ಈ 3 ರಾಶಿಯವರು ತಿರುಪತಿಗೆ ಹೋಗಬಾರದು..! ಕೆಟ್ಟದ್ದಾಗಬಹುದು ಎಚ್ಚರ..!!

Astrology : ಕೆಲವು ರಾಶಿಚಕ್ರದವರು ತಿರುಪತಿಗೆ ದರ್ಶನಕ್ಕೆ ಹೋಗಬಾರದು ಅಂತ ಹಿಂದೂ ಧರ್ಮಗ್ರಂಥಗಳು ಹೇಳುತ್ತವೆ. ಜನರು ತಮ್ಮ ಸಂಕಷ್ಟಗಳಿಗೆ ಪರಿಹಾರ, ಮನಃಶಾಂತಿಯನ್ನು ಹುಡುಕಿಕೊಂಡು, ಇಲ್ಲವೇ ಆರ್ಥಿಕ ಪ್ರಗತಿಯನ್ನು ಪಡೆಯಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ಅಲ್ಲಿಗೆ ಹೋಗಿ ದರ್ಶನ ಪಡೆದ ನಂತರ ಅವರ ಜೀವನದಲ್ಲಿ ಅನೇಕ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ ಎಂದು ನಂಬಲಾಗಿದೆ. 

Written by - Krishna N K | Last Updated : Jul 6, 2024, 05:37 PM IST
    • ಕೆಲವು ರಾಶಿಚಕ್ರದವರು ತಿರುಪತಿಗೆ ದರ್ಶನಕ್ಕೆ ಹೋಗಬಾರದು
    • ತಿರುಪತಿಗೆ ದರ್ಶನಕ್ಕೆ ಹೋದರೆ ಅವರಿಗೆ ಕೆಟ್ಟ ಫಲಿತಾಂಶಗಳು ಎದುರಾಗುತ್ತವೆ
    • ನೀವು ತಿರುಪತಿಗೆ ಭೇಟಿ ನೀಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.
ಈ 3 ರಾಶಿಯವರು ತಿರುಪತಿಗೆ ಹೋಗಬಾರದು..! ಕೆಟ್ಟದ್ದಾಗಬಹುದು ಎಚ್ಚರ..!! title=

Zodiac signs dont go tirupati : ನಿಮಗೆ ಹಣಕಾಸಿನ ಸಮಸ್ಯೆಗಳಿದ್ದರೆ ನೀವು ತಿಂಗಳ ಮೊದಲ ಸೋಮವಾರದಂದು ಬಾಲಾಜಿ ದರ್ಶನವನ್ನು ಮಾಡಬೇಕು. ಹೀಗೆ ಮಾಡಿದರೆ ವರ್ಷಾಂತ್ಯದೊಳಗೆ ಕೋಟಿಗಟ್ಟಲೆ ಹಣ ಗಳಿಸುವ ಅವಕಾಶ ಸಿಗುತ್ತದೆ. ಆದರೆ ಈ ಕೆಳಗೆ ನೀಡಿರುವ ರಾಶಿಚಕ್ರದವರು ತಿರುಪತಿಗೆ ದರ್ಶನಕ್ಕೆ ಹೋದರೆ ಅವರಿಗೆ ಕೆಟ್ಟ ಫಲಿತಾಂಶಗಳು ಎದುರಾಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. 

ಹೌದು.. ಕೆಲವರು ತಿರುಪತಿಯಲ್ಲಿ ಪೂಜೆ ಸಲ್ಲಿಸಿದರೆ ಅವರ ಮನೆಯಲ್ಲಿ ಸಾವು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಕೆಲವರು ಅಪಘಾತಕ್ಕೀಡಾಗಬಹುದು ಮತ್ತು ಗಾಯಗೊಳ್ಳಬಹುದು. ತಿರುಪತಿಗೆ ಭೇಟಿ ನೀಡಿದ ನಂತರ ನಿಮಗೆ ಇಂತಹದ್ದೇನಾದರೂ ಸಂಭವಿಸಿದರೆ ನೀವು ತಿರುಪತಿಗೆ ಭೇಟಿ ನೀಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. 

