ಈ ಮೂರು ದಿನಗಳಲ್ಲಿ ಹೊಸ ಬಟ್ಟೆ ಧರಿಸಿದರೆ ನಿಮ್ಮ ಜೇಬು ಖಾಲಿಯಾಗುವುದು ಗ್ಯಾರಂಟಿ...!

Written by - Manjunath N | Last Updated : Jun 11, 2024, 06:51 PM IST
  • ಹಿಂದೂ ಧರ್ಮದ ಪ್ರಕಾರ ವಾರದಲ್ಲಿ ಭಾನುವಾರ, ಮಂಗಳವಾರ ಮತ್ತು ಶನಿವಾರದಂದು ಹೊಸ ಬಟ್ಟೆಗಳನ್ನು ಧರಿಸಬಾರದು.
  • ಹೊಸ ಬಟ್ಟೆಗಳನ್ನು ಧರಿಸಲು ಈ ದಿನವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
  • ಭಾನುವಾರದಂದು ಹೊಸ ಬಟ್ಟೆಗಳನ್ನು ಧರಿಸುವುದರಿಂದ, ಸೂರ್ಯನ ಗ್ರಹದಿಂದ ಉಂಟಾಗುವ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು.
 ಈ ಮೂರು ದಿನಗಳಲ್ಲಿ ಹೊಸ ಬಟ್ಟೆ ಧರಿಸಿದರೆ ನಿಮ್ಮ ಜೇಬು ಖಾಲಿಯಾಗುವುದು ಗ್ಯಾರಂಟಿ...! title=

ಹಿಂದೂ ಸಂಪ್ರದಾಯಗಳ ಪ್ರಕಾರ, ಮಂಗಳಕರ ದಿನಗಳನ್ನು ನಿಗದಿಪಡಿಸಿದ ಅನೇಕ ಕಾರ್ಯಗಳಿವೆ. ಒಬ್ಬ ವ್ಯಕ್ತಿಯು ಇದನ್ನು ವಿರೋಧಿಸಿದರೆ, ಅವನು ನಕಾರಾತ್ಮಕ ಪರಿಣಾಮಗಳನ್ನು ಸಹ ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಯಾವ ದಿನ ಹೊಸ ಬಟ್ಟೆ ಧರಿಸಿದರೆ ಉತ್ತಮ ಎನ್ನುವುದರ ಬಗ್ಗೆ ತಿಳಿಸುತ್ತೇವೆ.

ಈ ಮೂರು ದಿನಗಳಂದು ಹೊಸ ಬಟ್ಟೆ ಧರಿಸುವಂತಿಲ್ಲ:

ಹಿಂದೂ ಧರ್ಮದ ಪ್ರಕಾರ ವಾರದಲ್ಲಿ ಭಾನುವಾರ, ಮಂಗಳವಾರ ಮತ್ತು ಶನಿವಾರದಂದು ಹೊಸ ಬಟ್ಟೆಗಳನ್ನು ಧರಿಸಬಾರದು. ಹೊಸ ಬಟ್ಟೆಗಳನ್ನು ಧರಿಸಲು ಈ ದಿನವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಭಾನುವಾರದಂದು ಹೊಸ ಬಟ್ಟೆಗಳನ್ನು ಧರಿಸುವುದರಿಂದ, ಸೂರ್ಯನ ಗ್ರಹದಿಂದ ಉಂಟಾಗುವ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಇದರಿಂದಾಗಿ ವ್ಯಕ್ತಿಯು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಮಂಗಳವಾರದಂದು ಹೊಸ ಬಟ್ಟೆಗಳನ್ನು ಧರಿಸುವುದರಿಂದ ವ್ಯಕ್ತಿಯು ಎಲ್ಲಾ ಸಮಯದಲ್ಲೂ ಕೋಪಗೊಳ್ಳಬಹುದು. ಇದರೊಂದಿಗೆ ಸಮಾಜದಲ್ಲಿ ಮಾನಹಾನಿಯಾಗುವ ಭೀತಿ ಎದುರಾಗಲಿದ್ದು, ಬಟ್ಟೆಯೂ ಬೇಗ ಹರಿಯುತ್ತದೆ.

ಇದನ್ನೂ ಓದಿ-ಯುವ ವಿಚ್ಛೇದನ ವಿಚಾರದ ಮಧ್ಯೆ ಬಂದ ʻಸಪ್ತಮಿ ಗೌಡʼ ಹೆಸರು.. ಯುವರಾಜ್‌ ಕುಮಾರ್ ಪರ ವಕೀಲರು ಹೇಳಿದ್ದೇನು?

ಇನ್ನೂ ಶನಿವಾರದಂದು ಸಹ ಹೊಸ ಬಟ್ಟೆ ಧರಿಸಬಾರದು.ಇದರೊಂದಿಗೆ ಗ್ರಹದೋಷಗಳು ಹೆಚ್ಚಾಗುವ ಸಾಧ್ಯತೆಗಳೂ ಹೆಚ್ಚುತ್ತವೆ. ಶನಿವಾರದಂದು ಹೊಸ ಬಟ್ಟೆ ಧರಿಸುವುದರಿಂದ ಆರ್ಥಿಕ ನಷ್ಟವೂ ಉಂಟಾಗುವ ಸಾಧ್ಯತೆ ಇದೆ.ಶನಿವಾರದಂದು ಅಪ್ಪಿ ಹೊಸ ಬಟ್ಟೆಗಳನ್ನು ಖರೀದಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ. ಬುಧವಾರ, ಗುರುವಾರ ಮತ್ತು ಶುಕ್ರವಾರ ಹೊಸ ಬಟ್ಟೆಗಳನ್ನು ಧರಿಸಲು ಮಂಗಳಕರ ದಿನಗಳು ಎಂದು ಪರಿಗಣಿಸಲಾಗುತ್ತದೆ.

ಸೋಮವಾರದಂದು ಹೊಸ ಬಟ್ಟೆಗಳನ್ನು ಧರಿಸಲು ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ.ಕೆಲವು ಕಾರಣಗಳಿಂದ ವ್ಯಕ್ತಿಯು ಅಶುಭ ದಿನಗಳಲ್ಲಿ ಹೊಸ ಬಟ್ಟೆಗಳನ್ನು ಧರಿಸಬೇಕಾದರೆ, ಅವನು ಯಾವುದೇ ಅಶುಭ ಪರಿಣಾಮ ಬೀರದಂತೆ ಈ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.ಇದಕ್ಕಾಗಿ ಒಂದು ಚಿಟಿಕೆ ಉಪ್ಪನ್ನು ನೀರಿನಲ್ಲಿ ಬೆರೆಸಿ ಹೊಸ ಬಟ್ಟೆಯ ಮೇಲೆ ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ಗ್ರಹದೋಷದಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ-ಯುವ ವಿಚ್ಛೇದನ ವಿಚಾರದ ಮಧ್ಯೆ ಬಂದ ʻಸಪ್ತಮಿ ಗೌಡʼ ಹೆಸರು.. ಯುವರಾಜ್‌ ಕುಮಾರ್ ಪರ ವಕೀಲರು ಹೇಳಿದ್ದೇನು?

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News