ಸಿಂಹ ರಾಶಿಯಲ್ಲಿ ದೈತ್ಯ ಗುರು ಶುಕ್ರನ ಪ್ರವೇಶ, ಈ ಜನರ ಜೀವನದಲ್ಲಿ ಧನಕುಬೇರ-ಲಕ್ಷ್ಮಿ ಕೃಪೆಯಿಂದ ಅಪಾರ ಧನ ಪ್ರಾಪ್ತಿಯ ಯೋಗ!

Venus Transit In Leo 2023: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಧನ ಹಾಗೂ ವೈಭವ ಕಾರಕ ಗ್ರಹ ಎಂದೇ ಪರಿಗಣಿಸಲಾಗುವ ದೈತ್ಯಗುರು ಶುಕ್ರ ಶೀಘ್ರದಲ್ಲಿಯೇ ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ಈ ಸಿಂಹ ಗೋಚರ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಫಲಗಳನ್ನು ನೀಡಲಿದೆ. ಈ ಜನರ ಜೀವನದಲ್ಲಿ ಶುಕ್ರ ದೆಸೆ ಆರಂಭಗೊಂಡು, ಧನ ಕುಬೇರ ಲಕ್ಷ್ಮಿ ಕೃಪೆಯಿಂದ ಇವರಿಗೆ ಅಪಾರ ಧನಲಾಭ-ಸಿರಿಸಂಪತ್ತು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, spiritual news in kannada
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ದೈತ್ಯ ಗುರು ಶುಕ್ರನನ್ನು ಧನ-ಸಿರಿಸಂಪತ್ತಿನ ಕಾರಕ ಗ್ರಹ ಎಂದೇ ಪರಿಗಣಿಸಲಾಗಿದೆ. ಅಷ್ಟೇ ಅಲ್ಲ ಶುಕ್ರ ಪ್ರೇಮ, ಆಕರ್ಷಣೆಯ ಕಾರಕ ಗ್ರಹ ಕೂಡ ಹೌದು, ಹೀಗಿರುವಾಗ ಶುಕ್ರನ ರಾಶಿ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ  ಬೀರುತ್ತದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವೈಭವದಾತ ಶುಕ್ರ ಅಕ್ಟೋಬರ್ 2, 2023 ರಂದು ರಾತ್ರಿ 12ಗಂಟೆ 43 ನಿಮಿಷಕ್ಕೆ ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ಈ ಸಿಂಹ ಸಂಕ್ರಮಣ ನವೆಂಬರ್ 3, 2023ರವರೆಗೆ ಇರಲಿದೆ. ಶುಕ್ರನ ಈ ಸಿಂಹ ಗೋಚರ ಹಲವು ರಾಶಿಗಳ ಜನರಿಗೆ ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಸ್ಥಾನಮಾನ, ಧನ-ಧಾನ್ಯ ಕರುಣಿಸಲಿದೆ, ಶುಕ್ರನ ಈ ಸಿಂಹ ರಾಶಿ ಪ್ರವೇಶ ಯಾರಿಗೆ ಅದೃಷ್ಟ ತರಲಿದೆ ತಿಳಿದುಕೊಳ್ಳೋಣ ಬನ್ನಿ, spiritual news in kannada

 

ಇದನ್ನೂ ಓದಿ-30ನೇ ವಯಸ್ಸಿನ ಬಳಿಕ ಅತಿ ಧನವಂತರಾಗುತ್ತಾರೆ ಈ ರಾಶಿಗಳ ಜನರು, ಶನಿಯ ವಿಶೇಷ ಕೃಪೆ ಇವರ ಮೇಲಿರುತ್ತದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Venus Transit In Leo 2023: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಧನ ಹಾಗೂ ವೈಭವ ಕಾರಕ ಗ್ರಹ ಎಂದೇ ಪರಿಗಣಿಸಲಾಗುವ ದೈತ್ಯಗುರು ಶುಕ್ರ ಶೀಘ್ರದಲ್ಲಿಯೇ ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ಈ ಸಿಂಹ ಗೋಚರ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಫಲಗಳನ್ನು ನೀಡಲಿದೆ. ಈ ಜನರ ಜೀವನದಲ್ಲಿ ಶುಕ್ರ ದೆಸೆ ಆರಂಭಗೊಂಡು, ಧನ ಕುಬೇರ ಲಕ್ಷ್ಮಿ ಕೃಪೆಯಿಂದ ಇವರಿಗೆ ಅಪಾರ ಧನಲಾಭ-ಸಿರಿಸಂಪತ್ತು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, spiritual news in kannada  

