Astro Tips for Money: ಸ್ನಾನ ಮಾಡುವ ಮುನ್ನ ಮಹಿಳೆಯರು ಈ ಕೆಲಸಗಳನ್ನು ಮಾಡಲೇಬಾರದು

Astro Tips for Money: ಹಿಂದೂ ಧರ್ಮದಲ್ಲಿ ಮಹಿಳೆಯರು ಸ್ನಾನಕ್ಕೂ ಮೊದಲು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಸ್ನಾನ ಮಾಡುವ ಮೊದಲು ಕೆಲವು ಕೆಲಸಗಳನ್ನು ಮಾಡುವುದರಿಂದ ಬಡತನ ಬೆಂಬಿಡದೆ ಕಾಡುತ್ತದೆ ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ಪ್ರತಿದಿನ ಬೆಳಿಗ್ಗೆ ಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ನಾನ ಮಾಡದೆ ಅಥವಾ ಯಾವುದೇ ಒಳ್ಳೆಯ ಕೆಲಸ ಮಾಡದೆ ಪೂಜೆ ಮಾಡುವುದು, ಅಡುಗೆ ಮನೆಗೆ ಹೋಗುವುದನ್ನೂ ನಿಷೇಧಿಸಲಾಗಿದೆ. ಮಹಿಳೆಯರನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ. ಆಕೆಯನ್ನು ದೇವಿಯ ರೂಪವೆಂದು ಪರಿಗಣಿಸಲಾಗಿದೆ, ಆದ್ದರಿಂದ ಹಿಂದೂ ಧರ್ಮಗ್ರಂಥಗಳಲ್ಲಿ ಮಹಿಳೆಯರ ಬಗ್ಗೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಅಂತಹ ನಿಯಮಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸ್ನಾನ ಮಾಡದೆ ತುಳಸಿಗೆ ನೀರು ಹಾಕಬಾರದು: ಮಹಿಳೆಯರು ಸ್ನಾನ ಮಾಡದೆ ತುಳಸಿಗೆ ನೀರು ಹಾಕಬಾರದು. ತುಳಸಿಯನ್ನು ಪೂಜ್ಯ ಸಸ್ಯವೆಂದು ಪರಿಗಣಿಸಲಾಗುತ್ತದೆ, ಅಶುಚಿಯಾದ ಕೈಗಳಿಂದ ಅದನ್ನು ಸ್ಪರ್ಶಿಸುವುದು ಅಥವಾ ಸ್ನಾನ ಮಾಡದೆ ನೀರನ್ನು ಸುರಿಯುವುದು ಲಕ್ಷ್ಮಿ ದೇವಿಗೆ ಕೋಪ ತರುತ್ತದೆ. ಅಂದಹಾಗೆ, ಯಾವುದೇ ವ್ಯಕ್ತಿಯು ಸ್ನಾನ ಮಾಡದೆ ತುಳಸಿಯನ್ನು ಮುಟ್ಟಬಾರದು ಅಥವಾ ನೀರನ್ನು ಹಾಕಬಾರದು. 

2 /5

ಮಹಿಳೆಯರು ಸ್ನಾನ ಮಾಡದೆ ಅಡುಗೆ ಕೋಣೆಗೆ ಪ್ರವೇಶಿಸಬಾರದು: ಶಾಸ್ತ್ರಗಳ ಪ್ರಕಾರ, ಮಹಿಳೆಯರು ಸ್ನಾನ ಮಾಡದೆ ಅಡುಗೆ ಕೋಣೆಗೆ ಪ್ರವೇಶಿಸಬಾರದು. ನಾವು ಆಹಾರದಿಂದ ಶಕ್ತಿಯನ್ನು ಪಡೆಯುತ್ತೇವೆ. ಅಶುದ್ಧತೆಯಿಂದ ಮಾಡಿದ ಆಹಾರವು ನಕಾರಾತ್ಮಕತೆಯನ್ನು ನೀಡುತ್ತದೆ. ಆದ್ದರಿಂದ, ಮಹಿಳೆಯರು ಯಾವಾಗಲೂ ಸ್ನಾನದ ನಂತರ ಆಹಾರವನ್ನು ತಯಾರಿಸಬೇಕು. ಅಲ್ಲದೆ, ಸ್ನಾನ ಮಾಡದೆ ಅಡುಗೆ ಮಾಡುವುದು ತಾಯಿ ಅನ್ನಪೂರ್ಣೆಗೆ ಮಾಡುವ ಅವಮಾನವೆಂದು ಪರಿಗಣಿಸಲಾಗಿದೆ. ಆಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಮನೆಯಲ್ಲಿ ಬಡತನ ಬರುತ್ತದೆ ಎಂದು ನಂಬಲಾಗಿದೆ. 

3 /5

ಸ್ನಾನ ಮಾಡದೇ ಆಹಾರ ಸೇವಿಸಬಾರದು: ಸ್ನಾನ ಮಾಡದೆ ಆಹಾರ ಸೇವಿಸಬಾರದು. ಮಹಿಳೆಯರಿಗೂ ಅದೇ ನಿಯಮವಿದೆ. ಸ್ನಾನ ಮಾಡದಿರುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಯನ್ನು ಸೋಮಾರಿಯನ್ನಾಗಿ ಮಾಡುತ್ತದೆ. ಸ್ನಾನ ಮಾಡುವುದರಿಂದ ಚೈತನ್ಯ ಸಿಗುತ್ತದೆ ಮತ್ತು ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. 

4 /5

ಎದ್ದ ತಕ್ಷಣ ತಲೆ ಬಾಚಬಾರದು: ಅದೇ ರೀತಿ ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ತಲೆಗೂದಲು ಬಾಚಿಕೊಳ್ಳುವ ಅಭ್ಯಾಸವಿರುತ್ತದೆ, ಈ ಅಭ್ಯಾಸ ಮಹಿಳೆಯರಿಗೆ ಸರಿಯಲ್ಲ. ಶಾಸ್ತ್ರಗಳ ಪ್ರಕಾರ, ಮಹಿಳೆಯರು ಮುಂಜಾನೆ ಸ್ನಾನ ಮಾಡಿದ ನಂತರವೇ ತಮ್ಮ ಕೂದಲನ್ನು ಬಾಚಿಕೊಳ್ಳಬೇಕು.

5 /5

ಸ್ನಾನ ಮಾಡದೆ ಹಣ ಮುಟ್ಟಿದರೆ ಲಕ್ಷ್ಮಿ ದೇವಿಗೆ ಅವಮಾನ: ಸಂಪತ್ತನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಸ್ನಾನ ಮಾಡದೆ ಹಣ ಮುಟ್ಟಿದರೆ ಲಕ್ಷ್ಮಿ ದೇವಿಗೆ ಅವಮಾನವಾಗುತ್ತದೆ ಮತ್ತು ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದರಿಂದ ವ್ಯಕ್ತಿ ಬಡವನಾಗುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ, ಮಹಿಳೆಯರು ಸ್ನಾನ ಮಾಡದೆ ಹಣವನ್ನು ಮುಟ್ಟಬಾರದು.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.