ಇದನ್ನೂ ಓದಿ:Surya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆ

ತಿರುಪತಿಯಲ್ಲಿ ಚಂದ್ರ ಭಗವಾನರ ಪ್ರಭಾವ ಹೆಚ್ಚಾಗಿ ಕಂಡುಬರುತ್ತದೆ. ಇದು ಕೆಲವರ ಮನಸ್ಸಿಗೆ ನೆಮ್ಮದಿ, ಕುಟುಂಬ ಸಮಸ್ಯೆ ನಿವಾರಣೆಗೆ ಕಾರಣವಾಗುತ್ತದೆ. ಆದರೆ ಇನ್ನು ಕೆಲವರ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ನೀವು ತಿರುಪತಿಗೆ ಭೇಟಿ ನೀಡಿದ ನಂತರ ಈ ಲಕ್ಷಣಗಳು ಕಂಡುಬಂದರೆ, ನೀವು ಅಲ್ಲಿಗೆ ಹೋಗುವುದನ್ನು ತಪ್ಪಿಸಬೇಕು. ಯಾವ ರಾಶಿಯವರು ತಿರುಪತಿಗೆ ಹೋಗಬಾರದು..? ತಿಳಿಯೋಣ ಬನ್ನಿ..

ಹಿಂದೂ ಶಾಸ್ತ್ರಗಳ ಪ್ರಕಾರ, ಈ 3 ರಾಶಿಗೆ ಸೇರಿದವರು ತಿರುಪತಿಗೆ ಹೋಗುವುದನ್ನು ತಪ್ಪಿಸಬೇಕು, ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದರೆ, ಜೀವನದುದ್ದಕ್ಕೂ ಸಾಲದಲ್ಲಿ ಉಳಿಯುತ್ತಾರೆ. ವರ್ಷಕ್ಕೊಮ್ಮೆ ತಿರುಪತಿಗೆ ಭೇಟಿ ನೀಡಿದರೆ ಯಾವುದೇ ಹಾನಿ ಇಲ್ಲ. ಆದರೆ ಆಗಾಗ್ಗೆ ತಿರುಪತಿಗೆ ಭೇಟಿ ನೀಡಿದರೆ ಅವರ ಜೀವನದಲ್ಲಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಮೂರು ರಾಶಿಗಳ ಹೊರತಾಗಿ ಬೇರೆ ರಾಶಿಯ ವ್ಯಕ್ತಿಗಳು ಯಾವಾಗ ಬೇಕಾದರೂ ತಿರುಪತಿಗೆ ಭೇಟಿ ನೀಡಿ ದರ್ಶನ ಪಡೆಯಬಹುದು. 

ಇದನ್ನೂ ಓದಿ:Vastu Tips: ಮನೆಯಲ್ಲಿ ಗಾಜಿನ & ಲೋಹದ ಆಮೆ ಇಟ್ಟರೆ ಶುಭವೋ ಅಥವಾ ಅಶುಭವೋ?

ತಿರುಪತಿಯು ಬಹಳಷ್ಟು ಕಾಸ್ಮಿಕ್ ಶಕ್ತಿಯನ್ನು ಹೊಂದಿದೆ. ಸಿಂಹ, ಧನು, ಕುಂಭ ರಾಶಿಗಳನ್ನು ಹೊರತುಪಡಿಸಿ ಇತರೆ ರಾಶಿಯ ಜನರು ತಿರುಪತಿಗೆ ಭೇಟಿ ನೀಡಿದರೆ ವಿಶ್ವಶಕ್ತಿಯಿಂದ ಲಾಭವಾಗುತ್ತದೆ ಎಂಬುದು ಹಿಂದೂಗಳಲ್ಲಿ ವ್ಯಾಪಕವಾದ ನಂಬಿಕೆಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News