Surya Gochar 2022: ಜುಲೈನಲ್ಲಿ ಸೂರ್ಯನು ಈ 3 ರಾಶಿಯವರ ಅದೃಷ್ಟವನ್ನು ಬೆಳಗುತ್ತಾನೆ

ಸೂರ್ಯ ಸಂಕ್ರಮಣ ಜುಲೈ 2022: ಸೂರ್ಯನ ರಾಶಿಚಕ್ರ ಸಂಚಾರವು ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ. ಜುಲೈ ತಿಂಗಳಲ್ಲಿ ಸೂರ್ಯನು ತನ್ನ ರಾಶಿಯನ್ನು ಬದಲಿಸಿ ಕರ್ಕಾಟಕಕ್ಕೆ ಪ್ರವೇಶಿಸುತ್ತಾನೆ. ಇದು 3 ರಾಶಿಯ ಜನರ ಮೇಲೆ ಬಹಳ ಧನಾತ್ಮಕ ಪರಿಣಾಮ ಬೀರುತ್ತದೆ.

Written by - Puttaraj K Alur | Last Updated : Jul 3, 2022, 09:16 AM IST
  • ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ
  • ಸೂರ್ಯನ ರಾಶಿಯ ಬದಲಾವಣೆಯು ವೃಷಭ ರಾಶಿಯವರಿಗೆ ಹೊಸ ಉದ್ಯೋಗಗಳನ್ನು ನೀಡುತ್ತದೆ
  • ಮಿಥುನ ರಾಶಿಯವರಿಗೆ ಸೂರ್ಯನ ಬದಲಾವಣೆಯು ಅನೇಕ ಶುಭ ಫಲವನ್ನು ನೀಡಲಿದೆ
Surya Gochar 2022: ಜುಲೈನಲ್ಲಿ ಸೂರ್ಯನು ಈ 3 ರಾಶಿಯವರ ಅದೃಷ್ಟವನ್ನು ಬೆಳಗುತ್ತಾನೆ title=
ಸೂರ್ಯ ಸಂಕ್ರಮಣ ಜುಲೈ 2022

ನವದೆಹಲಿ: ಗ್ರಹಗಳ ರಾಜನಾದ ಸೂರ್ಯನು ಜುಲೈ 16ರಂದು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಸೂರ್ಯನು ಮಿಥುನ ರಾಶಿಯನ್ನು ತೊರೆದು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಆಗಸ್ಟ್ 17ರವರೆಗೆ ಕರ್ಕ ರಾಶಿಯಲ್ಲಿಯೇ ಇರುತ್ತಾನೆ. ಸೂರ್ಯನು 1 ತಿಂಗಳಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತಾನೆ ಮತ್ತು ಸೂರ್ಯನ ಸಂಕ್ರಮಣವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಯಶಸ್ಸು, ಆರೋಗ್ಯ, ಆತ್ಮವಿಶ್ವಾಸದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಈ ಬಾರಿ ಸೂರ್ಯನ ರಾಶಿ ಬದಲಾವಣೆಯು 3 ರಾಶಿಯವರಿಗೆ ಸುವರ್ಣ ದಿನಗಳನ್ನು ತರಲಿದೆ. ಸೂರ್ಯನು ಇಡೀ ತಿಂಗಳು ಈ ಜನರಿಗೆ ದಯೆ ತೋರುತ್ತಾನೆ ಮತ್ತು ಹಲವು ಲಾಭದಾಯಕ ಪ್ರಯೋಜನ ನೀಡುತ್ತಾನೆ. ಯಾವ ರಾಶಿಯವರಿಗೆ ಸೂರ್ಯನು ಅದೃಷ್ಟ ತರುತ್ತಾನೆ ಎಂಬುದರ ಬಗ್ಗೆ ತಿಳಿಯಿರಿ.  

