ಏನೇ ಮಾಡಿದರೂ ಹಣ ಉಳಿಯುವುದೇ ಇಲ್ಲ ಎನ್ನುವ ಕೊರಗು ಇದೆಯಾ? ಈ ಪ್ರಾಣಿಯನ್ನು ಸಾಕಿ ನೋಡಿ ! ತುಂಬಿ ತುಳುಕುವುದು ಧನ ರಾಶಿ

ಕೈಯ್ಯಲ್ಲಿ ಹಣ ನಿಲ್ಲುತ್ತಿಲ್ಲ ಎಂದಾದರೆ ಈ ಪ್ರಾಣಿಯನ್ನು ಮನೆಯಲ್ಲಿ ಸಾಕಬೇಕು. ಮನೆಯ ಎಲ್ಲಾ ರೀತಿಯ ಕಷ್ಟ ಪರಿಹಾರವಾಗುವುದು.    

Written by - Ranjitha R K | Last Updated : Sep 4, 2024, 06:21 PM IST
  • ಕೆಲವರು ಏನೇ ಮಾಡಿದರೂ ಯಶಸ್ಸು ಸಿಗುವುದಿಲ್ಲ.
  • ಇನ್ನು ಕೆಲವರು ಎಷ್ಟೇ ದುಡಿದರೂ ಕೈಯ್ಯಲ್ಲಿ ಒಂದು ಪೈಸೆಯೂ ನಿಲ್ಲುವುದಿಲ್ಲ.
  • ಮೊದಲು ಮನೆಯ ವಾಸ್ತುವನ್ನು ಸರಿ ಮಾಡುವಂತೆ ಸಲಹೆ ಸಿಗುತ್ತದೆ.
ಏನೇ ಮಾಡಿದರೂ ಹಣ ಉಳಿಯುವುದೇ ಇಲ್ಲ ಎನ್ನುವ ಕೊರಗು ಇದೆಯಾ? ಈ ಪ್ರಾಣಿಯನ್ನು ಸಾಕಿ ನೋಡಿ ! ತುಂಬಿ ತುಳುಕುವುದು ಧನ ರಾಶಿ  title=

ಬೆಂಗಳೂರು : ಕೆಲವರು ಏನೇ ಮಾಡಿದರೂ ಯಶಸ್ಸು ಸಿಗುವುದಿಲ್ಲ. ಇನ್ನು ಕೆಲವರು ಎಷ್ಟೇ ದುಡಿದರೂ ಕೈಯ್ಯಲ್ಲಿ ಒಂದು ಪೈಸೆಯೂ ನಿಲ್ಲುವುದಿಲ್ಲ. ಹೀಗಾದಾಗ ಮೊದಲು ಮನೆಯ ವಾಸ್ತುವನ್ನು ಸರಿ ಮಾಡುವಂತೆ ಸಲಹೆ ಸಿಗುತ್ತದೆ.ಮನೆ ವಾಸ್ತು ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ.ಇನ್ನು ಮನೆಯ ವಾಸ್ತು ದೋಷ ನಿವಾರಿಸಲು ಮನೆಯಲ್ಲಿ ಈ ಪ್ರಾಣಿ ಸಾಕಿದರೂ ಸಾಕು.ಅಥವಾ ಕೆಲವು ಸಸ್ಯಗಳನ್ನು ಮನೆಯ  ಸುತ್ತ ನೆಟ್ಟರೂ ಸಾಕಾಗುತ್ತದೆ.ಮನೆಯಲ್ಲಿನ  ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.  

ವಾಸ್ತು ದೋಷ ನಿವಾರಣೆಗೆ ಈ ಪ್ರಾಣಿ ಸಾಕಿ : 
ಆಮೆ : 

ವಾಸ್ತು ಪ್ರಕಾರ, ಆಮೆಯನ್ನು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಮನೆಯಲ್ಲಿ ಆಮೆ ಇಡುವುದೆಂದರೆ ಅದು ಶುಭ ಎಂದು ಹೇಳಲಾಗುತ್ತದೆ.ಹೀಗೆ ಮಾಡಿದರೆ ಲಕ್ಷ್ಮೀ ದೇವಿ ಸದಾ ಮನೆಯಲ್ಲಿ ನೆಲೆಸುತ್ತಾಳೆಯಂತೆ. ಲಕ್ಷ್ಮೀ ದೇವಿಯ  ವಾಸ ಯಾವ ಮನೆಯಲ್ಲಿ ಇರುತ್ತದೆಯೂ ಅಲ್ಲಿ ಸುಖ ಸಮೃದ್ದಿಗೆ ಕೊರತೆ ಇರುವುದೇ ಇಲ್ಲ.  

