ಸಾವು ಸಮೀಪಿಸಿದಾಗ ಈ ನಾಲ್ಕು ವಸ್ತುಗಳು ಹತ್ತಿರವಿರುವ ವ್ಯಕ್ತಿಗೆ ಯಮ ಶಿಕ್ಷೆ ನೀಡುವುದಿಲ್ಲವಂತೆ!

Teachings Of Garud Puran: ಮನುಷ್ಯನ ಸಾವು ಹಾಗೂ ಸಾವಿನ ಬಳಿಕದ ಜೀವನದ ಕುರಿತು ಮಾಹಿತಿ ನೀಡುವ ಒಂದು ಗ್ರಂಥ ಎಂದರೆ ಅದುವೇ ಗರುಡ ಪುರಾಣ. ಈ ಗರುಡ ಪುರಾಣದಲ್ಲಿ ಸಾವಿನ ಸಂದರ್ಭದಲ್ಲಿ ಯಾವ ಸಂಗತಿಗಳಿದ್ದರೆ, ಸಾವಿನ ಬಳಿಕ ಆತನಿಗೆ ಯಮ ದಂಡ ಬೀಳುವುದಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ.

Written by - Nitin Tabib | Last Updated : Jul 10, 2023, 11:26 PM IST
  • ವ್ಯಕ್ತಿ ಸಾವನ್ನಪ್ಪುವ ಮೊದಲು ಆತನ ಬಾಯಿಯಲ್ಲಿ ತುಳಸಿ ಎಳೆಯನ್ನು ಇಡಲಾಗುತ್ತದೆ.
  • ತುಳಸಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಪೂಜನೀಯವೆಂದು ಪರಿಗಣಿಸಲಾಗಿದೆ.
  • ಮರಣದ ಮೊದಲು, ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲದೊಂದಿಗೆ ತುಳಸಿ ಬೆರೆಸಲಾಗುತ್ತದೆ.
ಸಾವು ಸಮೀಪಿಸಿದಾಗ ಈ ನಾಲ್ಕು ವಸ್ತುಗಳು ಹತ್ತಿರವಿರುವ ವ್ಯಕ್ತಿಗೆ ಯಮ ಶಿಕ್ಷೆ ನೀಡುವುದಿಲ್ಲವಂತೆ! title=

Teachings Of Garud Puran: ಒಬ್ಬ ವ್ಯಕ್ತಿಯು ತನ್ನ ಕರ್ಮಗಳ ಆಧಾರದ ಮೇಲೆ ಫಲಗಳನ್ನು ಪಡೆಯುತ್ತಾನೆ ಎಂಬುದನ್ನು ನಮ್ಮ ಮನೆಯಲ್ಲಿನ ಗುರುಹಿರಿಯರು ಹೇಳುವುದನ್ನು ನೀವೂ ಕೂಡ ಕೇಳಿರಬಹುದು. ಕೆಟ್ಟ ಕರ್ಮಗಳನ್ನು ಮಾಡಿದಾಗ, ಒಬ್ಬ ವ್ಯಕ್ತಿಯು ತನ್ನ ಕರ್ಮಗಳ ಪರಿಣಾಮವನ್ನು ಖಂಡಿತವಾಗಿಯೂ ಅನುಭವಿಸಬೇಕಾಗುತ್ತದೆ. ಜೀವಿತಾವಧಿಯಲ್ಲಿ ಮಾತ್ರವಲ್ಲದೆ ಮರಣಾನಂತರವೂ ಒಬ್ಬ ವ್ಯಕ್ತಿಯು ತನ್ನ ಕರ್ಮಗಳಿಗೆ ಅನುಗುಣವಾಗಿ ಫಲಿತಾಂಶವನ್ನು ಪಡೆಯುತ್ತಾನೆ. ಇದನ್ನು ಗರುಡ ಪುರಾಣದಲ್ಲೂ ಉಲ್ಲೇಖಿಸಲಾಗಿದೆ. ಗರುಡ ಪುರಾಣವು ಸನಾತನ ಹಿಂದೂ ಧರ್ಮದ ಒಂದು ಮಹತ್ವದ ಗ್ರಂಥಗಳಲ್ಲಿ ಒಂದಾಗಿದೆ, ಇದರಲ್ಲಿ ಜೀವನ-ಮರಣ ಮತ್ತು ಸ್ವರ್ಗ-ನರಕಗಳನ್ನು ಜೀವನದ ಕುರಿತು ಉಲ್ಲೇಖಿಸಲಾಗಿದೆ. ಸತ್ತ ವ್ಯಕ್ತಿಗೂ ಅವನ ಕರ್ಮಕ್ಕನುಗುಣವಾಗಿ ಸ್ವರ್ಗ ಅಥವಾ ನರಕ ಸಿಗುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಮೃತರ ಆತ್ಮಕ್ಕೆ ಮೋಕ್ಷ ಸಿಗಲೆಂದು ಮನೆಯಲ್ಲಿಯೇ 13 ದಿನಗಳ ಕಾಲ ಗರುಡಪುರಾಣವನ್ನು ಪಠಿಸಬೇಕೆಂಬ ನಿಯಮವಿದೆ.

