ್ಟದ ಕಾಲ ಆರಂಭವಾಗಲಿದೆ. ಸ್ನೇಹಿತರೊಂದಿಗಿನ ಸಂಬಂಧಗಳು ಹಾಳಾಗಬಹುದು. ಈ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುತ್ತೀರಿ ಅಷ್ಟು ಒಳ್ಳೆಯದು.  ಹಣಕಾಸಿನ ವಿಚಾರ ಬಂದಾಗ ಯೋಚಿಸಿ ಹೆಜ್ಜೆಯಿಡಿ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಶುಭ ಸಮಯವಲ್ಲ.  

2 /3

ವೃಶ್ಚಿಕ ರಾಶಿ : ಈ ರಾಶಿಯವರ ಮೇಲೆ ಈಗಾಗಲೇ ಶನಿಯ ಪ್ರಭಾವ ಕಾಣುತ್ತಿದೆ. ಅದರ ಜೊತೆಯಲ್ಲಿ ಶನಿ ಮತ್ತು ಸೂರ್ಯ ಜೊತೆಯಾದಾಗ ಈ ರಾಶಿಯವರ ಕಷ್ಟ ಇನ್ನಷ್ಟು ಹೆಚ್ಚಲಿದೆ. ಈ ರಾಶಿಯವರು ಜಾಗರೂಕತೆಯ ಹೆಜ್ಜೆಯನ್ನಿಡಬೇಕು. ಅಳೆದು ತೂಗಿ ಮಾತನಾಡುವುದು ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮ ಮಾತೇ  ನಿಮಗೆ ಮುಳ್ಳಾಗಬಹುದು. ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಅವರ ಒಂದು ಸಣ್ಣ ತಪ್ಪು ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು.   

3 /3

 ಕರ್ಕಾಟಕ ರಾಶಿ : ಶನಿ-ಸೂರ್ಯ ಸಂಯೋಗದ ವೇಳೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಅದಕ್ಕಾಗಿಯೇ  ಈ ರಾಶಿಯವರು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗಿನ ಸಂಬಂಧವು ಹದಗೆಡಬಹುದು. ಯಾರಿಗೇ ಆದರೂ ಸಾಲ ಕೊಡುವ ತಪ್ಪು ಮಾಡಬೇಡಿ. ಹೂಡಿಕೆ ಮಾಡುವಾಗ ಬುದ್ಧಿವಂತಿಕೆ  ಬಳಸಿಕೊಳ್ಳಿ.  ಹೊಸ ಜನರೊಂದಿಗೆ ಹೆಚ್ಚಿನ ಒಡನಾಟ ಬೇಡ.   ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)