ಧನಿಕರ ಜಾಕದಲ್ಲಿರುತ್ತದೆ ಈ ಶುಭ ಯೋಗ, ಲಕ್ಷ್ಮಿ-ಕುಬೇರರ ಕೃಪೆಯಿಂದ ಜೀವನದಲ್ಲಿ ಅಪಾರ ಧನ-ಸಂಪತ್ತಿಗೆ ಒಡೆಯರಾಗುತ್ತಾರೆ!

Auspicious Yoga: ಜೋತಿಷ್ಯ ಶಾಸ್ತ್ರದ ಪ್ರಕಾರ ಧನಿಕರ ಜಾತಕದಲ್ಲಿ ಚಾಮರ ಯೋಗ ಇರುತ್ತದೆ. ಈ ಯೋಗದ ಕಾರಣ ವ್ಯಕ್ತಿಗೆ ಜೀವನದಲ್ಲಿ ಘನತೆ-ಗೌರವ, ಸಿರಿಸಂಪತ್ತು ಎಲ್ಲಾ ಪ್ರಾಪ್ತಿಯಾಗುತ್ತದೆ.  

Written by - Nitin Tabib | Last Updated : Aug 21, 2023, 10:01 PM IST
  • ಯಾವುದೇ ಓರ್ವ ವ್ಯಕ್ತಿಯ ಜನ್ಮ ಜಾತಕದಲ್ಲಿ ಚಾಮರ ಯೋಗ ರೂಪುಗೊಂಡಾಗ ಆ ವ್ಯಕ್ತಿ ದೂರದೃಷ್ಟಿವುಳ್ಳವ ಹಾಗೂ ಬುದ್ಧಿಶಾಲಿಯಾಗಿರುತ್ತಾನೆ.
  • ಇದಲ್ಲದೆ ವ್ಯಕ್ತಿ ಮುಖಂಡ ಅಥವಾ ಮುಖಂಡ ಹುದ್ದೆಯ ಸರಿಸಮನಾದ ಹುದ್ದೆಯಲ್ಲಿರುತ್ತಾನೆ.
  • ಇದಲ್ಲದೆ ಆತ ದೀರ್ಘಾಯುನಾಗುತ್ತಾನೆ.
ಧನಿಕರ ಜಾಕದಲ್ಲಿರುತ್ತದೆ ಈ ಶುಭ ಯೋಗ, ಲಕ್ಷ್ಮಿ-ಕುಬೇರರ ಕೃಪೆಯಿಂದ ಜೀವನದಲ್ಲಿ ಅಪಾರ ಧನ-ಸಂಪತ್ತಿಗೆ ಒಡೆಯರಾಗುತ್ತಾರೆ! title=

ಬೆಂಗಳೂರು: ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಓರ್ವ ವ್ಯಕ್ತಿ ಜನಿಸಿದಾಗ ಗ್ರಹಗಳ ಕಾರಣ ಶುಭ ಹಾಗೂ ಅಶುಭ ಯೋಗಗಳು ನಿರ್ಮಾಣಗೊಳ್ಳುತ್ತವೆ. ಈ ಯೋಗಗಳ ಪ್ರಭಾವ ವ್ಯಕ್ತಿಯ ಜೀವನದ ಮೇಲೆ ಕಂಡು ಬರುತ್ತದೆ. ಹೀಗಿರುವಾಗ ಇಲ್ಲಿ ನಾವು ಒಂದು ಅತ್ಯಂತ ಶುಭ ಯೋಗದ ಬಗ್ಗೆ ನಿಮ್ಮೊಂದಿಗೆ ಚರ್ಚೆಯನ್ನು ನಡೆಸುತ್ತಿದ್ದೇವೆ. ಅದರ ಹೆಸರು ಚಾಮರ ಯೋಗ. ಈ ಯೋಗ ಅತ್ಯಂತ ಭಾಗ್ಯವಂತರ ಜಾತಕದಲ್ಲಿರುತ್ತದೆ. ಯಾವ ವ್ಯಕ್ತಿಯ ಜನ್ಮ ಜಾತಕದಲ್ಲಿ ಈ ಯೋಗ ಇರುತ್ತದೆಯೋ, ಆ ವ್ಯಕ್ತಿ ಜೀವನದಲ್ಲಿ ಎಲ್ಲಾ ಸುಖಗಳನ್ನು ಭೋಗಿಸುತ್ತಾನೆ. ಜೀವನದಲ್ಲಿ ಆತ ವಿದ್ವಾಂಸ, ಪ್ರತಿಷ್ಠಿತ ವ್ಯಕ್ತಿಯಾಗುತ್ತಾನೆ. ಪ್ರತಿಯೊಂದು ಕ್ಷೇತ್ರದಲ್ಲಿ ಆತ ಯಶಸ್ಸನ್ನು ಸಂಪಾದಿಸುತ್ತಾನೆ. ಹಾಗಾದರೆ ಬನ್ನಿ ಜಾತಕದಲ್ಲಿ ಈ ಯೋಗ ಹೇಗೆ ನಿರ್ಮಾಣಗೊಳ್ಳುತ್ತದೆ ತಿಳಿದುಕೊಳ್ಳೋಣ, 

