ಬೆಂಗಳೂರು: ಫ್ಲಿಪ್’ಕಾರ್ಟ್ ಸಹ ಕಂಪನಿ ಕ್ಲಿಯರ್ ಟ್ರಿಪ್, ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಈ ಸಹಯೋಗವು ಕ್ಲಿಯರ್ ಟ್ರಿಪ್’ಗೆ ಮಹತ್ವದ ಮೈಲಿಗಲ್ಲಾಗಿದ್ದು, ಮಹೇಂದ್ರ ಸಿಂಗ್ ಧೋನಿ ಪ್ರಯಾಣದಲ್ಲಿ ಸೇರಿಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: ವಿಂಟೇಜ್ ಕಾರು-ಬೈಕ್’ಗಳ ರ್ಯಾಲಿ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ
ಕ್ಯಾಪ್ಟನ್ ಕೂಲ್ ಎಂದೇ ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ ಅವರು ಪಾರದರ್ಶಕ, ಆಶಾವಾದ ಮತ್ತು ನೇರ ಮಾತುಳಿಗೆ ಖ್ಯಾತರಾಗಿದ್ದಾರೆ. ಅವರು ಕ್ಲಿಯರ್ಟ್ರಿಪ್’ನ ಮೌಲ್ಯಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ. ಈ ಸಹಯೋಗದ ಮೂಲಕ ಕ್ಲಿಯರ್ಟ್ರಿಪ್ ಮಹೇಂದ್ರ ಸಿಂಗ್ ಧೋನಿಯ ಅವರ ಸಾರ್ವತ್ರಿಕ ಜನಾಕರ್ಷಣೆಯನ್ನು ಬಳಸಿಕೊಂಡು ವಿವಿಧ ಭೌಗೋಳಿಕ ಪ್ರದೇಶದಾದ್ಯಂತ ಇರುವ ವೈವಿಧ್ಯಮಯ ಗ್ರಾಹಕರಿಗೆ ಬ್ರಾಂಡ್ ಅನ್ನು ವಿಶ್ವಾಸಾರ್ಹ ಟ್ರಾವೆಲ್ ಪಾರ್ಟ್ನರ್ ಆಗಿ ಬಿಂಬಿಸಲಿದೆ.
ಕ್ಲಿಯರ್ಟ್ರಿಪ್ ಬ್ರಾಂಡ್ ಅಂಬಾಸಿಡರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಮಾತನಾಡಿ, “ನನ್ನ ವೃತ್ತಿಜೀವನದುದ್ದಕ್ಕೂ ಹಲವಾರು ಖಂಡಗಳಲ್ಲಿ ಪ್ರಯಾಣಿಸಿದ್ದೇನೆ. ಆ ಮೂಲಕ ನಾನು ನಿಜವಾದ ಗ್ಲೋಬ್ಟ್ರೋಟರ್(ವ್ಯಾಪಕವಾಗಿ ಪ್ರಯಾಣಿಸುವ ವ್ಯಕ್ತಿ) ಆಗಿದ್ದೇನೆ ಮತ್ತು ಪ್ರಯಾಣದ ಮೇಲಿನ ಪ್ರೀತಿಯನ್ನು ಆ ಮೂಲಕ ಕಂಡುಕೊಂಡಿದ್ದೇನೆ. ಆನಂದ, ನೆನಪುಗಳು ಮತ್ತು ಅರ್ಥಪೂರ್ಣತೆ ಒದಗಿಸುವ ಪ್ರವಾಸ ಒದಗಿಸಲು ಬದ್ಧರಾಗಿರುವ ಬ್ರ್ಯಾಂಡ್ ಕ್ಲಿಯರ್ಟ್ರಿಪ್ ಪ್ರಯಾಣದ ಭಾಗವಾಗಲು ನಾನು ಹೆಚ್ಚು ಸಂತೋಷಗೊಂಡಿದ್ದೇನೆ” ಎಂದು ಹೇಳಿದ್ದಾರೆ.