2 /5

ಮೇಷ ರಾಶಿ: ಶುಕ್ರನ ಸಿಂಹ ರಾಶಿ ಗೋಚರ ಮೇಷ ರಾಶಿಯ ಜಾತಕದವರಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ಶುಕ್ರನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ, ಇದರಿಂದ ಕುಟುಂಬ ಸದಸ್ಯರ ಜೊತೆಗೆ ನೀವು ಉತ್ತಮ ಕಾಲ ಕಳೆಯುವಿರಿ. ಆದಾಯದ ಹೋದ ಮೂಲಗಳು ತೆರೆದುಕೊಳ್ಳಲಿವೆ. ಆದರೆ, ಅದಕ್ಕೆ ತಕ್ಕಂತೆ ಖರ್ಚು ಕೂಡ ಹೆಚ್ಚಾಗಲಿದೆ. ಕಾರ್ಯಸ್ಥಳದಲ್ಲಿ ಜವಾಬ್ದಾರಿ ಹಾಗೂ ಕೆಲಸದ ಒತ್ತಡ ಹೆಚ್ಚಾಗಲಿದೆ. ಅದನ್ನು ನೀವು ಉತ್ತಮವಾಗಿ ನಿರ್ವಹಿಸುವ ಪ್ರಯತ್ನವನ್ನು ಮಾಡುವಿರಿ. ವ್ಯಾಪಾರದಲ್ಲಿಯೂ ಕೂಡ ಅದೃಷ್ಟ ನಿಮ್ಮನ್ನು ಬೆಂಬಲಿಸಲಿದೆ. ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ.  

3 /5

ವೃಷಭ ರಾಶಿ: ಶುಕ್ರನ ಈ ಸಿಂಹ ಗೋಚರ ನಿಮ್ಮ ಪಾಲಿಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಹೊಸ ಮನೆಯ ನಿಮ್ಮ ಕನಸು ಈಡೇರುವ ಸಾಧ್ಯತೆ ಇದೆ. ವಾಹನ ಖರೀದಿಸಲು ಈ ಸಮಯ ಉತ್ತಮವಾಗಿದೆ. ಆದಾಯದ ಹೊಸ ಮೂಲಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಬಿಸ್ನೆಸ್ ನಲ್ಲಿಯೂ ಕೂಡ ನಿಮಗೆ ಲಾಭ ಬರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಸಂಪೂರ್ಣ ಸಾಮರ್ಥ್ಯದಿಂದ ನಡೆದು ಬಂದ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಯತ್ನಿಸುವಿರಿ. ಅವುಗಳಲ್ಲಿ ಬಹುತೇಕ ಅವಕಾಶಗಳು ಯಶಸ್ವಿಯಾಗಲಿವೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ದಾಂಪತ್ಯ ಜೀವನ ಸುಖಮಯವಾಗಲಿದೆ. ಧನ-ಧಾನ್ಯ ವೃತ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ.   

4 /5

ಸಿಂಹ ರಾಶಿ: ನಿಮ್ಮ ರಾಶಿಯಲ್ಲಿಯೇ ಸೂರ್ಯನ ಈ ಗೋಚರ ನೆರವೇರುತ್ತಿದೆ ಮತ್ತು ಇದು ನಿಮಗೆ ವಿಶೇಷ ಲಾಭಗಳನ್ನು ನೀಡಲಿದೆ. ಪಿತ್ರಾರ್ಜಿತ ಸಂಪತ್ತಿನ ಮಾಧ್ಯಮದ ಮೂಲಕ ನೀವು ಅಪಾರ ಧನಪ್ರಾಪ್ತಿ ಮಾಡಿಕೊಳ್ಳುವಿರಿ. ಹೂಡಿಕೆ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತ್ತಾಗಲಿದೆ. ಧನ-ಧಾನ್ಯ ಹೆಚ್ಚಾಗಲಿದೆ. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಕೂಡ ಪ್ರಾಪ್ತಿಯಾಗಬಹುದು. ನೌಕರವರ್ಗದ ಜನರಿಗೆ ಹಿರಿಯ ಅಧಿಕಾರಿಗಳ ಬೆಂಬಲ ಪ್ರಾಪ್ತಿಯಾಗಲಿದೆ. ಉತ್ತಮ ಕೆಲಸದ ಪ್ರದರ್ಶನದ ಹಿನ್ನೆಲೆ ನಿಮಗೆ ಪದೋನ್ನತಿ ಸಿಗುವ ಸಾಧ್ಯತೆ ಇದೆ. ವಿದೇಶದಲ್ಲಿ ನೌಕರಿ ಪಡೆಯಬಯಸುವವರಿಗೆ ಯಶಸ್ಸು ಸಿಗಲಿದೆ. ಬಿಸ್ನೆಸ್ ನಲ್ಲಿ ಅಪಾರ ಧನಲಾಭದ ಲಕ್ಷಣಗಳು ಗೋಚರಿಸುತ್ತಿವೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)