18 ವರ್ಷಗಳ ಬಳಿಕ ಒಟ್ಟಿಗೆ ಸೇರುತ್ತಿರುವ ಎರಡು ಗ್ರಹಗಳು !ಈ ರಾಶಿಯವರ ಬಾಳಲ್ಲಿ ಹರಿಯುವುದು ಸಂಪತ್ತಿನ ಸುಧೆ

18 ವರ್ಷಗಳ ಬಳಿಕ ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿ ಸೇರಲಿದ್ದಾರೆ.ಇದರ ಪ್ರಭಾವ ಕೆಲವು ರಾಶಿಯವರ ಮೇಲೆ ವಿಶೇಷವಾಗಿ ಆಗಲಿದೆ. 

Written by - Ranjitha R K | Last Updated : Sep 4, 2024, 02:34 PM IST
  • ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
  • ಸೂರ್ಯನ ರಾಶಿ ಬದಲಾವಣೆಯೊಂದಿಗೆ ಕೇತುವಿನ ಜೊತೆ ಸಂಯೋಗವನ್ನು ರೂಪಿಸುತ್ತಾನೆ.
  • 18 ವರ್ಷಗಳ ನಂತರ ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿ ಸೇರುತ್ತಿದ್ದಾರೆ.
18 ವರ್ಷಗಳ ಬಳಿಕ ಒಟ್ಟಿಗೆ ಸೇರುತ್ತಿರುವ ಎರಡು ಗ್ರಹಗಳು !ಈ ರಾಶಿಯವರ ಬಾಳಲ್ಲಿ ಹರಿಯುವುದು ಸಂಪತ್ತಿನ ಸುಧೆ   title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ,ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.ಸೆಪ್ಟೆಂಬರ್‌ನಲ್ಲಿ,ಸೂರ್ಯನ ರಾಶಿ ಬದಲಾವಣೆಯೊಂದಿಗೆ ಕೇತುವಿನ ಜೊತೆ ಸಂಯೋಗವನ್ನು ರೂಪಿಸುತ್ತಾನೆ.ಸಿಂಹ ರಾಶಿಯನ್ನು ತೊರೆದು ಕನ್ಯಾರಾಶಿಗೆ ಪ್ರವೇಶಿಸುತ್ತಿದ್ದ ಹಾಗೆ ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿ ಸೇರಿಕೊಂಡ ಹಾಗೆ ಆಗುತ್ತದೆ. ಅಂದರೆ 18 ವರ್ಷಗಳ ನಂತರ  ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿ ಸೇರುತ್ತಿದ್ದಾರೆ.  

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅನೇಕ ರಾಶಿಯ ಜನರು ಸೂರ್ಯ ಮತ್ತು ಕೇತು ಸಂಯೋಜನೆಯಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ.ಪ್ರತಿ ತಿಂಗಳು ಒಂದು ನಿರ್ದಿಷ್ಟ ಅವಧಿಯ ನಂತರ ಸೂರ್ಯನು ತನ್ನ ರಾಶಿಯನ್ನು  ಬದಲಾಯಿಸುತ್ತಾನೆ. ಅದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಗೋಚರಿಸುತ್ತದೆ. 

ಇದನ್ನೂ ಓದಿ : ಮನೆ ಯಜಮಾನನ ಆಯಸ್ಸು, ಐಶ್ವರ್ಯವನ್ನು ಕಾಪಾಡಬೇಕಾದರೆ ಈ ದಿನ ತುಳಸಿಯನ್ನು ಮುಟ್ಟಲೇ ಬಾರದು!ಪೂಜೆಯ ಭರದಲ್ಲಿ ಈ ತಪ್ಪು ಮಾಡದಿರಿ

ಹಿಂದೂ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ 16 ರಂದು ರಾತ್ರಿ 8 ಗಂಟೆಗೆ, ಸೂರ್ಯನು ತನ್ನ ಪ್ರಸ್ತುತ ರಾಶಿಯನ್ನು ಬಿಟ್ಟು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮತ್ತು ಕೇತುಗಳ ಸಂಯೋಗವು  ಈ ರಾಶಿಯವರಿಗೆ ಅದೃಷ್ಟ ತರುತ್ತದೆ. 

ತುಲಾ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ತುಲಾ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.ಈ ಸಮಯದಲ್ಲಿ, ಸೂರ್ಯನು ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾನೆ. ಹೀಗಾಗಿ ನಿಮ್ಮ ಮೇಲೆ ಸೂರ್ಯ ದೇವರ ವಿಶೇಷ ಆಶೀರ್ವಾದ ಇರುತ್ತದೆ.ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.ಹಣ ಗಳಿಸಲು ಹೊಸ ಅವಕಾಶಗಳು ಬರಲಿವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. 

ವೃಶ್ಚಿಕ ರಾಶಿ :
ಸೂರ್ಯನು ಈ ರಾಶಿಯ ಹನ್ನೊಂದನೇ ಮನೆಗೆ ಪ್ರವೇಶಿಸಲಿದ್ದಾನೆ.ಇವರಿಗೆ  ಸೂರ್ಯ ಮತ್ತು ಕೇತುಗಳ ಸಂಯೋಜನೆಯು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.ಬಹಳ ಕಾಲದಿಂದ ಪೂರ್ಣಗೊಳ್ಳದೆ ಬಾಕಿ ಉಳಿದಿರುವ  ಕೆಲಸಗಳು ಪೂರ್ಣಗೊಳ್ಳಲಿವೆ.ಸಹೋದರ ಸಹೋದರಿಯರೊಂದಿಗೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ.ಅನೇಕ ಆಸೆಗಳು ಈಡೇರುತ್ತವೆ.  

ಇದನ್ನೂ ಓದಿ : ಮನಿ ಪ್ಲ್ಯಾಂಟ್‌ ಈ ದಿಕ್ಕಿಗೆ ಇಟ್ಟು ನೋಡಿ.. ಅದೃಷ್ಟ ಖುಲಾಯಿಸಿ ವ್ಯಾಪಾರ ವೃದ್ಧಿಯಾಗುವುದು, ಹಣದ ಹೊಳೆ ಹರಿಯುವುದು! 

ಮಕರ ರಾಶಿ : 
ಒಂಬತ್ತನೇ ಮನೆಯಲ್ಲಿ ಸೂರ್ಯ ಮತ್ತು ಕೇತುಗಳ ಸಂಯೋಗವಗಾಲಿದೆ.ಈ ರಾಶಿಯವರ ಅದೃಷ್ಟ ಬದಲಾಗಲಿದೆ.ಬಹಳ ದಿನಗಳಿಂದ ಸಿಕ್ಕಿಹಾಕಿಕೊಂಡಿದ್ದ ಹಣವೂ ಹಿಂದಿರುಗಿ ಬರುವುದು. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚುತ್ತದೆ.  ಸಮಾಜದಲ್ಲಿ ಗೌರವವೂ ಹೆಚ್ಚುತ್ತದೆ.ಅದೃಷ್ಟ ನಿಮ್ಮ ಬೆನ್ನ ಹಿಂದಿದ್ದು ಕಾಪಾಡುತ್ತದೆ. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News