“ನನ್ನ ವೃತ್ತಿಜೀವನದಲ್ಲಿ ನಾನು ಪ್ರತಿದಿನ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತಲೇ ಇರುತ್ತೇನೆ. ಆದರೆ ಕ್ಲಿಯರ್ಟ್ರಿಪ್ನಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರುತ್ತದೆ ಮತ್ತು ನೇರವಾಗಿರುತ್ತದೆ. ಅವರ ಪಾರದರ್ಶಕತೆ ಕಡೆಗಿನ ಬದ್ಧತೆಯಿಂದ ಆಯ್ಕೆ ನಿರ್ಧಾರ ತೆಗೆದುಕೊಳ್ಳುವುದು ಸರಳವಾಗುತ್ತದೆ ಮತ್ತು ಕನಸಿನ ಪ್ರವಾಸವನ್ನು ಆತ್ಮವಿಶ್ವಾಸದಿಂದ ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಎಳನೀರಿಗೆ ಈ ಬೀಜ ಬೆರೆಸಿ ಕುಡಿದರೆ ಯಾವತ್ತೂ ಹೆಚ್ಚಾಗಲ್ಲ ಬ್ಲಡ್ ಶುಗರ್! ಆದ್ರೆ ಕುಡಿಯುವ ಸಮಯ ಇದೇ ಆಗಿರಲಿ
ಸಹಯೋಗದ ಕುರಿತು ಮಾತನಾಡಿದ ಕ್ಲಿಯರ್ಟ್ರಿಪ್ನ ಸಿಇಓ ಅಯ್ಯಪ್ಪನ್ ಆರ್, “ಮಹೇಂದ್ರ ಸಿಂಗ್ ಧೋನಿ ಅವರನ್ನು ಕ್ಲಿಯರ್ಟ್ರಿಪ್ ಕುಟುಂಬಕ್ಕೆ ಸ್ವಾಗತಿಸಲು ನಾವು ಸಂತಸ ಪಡುತ್ತೇವೆ. ಇಡೀ ಪೀಳಿಗೆಗೆ ಸ್ಫೂರ್ತಿ ನೀಡಿದ ಗೌರವಾನ್ವಿತ ಕ್ರೀಡಾಪಟುವಾಗಿದ್ದಾರೆ ಮತ್ತು ತಮ್ಮ ಮೌಲ್ಯಗಳಿಂದ ಹೆಸರುವಾಸಿಯಾಗಿದ್ದಾರೆ. ನಂಬಿಕಾರ್ಹ ಮತ್ತು ಉತ್ತಮ ನಾಯಕತ್ವ ಗುಣ ಹೊಂದಿದ್ದಾರೆ. ಅವರೊಂದಿಗಿನ ಒಡನಾಟದ ಮೂಲಕ, ನಾವು ಗ್ರಾಹಕರಿಗೆ ಪ್ರಯಾಣದ ವಿಚಾರದಲ್ಲಿ ಅತ್ಯುತ್ತಮವಾದ ಮತ್ತು ಸರಿಯಾದ ಆಯ್ಕೆಗಳನ್ನು ನಿರಾತಂಕವಾಗಿ ಮಾಡುವ ಅವಕಾಶ ಒದಗಿಸುತ್ತೇವೆ. ನಾವು ಬೆಳೆಯುತ್ತಾ ಹೋದಂತೆ ಎಲ್ಲರಿಗೂ ಅವರು ಯಾವುದೇ ಹಂತದಲ್ಲಿ ಇರುವವರಾದರೂ ಅವರಿಗೆ ಪ್ರಯಾಣ ಮಾಡುವ ಅವಕಾಶ ಒದಗಿಸುವ ಭರವಸೆ ಹೊಂದಿದ್ದೇವೆ. ಮಹೇಂದ್ರ ಸಿಂಗ್ ಧೋನಿ ಅವರ ಸಹಯೋಗದ ಜೊತೆಗೆ ನಾವು ದೊಡ್ಡ ಮಟ್ಟದ ಜನರಿಗೆ ವಿಶ್ವಾಸದ ಜೊತೆಗೆ ಜಗತ್ತು ಸುತ್ತುವ ಪ್ರೋತ್ಸಾಹವನ್ನು ನೀಡಲಿದ್ದೇವೆ” ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