Tulsi Vastu Tips: ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇ ತುಳಸಿ ನೀರು

Tulsi Vastu Tips: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ತುಳಸಿ ಸಸ್ಯಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳು ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. 

Written by - Yashaswini V | Last Updated : Aug 11, 2023, 08:31 AM IST
  • ಧಾರ್ಮಿಕ ನಂಬಿಕೆಗಳ ಪ್ರಕಾರ, ವಿಷ್ಣು ಪ್ರಿಯೆ ಎಂದು ಕರೆಯಲ್ಪಡುವ ತುಳಸಿ ಸಸ್ಯದಲ್ಲಿ ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮೀ ನೆಲೆಸಿರುತ್ತಾಳೆ
  • ತುಳಸಿಯನ್ನು ಪೂಜಿಸುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿಯ ವಿಶೇಷ ಆಶೀರ್ವಾದವೂ ಇರುತ್ತದೆ ಎಂದು ನಂಬಲಾಗಿದೆ.

    ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಂಗಳದಲ್ಲಿ ಇಲ್ಲವೇ ಬಾಲ್ಕನಿಯಲ್ಲಿ ತುಳಸಿ ಸಸ್ಯವನ್ನು ಸ್ಥಾಪಿಸಬೇಕು.
Tulsi Vastu Tips: ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇ ತುಳಸಿ ನೀರು  title=

Tulsi Vastu Tips: ಪ್ರತಿ ಭಾರತೀಯರ ಮನೆಯಲ್ಲೂ ತುಳಸಿ ಸಸ್ಯ ಕಂಡು ಬರುತ್ತದೆ. ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯವನ್ನು ಮಹಿಳೆಯರು ನಿತ್ಯ ಪೂಜಿಸುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಹಣಕಾಸಿನ ತೊಂದರೆ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ವಿಷ್ಣು ಪ್ರಿಯೆ ಎಂದು ಕರೆಯಲ್ಪಡುವ ತುಳಸಿ ಸಸ್ಯದಲ್ಲಿ ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮೀ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ, ತುಳಸಿ ಗಿಡವನ್ನು ನೆಡುವುದು ಮನೆಯಲ್ಲಿ ಧನಾತ್ಮಕತೆಯನ್ನು ತರುತ್ತದೆ. ಅಷ್ಟೇ ಅಲ್ಲ, ನಿತ್ಯ ತುಳಸಿಯನ್ನು ಪೂಜಿಸುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿಯ ವಿಶೇಷ ಆಶೀರ್ವಾದವೂ ಇರುತ್ತದೆ ಎಂದು ನಂಬಲಾಗಿದೆ. 

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಂಗಳದಲ್ಲಿ ಇಲ್ಲವೇ ಬಾಲ್ಕನಿಯಲ್ಲಿ ತುಳಸಿ ಸಸ್ಯವನ್ನು ಸ್ಥಾಪಿಸಬೇಕು. ನಿತ್ಯ ಮುಂಜಾನೆ ತುಳಸಿಯನ್ನು ಪೂಜಿಸುವುದರ ಜೊತೆಗೆ ಪ್ರತಿ ದಿನ ಮುಸ್ಸಂಜೆ ವೇಳೆಯಲ್ಲಿ ತುಳಸಿ ಸಸ್ಯದ ಮುಂದೆ ತುಪ್ಪದ ದೀಪ ಬೆಳಗಿಸುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿಯ ಪ್ರವೇಶವಾಗಿ ಆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. 

ಇದನ್ನೂ ಓದಿ- Vastu Tips: ಶ್ರಾವಣ ಮಾಸದಲ್ಲಿ ಈ ಸಸ್ಯಗಳನ್ನು ಮನೆಗೆ ತಂದರೆ ಸಿಗುತ್ತೆ ಸಿರಿವಂತರಾಗುವ ಭಾಗ್ಯ

ಇದಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ನೀರನ್ನು ಸಹ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ತುಳಸಿ ನೀರಿನ ಪರಿಹಾರ ಕೈಗೊಳ್ಳುವುದರಿಂದ ಜೀವನದಲ್ಲಿ ತಲೆದೂರಿರುವ ನಾನಾ ರೀತಿಯ ಸಂಕಷ್ಟಗಳಿದ್ನ ಪರಿಹಾರ ಪಡೆಯಬಹುದು.  ತುಳಸಿ ನೀರಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಆರೋಗ್ಯ ವೃದ್ಧಿ, ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಧನ ಲಾಭವನ್ನೂ ಪಡೆಯಬಹುದು ಎಂದು ನಂಬಲಾಗಿದೆ. 