ಸೂರ್ಯದೇವ 3 ರಾಶಿಯವರ ಅದೃಷ್ಟ ಬೆಳಗಿಸುತ್ತಾನೆ 

ಮೇಷ ರಾಶಿ: ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ಜನರು ವೃತ್ತಿಯಲ್ಲಿ ಪ್ರಗತಿ ಹೊಂದುತ್ತಾರೆ. ದೊಡ್ಡ ಹುದ್ದೆ ಪಡೆಯುವ ನಿಮ್ಮ ಬಹುದಿನಗಳ ಕನಸು ಈಡೇರಲಿದೆ. ಅದೇ ರೀತಿ ಉದ್ಯೋಗಗಳನ್ನು ಬದಲಾಯಿಸಲು ಸಿದ್ಧರಿರುವ ಜನರು ತಮ್ಮ ಆಯ್ಕೆಯ ಕೆಲಸವನ್ನು ಪಡೆಯಬಹುದು. ಉದ್ಯಮಿಗಳು ಪ್ರಮುಖ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Planet Retrograde: 11 ದಿನಗಳ ನಂತರ 6 ತಿಂಗಳ ಅವಧಿಗೆ 5 ರಾಶಿಗಳಿಗೆ ಈ ಗ್ರಹದ ಪ್ರಕೋಪದಿಂದ ಮುಕ್ತಿ ಸಿಗಲಿದೆ

ವೃಷಭ ರಾಶಿ: ಸೂರ್ಯನ ರಾಶಿಯ ಬದಲಾವಣೆಯು ವೃಷಭ ರಾಶಿಯವರಿಗೆ ಹೊಸ ಉದ್ಯೋಗಗಳನ್ನು ನೀಡುತ್ತದೆ. ನೀವು ಬಯಸಿದ ಸಂಬಳವನ್ನು ಪಡೆಯುವ ಮೂಲಕ ಉದ್ಯೋಗವನ್ನು ಬದಲಾಯಿಸುವ ಸಂತೋಷವನ್ನು ದ್ವಿಗುಣಗೊಳಿಸಬಹುದು. ಕೆಲಸದ ಸ್ಥಳದಲ್ಲಿ ನೀವು ಮೆಚ್ಚುಗೆ ಪಡೆಯುತ್ತೀರಿ. ನೀವು ತುಂಬಾ ಸಂತೋಷವಾಗಿರುವಿರಿ. ಪ್ರವಾಸ ಕೈಗೊಳ್ಳುವವರಿಗೆ ಪ್ರಯಾಣವೂ ಪ್ರಯೋಜನಕಾರಿಯಾಗಲಿದೆ. ವಿಶೇಷವಾಗಿ ವ್ಯಾಪಾರ ವರ್ಗದವರು ಪ್ರಯಾಣದಿಂದ ಹೆಚ್ಚಿನ ಲಾಭ ಪಡೆಯುತ್ತಾರೆ. ಒಟ್ಟಾರೆ ಸೂರ್ಯನು ಕರ್ಕಾಟಕ ರಾಶಿಗೆ ಪ್ರವೇಶಿಸುವುದರಿಂದ ಎಲ್ಲಾ ರೀತಿಯಲ್ಲೂ ಲಾಭವನ್ನು ನೀಡುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಸೂರ್ಯನ ಬದಲಾವಣೆಯು ಶುಭ ಫಲವನ್ನು ನೀಡಲಿದೆ. ಈ ಸಮಯವು ಈ ಜನರಿಗೆ ದೊಡ್ಡ ಲಾಭವನ್ನು ನೀಡುತ್ತದೆ. ಉದ್ಯೋಗಾಕಾಂಕ್ಷಿಗಳು ಬಡ್ತಿ-ಹೆಚ್ಚಳ ಪಡೆಯಬಹುದು. ಹೊಸ ಮೂಲಗಳಿಂದ ಹಣ ಬರುವ ಸಾಧ್ಯತೆಗಳಿವೆ. ಬೇರೆಯವರಿಗೆ ನೀಡಿದ ನಿಮ್ಮ ಹಣವನ್ನು ಹಿಂತಿರುಗಿಸಲಾಗುವುದು. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಯಾರು ತಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸುತ್ತಾರೋ ಅವರು ಯಶಸ್ವಿಯಾಗುತ್ತಾರೆ.

ಇದನ್ನೂ ಓದಿ: Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News