ಇದನ್ನೂ ಓದಿ : ಈ ರಾಶಿಗಳ ಬದುಕಿನ ದಿಕ್ಕು ಬದಲಿಸಲಿದೆ ಗಣೇಶ ಚತುರ್ಥಿ.. ರಾಜವೈಭೋಗ, ಸಂಪತ್ತಿನ ಸುರಿಮಳೆ.. ವಿಘ್ನ ಕಳೆದು ಪ್ರತಿ ಕೆಲಸದಲ್ಲಿಯೂ ಜಯ !

ಮೀನು:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮೀನುಗಳನ್ನು ಇಡುವುದು ಕೂಡಾ ಮಂಗಳಕರ.ಮೀನನ್ನು ಸಾಕುವುದರಿಂದ ಮನೆಯ ಋಣಾತ್ಮಕ ಶಕ್ತಿ, ದಾರಿದ್ರ್ಯ ನಿವಾರಣೆಯಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಚಿನ್ನದ ಬಣ್ಣದ ಮೀನುಗಳನ್ನು ಸಾಕುವುದು ಶುಭ.

ಮೊಲ :
 ಇನ್ನು ಮನೆಯಲ್ಲಿ ಮೊಲವನ್ನು ಸಾಕಿದರೆ ಕೂಡಾ ಒಳ್ಳೆಯದೇ. ಮೊಲ ಸಾಕಿದ ಮನೆ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆಯಂತೆ.ಮನೆಯ ನಕಾರಾತ್ಮಕ ಶಕ್ತಿ ಕೂಡಾ ಮೊಲದ ಕಾರಣದಿಂದ ಕೊನೆಗೊಳ್ಳುತ್ತದೆಯಂತೆ.  

ಕುದುರೆ :
ಮನೆಯಲ್ಲಿ ಕುದುರೆಯನ್ನು ಸಾಕುವುದು ಬಹಳ ವಿರಳ.  ಕುದುರೆ ಸಾಕುವುದಕ್ಕೆ ಬದಲಾಗಿ ಮನೆಯಲ್ಲಿ ಕುದುರೆ ಅಥವಾ ಓಡುವ ಕುದುರೆಯ  ಫೋಟೋ ಹಾಕಬಹುದು. ಹೀಗಾದರೂ ಅದೃಷ್ಟ ತೆರೆದುಕೊಳ್ಳುತ್ತದೆ. 

ಇದನ್ನೂ ಓದಿ : 18 ವರ್ಷಗಳ ಬಳಿಕ ಒಟ್ಟಿಗೆ ಸೇರುತ್ತಿರುವ ಎರಡು ಗ್ರಹಗಳು !ಈ ರಾಶಿಯವರ ಬಾಳಲ್ಲಿ ಹರಿಯುವುದು ಸಂಪತ್ತಿನ ಸುಧೆ

ನಾಯಿ :
ಜ್ಯೋತಿಷ್ಯದ ಪ್ರಕಾರ ನಾಯಿ ಪ್ರಮುಖ ಪ್ರಾಣಿ. ನಾಯಿ ಸಾಕುವುದರಿಂದ ಜೀವನದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎದು ಹೇಳಲಾಗುತ್ತದೆ. ಜಾತಕದಲ್ಲಿ ಶನಿ ಮತ್ತು ಕೇತುವಿನ ಸ್ಥಾನ ಗಟ್ಟಿಯಾಗಬೇಕಾದರೆ ಮನೆಯಲ್ಲಿ ಕಪ್ಪು ಬಣ್ಣದ ನಾಯಿಯನ್ನು ಸಾಕಬೇಕು.   

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News