ಆರೋಗ್ಯ ವೃದ್ಧಿ, ವ್ಯವಹಾರದಲ್ಲಿ ಪ್ರಗತಿ, ಧನ ಲಾಭಕ್ಕಾಗಿ ಇಂದೇ ಮಾಡಿ ತುಳಸಿ ನೀರಿನ ಪರಿಹಾರ: 
* ಧನಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸಲು ತುಳಸಿ ನೀರನ್ನು ಈ ರೀತಿ ಬಳಸಿ: 

ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ವೇಳೆ ತುಳಸಿ ದಳಗಳನ್ನು ನೀರಿನಲ್ಲಿ ನೆನೆಸಿಟ್ಟು ಪ್ರತಿ ದಿನ ಪೂಜೆಯ ಬಳಿಕ ಆ ತುಳಸಿ ನೀರನ್ನು ಮನೆಯಲ್ಲಿ ಎಲ್ಲೆಡೆ ಪ್ರೋಕ್ಷಣೆ ಮಾಡುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. 

* ವ್ಯವಹಾರದಲ್ಲಿ ಪ್ರಗತಿಗಾಗಿ ತುಳಸಿ ನೀರಿನ ಪರಿಹಾರ: 
ನೀವು ವ್ಯಾಪಾರ-ವ್ಯವಹಾರದಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರೆ ಇದರಿಂದ ಪರಿಹಾರ ಪಡೆಯಲು ತುಳಸಿ ಎಲೆಗಳನ್ನು ಮೂರು ದಿನಗಳ ಕಾಲ ನೀರಿನಲ್ಲಿ ನೆನೆಸಿ ಇಡಿ. ಮೂರು ದಿನಗಳ ಬಳಿಕ ಈ ನೀರನ್ನು ನಿಮ್ಮ ವ್ಯಾಪಾರ ಸ್ಥಳ ಕಚೇರಿ, ಅಂಗಡಿ ಇಲ್ಲವೇ ಕಾರ್ಖಾನೆಗೆ ತೆಗೆದುಕೊಂಡು ಹೋಗಿ ಪ್ರತಿ ದಿನ ಬೆಳಿಗ್ಗೆ ಸಂಜೆ ದೀಪ ಬೆಳಗಿಸಿದ ನಂತರ ಎಲ್ಲೆಡೆ ಸಿಂಪಡಿಸಿ. ಇದರಿಂದ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯ ಹಾದಿ ತೆರೆಯಲಿದೆ. 

ಇದನ್ನೂ ಓದಿ- Lucky Plants: ವೃತ್ತಿ-ವ್ಯವಹಾರದಲ್ಲಿ ಪ್ರಗತಿಗಾಗಿ ನಿಮ್ಮ ಮನೆಯಲ್ಲೂ ಇರಲಿ ಈ ಸಸ್ಯಗಳು

* ಅನಾರೋಗ್ಯದಿಂದ ಮುಕ್ತಿಗಾಗಿ ತುಳಸಿ ನೀರಿನ ಪರಿಹಾರ: 
ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ನಿತ್ಯ ಸ್ನಾನವಾದ ಬಳಿಕ ಅವರ ಮೇಲೆ ತುಳಸಿ ನೀರನ್ನು ಸಿಂಪಡಿಸಿ. ಇದರೊಂದಿಗೆ ಅವರು ತುಳಸಿಯನ್ನು ಪೂಜಿಸಿ ತುಳಸಿ ತೀರ್ಥವನ್ನು ತೆಗೆದುಕೊಳ್ಳುತ್ತಾ ಬಂದರೆ ಶೀಘ್ರದಲ್ಲೇ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News