ಸಾವಿನ ನಂತರ ಆತ್ಮಕ್ಕೆ ಏನಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದು ವ್ಯಕ್ತಿಯ ಕರ್ಮವನ್ನು ಅವಲಂಬಿಸಿರುತ್ತದೆ. ಆದರೆ ಸತ್ತ ವ್ಯಕ್ತಿ ಅಥವಾ ವ್ಯಕ್ತಿಗೆ ಸಾವಿನ ಭಾವನೆ ಬಂದ ತಕ್ಷಣ ಕೆಲವು ವಸ್ತುಗಳನ್ನು ಇರಿಸಿದರೆ, ಯಮರಾಜನು ಅವನ ಪಾಪಗಳನ್ನು ಕ್ಷಮಿಸುತ್ತಾನೆ ಮತ್ತು ಅವನನ್ನು ಶಿಕ್ಷಿಸುವುದಿಲ್ಲ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಆ ವಸ್ತುಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಗಂಗಾಜಲ
ಧರ್ಮಗ್ರಂಥಗಳಲ್ಲಿ ಗಂಗಾನದಿಯ ನೀರು ಮೊಕ್ಷಪ್ರಾಪ್ತಿಗೆ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಸಾಯುವ ಮುನ್ನ ಗಂಗಾಜಲವನ್ನು ಬಾಯಿಗೆ ಹಾಕಿದರೆ ದೇಹ ಶುದ್ಧಿಯಾಗುತ್ತದೆ. ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ಮರಣದ ನಂತರ ಯಮಲೋಕದಲ್ಲಿ ಶಿಕ್ಷೆಯನ್ನು ಎದುರಿಸುವುದಿಲ್ಲ ಎನ್ನಲಾಗುತ್ತದೆ.

ತುಳಸಿ
ವ್ಯಕ್ತಿ ಸಾವನ್ನಪ್ಪುವ ಮೊದಲು ಆತನ ಬಾಯಿಯಲ್ಲಿ ತುಳಸಿ ಎಳೆಯನ್ನು ಇಡಲಾಗುತ್ತದೆ. ತುಳಸಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಪೂಜನೀಯವೆಂದು ಪರಿಗಣಿಸಲಾಗಿದೆ. ಮರಣದ ಮೊದಲು, ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲದೊಂದಿಗೆ ತುಳಸಿ ಬೆರೆಸಲಾಗುತ್ತದೆ. ಗರುಡ ಪುರಾಣದ ಪ್ರಕಾರ, ಸಾಯುತ್ತಿರುವ ವ್ಯಕ್ತಿಯ ತಲೆಯ ಬಳಿ ತುಳಸಿ ಗಿಡ ಅಥವಾ ಎಲೆಗಳನ್ನು ಇಡುವುದರಿಂದ ಒಬ್ಬ ವ್ಯಕ್ತಿಯು ತನ್ನ ಶರೀರವನ್ನು ತ್ಯಾಗ ಮಾಡಲು ಸುಲಭವಾಗಿಸುತ್ತದೆ ಎನ್ನಲಾಗಿದೆ.

ಶ್ರೀಮದ್ಭಗವದ್ಗೀತೆ ಪುಸ್ತಕ
ಒಬ್ಬ ವ್ಯಕ್ತಿಯು ಮರಣಹೊಂದಿದ್ದರೆ ಅಥವಾ ಅವನು ತನ್ನ ಪ್ರಾಣವನ್ನು ತ್ಯಜಿಸಲು ಹೊರಟಿದ್ದಾನೆ ಎಂಬುದನ್ನು ತಿಳಿದಾಗ, ಆತನ ಮುಂದೆ ಶ್ರೀಮದ್ಭಗವದ್ಗೀತೆ ಅಥವಾ ಇನ್ನಾವುದೇ ಧಾರ್ಮಿಕ ಪುಸ್ತಕವನ್ನು ಇಡಬೇಕು ಅಥವಾ ಅದನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಅವನ ಮರಣಾನಂತರ ಯಮರಾಜನ ಶಿಕ್ಷೆಯಿಂದ ಮುಕ್ತಿ ಪಡೆದು ಮೋಕ್ಷವನ್ನು ಪಡೆಯುತ್ತಾನೆ ಎನ್ನಲಾಗುತ್ತದೆ.

ಇದನ್ನೂ ಓದಿ-ಎಷ್ಟೇ ಕಷ್ಟಪಟ್ಟರು ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತಿಲ್ಲವೇ? ಕೆಂಪು ಚಿನ್ನದ ಈ ಉಪಾಯ ಅನುಸರಿಸಿ ನೋಡಿ!

ದೇವರ ಹೆಸರನ್ನು ತೆಗೆದುಕೊಳ್ಳಿ
ಪ್ರಾಣ ಬಿಡುವ ಮುನ್ನ ಭಗವಂತನ ನಾಮಸ್ಮರಣೆ ಮಾಡಿದರೆ ಅಥವಾ ಅದನ್ನು ಸ್ಮರಿಸಿದರೆ ಮರಣಾನಂತರ ಯಮರಾಜನ ಶಿಕ್ಷೆಯನ್ನು ಅನುಭವಿಸಬೇಕಿಲ್ಲ ಮತ್ತು ದೇವರ ಪಾದದಲ್ಲಿ ಆ ವ್ಯಕ್ತಿ ಸ್ಥಾನ ಪಡೆಯುತ್ತಾನೆ ಎನ್ನಲಾಗುತ್ತದೆ.

ಇದನ್ನೂ ಓದಿ-ಕೇವಲ ಮೂರು ದಿನಗಳು ಅಷ್ಟೇ, ಬಳಿಕ ಈ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News