ಈ ರೀತಿ ನಿರ್ಮಾಣಗೊಳ್ಳುತ್ತದೆ ಈ ಶುಭಯೋಗ
ಮೊದಲನೆಯದಾಗಿ ಯಾವುದೇ ಓರ್ವ ವ್ಯಕ್ತಿಯ ಜನ್ಮ ಜಾತಕದಲ್ಲಿ ಲಗ್ನೇಶ ಉಚ್ಚಭಾವದಲ್ಲಿದ್ದರೆ ಮತ್ತು ಆತನ ಮೇಲೆ ಗುರುವಿನ ದೃಷ್ಟಿ ಬಿದ್ದರೆ ಆಗ ಚಾಮರ ಯೋಗ ನಿರ್ಮಾಣಗೊಳ್ಳುತ್ತದೆ. ಉದಾಹರಣೆಗೆ ಚಂದ್ರ ಪ್ರಥಮ ಭಾವಕ್ಕೆ ಅಧಿಪತಿಯಾಗಿದ್ದರೆ ಮತ್ತು ತನ್ನ ಉಚ್ಛ ರಾಶಿ ಅಂದರೆ ವೃಷಭ ರಾಶಿಯಲ್ಲಿ ಆತನ ಮೇಲೆ ಗುರುವಿನ ದೃಷ್ಟಿ ಬಿದ್ದರೆ, ಆಗ ಚಾಮರ ಯೋಗ ರೂಪುಗೊಳ್ಳುತ್ತದೆ.

ಎರಡನೆಯದಾಗಿ ಯಾವಾಗ ಒಂದು ಶುಭ ಗ್ರಹ ಲಗ್ನ ಭಾವದಲ್ಲಿ ಸ್ಥಿತನಾಗಿದ್ದರೆ ಮತ್ತು ಶುಭಗ್ರಹದ ಭಾವೇಶ ಅಥವಾ ಲಗ್ನೇಶ ಶುಭ ಭಾವದಲ್ಲಿ ವಿರಾಜಮಾನನಾಗಿದ್ದರೆ ಆಗ ಕೂಡ ಚಾಮರ ಯೋಗ ರೂಪುಗೊಳ್ಳುತ್ತದೆ. 

ಮೂರನೆಯದಾಗಿ ಜನ್ಮ ಜಾತಕದಲ್ಲಿ ಶುಕ್ರಗ್ರಹ ದ್ವಿತೀಯ, ಪಂಚಮ, ಅಷ್ಟಮ ಹಾಗೂ ಏಕಾದಶ ಭಾವದಲ್ಲಿದ್ದು ಮತ್ತು ದೇವಗುರು ಬೃಹಸ್ಪತಿ ಪ್ರಥಮ ಸ್ಥಾನದಲ್ಲಿದ್ದರೆ  ಆಗ ಕೂಡ ಚಾಮರ ಯೋಗ ರೂಪುಗೊಳ್ಳುತ್ತದೆ.

ಇದನ್ನೂ ಓದಿ-ಜಾಗ್ರತಾವಸ್ಥೆಗೆ ಶನಿಯ ಪ್ರವೇಶ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ 4 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ!

ಚಾಮರ ಯೋಗದಿಂದ ಸಿಗುತ್ತದೆ ಈ ಲಾಭ
ಯಾವುದೇ ಓರ್ವ ವ್ಯಕ್ತಿಯ ಜನ್ಮ ಜಾತಕದಲ್ಲಿ ಚಾಮರ ಯೋಗ ರೂಪುಗೊಂಡಾಗ ಆ ವ್ಯಕ್ತಿ ದೂರದೃಷ್ಟಿವುಳ್ಳವ ಹಾಗೂ ಬುದ್ಧಿಶಾಲಿಯಾಗಿರುತ್ತಾನೆ. ಇದಲ್ಲದೆ ವ್ಯಕ್ತಿ ಮುಖಂಡ ಅಥವಾ ಮುಖಂಡ ಹುದ್ದೆಯ ಸರಿಸಮನಾದ ಹುದ್ದೆಯಲ್ಲಿರುತ್ತಾನೆ. ಇದಲ್ಲದೆ ಆತ ದೀರ್ಘಾಯುನಾಗುತ್ತಾನೆ. ಆತನಿಗೆ ಸರ್ಕಾರದ ವತಿಯಿಂದ ಹಲವು ಪುರಸ್ಕಾರಗಳು ಪ್ರಾಪ್ತಿಯಾಗುತ್ತವೆ. ಈ ಯೋಗದ ಪರಿಣಾಮವಶಾತ್ ವ್ಯಕ್ತಿ ಲೇಖಕನಾಗುತ್ತಾನೆ. ಈ ಜನರು ನೇರನುಡಿ ಮಾತನಾಡುವವರಾಗಿರುತ್ತಾರೆ ಹಾಗೂ ಇತರರಿಗೆ ಇವರು ಸಹಾಯ ಕೂಡ ಮಾಡುತ್ತಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹೆಸರನ್ನು ಸಂಪಾದಿಸುತ್ತಾರೆ. ಯಾವ ವ್ಯಕ್ತಿಯ ಜಾತಕದಲ್ಲಿ ಈ ಯೋಗ ಇರುತ್ತದೆಯೋ ಆತ ವೇದಗಳು ಹಾಗೂ ಶಾಸ್ತ್ರಗಳಲ್ಲಿ ಪಾರಂಗತ ವ್ಯಕ್ತಿಯಾಗಿರುತ್ತಾನೆ. 

ಇದನ್ನೂ ಓದಿ-Nag Panchami 2023: ಇಂದು ನಿರ್ಮಾಣಗೊಂಡಿದೆ ಈ ಶುಭಯೋಗ, ಮಹಾದೇವನ ಕೃಪೆಯಿಂದ ಈ ರಾಶಿಗಳ ಭಾಗ್ಯ ಚಿನ್ನದಂತೆ ಹೊಳೆಯಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News