ಕಾನ್ಪುರ ಟೆಸ್ಟ್ ನಲ್ಲಿ ಈ ಫಾಸ್ಟ್ ಬೌಲರ್ ಗಳಿಗೆ ಕೊಕ್ !ತಂಡಕ್ಕೆ ಮಾರಕ ಬೌಲರ್ ಎಂಟ್ರಿ !ಹೀಗಿರಲಿದೆ ಟೀಂ ಇಂಡಿಯಾದ ಪ್ಲೇಯಿಂಗ್ 11

IND vs BAN 2nd Test Playing XI:ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡನೇ  ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ.ಈ ಬಾರಿ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದೆ.   

Written by - Ranjitha R K | Last Updated : Sep 23, 2024, 11:39 AM IST
  • ತಂಡದಲ್ಲಿ ಬದಲಾವಣೆ ಮಾಡುತ್ತಾರಾ ರೋಹಿತ್ ಶರ್ಮಾ
  • ಈ ಬೌಲರ್ ಗಳಿಗೆ ಸಿಗಲಿದೆಯಾ ಕೊಕ್
  • ತಂಡಕ್ಕೆ ಹೊಸ ಬೌಲರ್ ಸೇರ್ಪಡೆ
ಕಾನ್ಪುರ ಟೆಸ್ಟ್ ನಲ್ಲಿ ಈ ಫಾಸ್ಟ್ ಬೌಲರ್ ಗಳಿಗೆ ಕೊಕ್ !ತಂಡಕ್ಕೆ  ಮಾರಕ ಬೌಲರ್ ಎಂಟ್ರಿ !ಹೀಗಿರಲಿದೆ  ಟೀಂ ಇಂಡಿಯಾದ ಪ್ಲೇಯಿಂಗ್ 11  title=

IND vs BAN 2nd Test Playing XI:ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 280 ರನ್‌ಗಳಿಂದ ಸೋಲಿಸಿತು.ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.ಇದೀಗ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ಸೆಪ್ಟೆಂಬರ್ 27 ರಿಂದ ನಡೆಯಲಿದೆ.

ತಂಡದಲ್ಲಿ ಬದಲಾವಣೆ ಮಾಡುತ್ತಾರಾ ರೋಹಿತ್ ಶರ್ಮಾ ?: 
ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯಲಿರುವ ಈ ಪಂದ್ಯ ನಿರ್ಣಾಯಕವಾಗಿರಲಿದೆ. ಟೀಮ್ ಇಂಡಿಯಾಗೆ ಎರಡನೇ ಟೆಸ್ಟ್ ಮಹತ್ವದ್ದಾಗಿದೆ.ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವುದು ಮುಖ್ಯವಾಗಿದೆ.ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಮೂವರು ಫಾಸ್ಟ್ ಬೌಲರ್‌ಗಳೊಂದಿಗೆ ಕಣಕ್ಕಿಳಿದಿತ್ತು.  ಆದರೆ ಕಾನ್ಪುರ ಟೆಸ್ಟ್ ನಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. 

ಇದನ್ನೂ ಓದಿ : ಹೊರಬಿತ್ತು CSK ರಿಟೈನ್‌ ಲಿಸ್ಟ್‌: ಧೋನಿಗೋಸ್ಕರ ತಂಡದ ಪ್ರಮುಖ ಆಟಗಾರನನ್ನೇ ಹೊರಗಿಟ್ಟ ಫ್ರಾಂಚೈಸಿ! ಆತ ಬೇರಾರು ಅಲ್ಲ...

ಮೊಹಮ್ಮದ್ ಸಿರಾಜ್ ಗೆ ಕೊಕ್ ? : 
ಭಾರತದ ಅನುಭವಿ ಫಾಸ್ಟ್ ಬೌಲರ್ ಮೊಹಮ್ಮದ್ ಸಿರಾಜ್ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.ಸಿರಾಜ್ ಗಿಂತ ಈ ಪಂದ್ಯದಲ್ಲಿ ಯುವ ಆಟಗಾರ ಆಕಾಶ್ ದೀಪ್‌ ಉತ್ತಮ ಪ್ರದರ್ಶನ ನೀಡಿದ್ದರು.ಹಾಗಾಗಿ ಭಾರತ ತಂಡವು ಮೂವರು ಸ್ಪಿನ್ ಬೌಲರ್‌ಗಳನ್ನು ತಂಡದಲ್ಲಿ ಇರಿಸಿಕೊಂಡರೆ ಸಿರಾಜ್‌ಗೆ ವಿಶ್ರಾಂತಿ ನೀಡಬಹುದು.

ಯಶ್ ದಯಾಳ್‌ ಪಾದಾರ್ಪಣೆ ? :
ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಡಗೈ ವೇಗದ ಬೌಲರ್ ಯಶ್ ದಯಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.ಚೆನ್ನೈನಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.  ರೋಹಿತ್ ಶರ್ಮಾ ಕಾನ್ಪುರದಲ್ಲಿ ಮೂವರು ಫಾಸ್ಟ್ ಬೌಲರ್‌ಗಳೊಂದಿಗೆ ಹೋಗಲು ನಿರ್ಧರಿಸಿದರೆ,ಸಿರಾಜ್ ಅಥವಾ ಬುಮ್ರಾ ಅವರಿಗೆ ವಿಶ್ರಾಂತಿ ನೀಡಬಹುದು.ಅವರ ಸ್ಥಾನದಲ್ಲಿ ಯಶ್ ದಯಾಳ್‌ಗೆ ತಂಡಕ್ಕೆ ಎಂಟ್ರಿಯಾಗಬಹುದು. 

ಕಾನ್ಪುರದಲ್ಲಿ ಸ್ಪಿನ್ನರ್‌ಗಳ ಕತೆ : 
ಭಾರತ ಮತ್ತು ಬಾಂಗ್ಲಾದೇಶ ತಂಡಗಳು ತಮ್ಮ ತಂಡದಲ್ಲಿ ಮೂವರು ವೇಗದ ಬೌಲರ್‌ಗಳನ್ನು ಇಟ್ಟುಕೊಂಡು ಚೆನ್ನೈನಲ್ಲಿ ಫಾಸ್ಟ್ ಬೌಲಿಂಗ್‌ಗೆ ಆದ್ಯತೆ ನೀಡಿತ್ತು.ಇದು ಕೆಂಪು ಮಣ್ಣಿನ ಪಿಚ್ ಆಗಿದ್ದ ಕಾರಣ ವೇಗದ ಬೌಲರ್‌ಗಳಿಗೆ,ವಿಶೇಷವಾಗಿ ಮೊದಲ ಎರಡು ದಿನಗಳಲ್ಲಿ ಬಹಳ ಸಹಾಯಕವಾಯಿತು.ಆದರೆ,ಕಾನ್ಪುರದ ಕಪ್ಪು ಮಣ್ಣಿನ ಪಿಚ್ ಎರಡೂ ತಂಡಗಳು ತಮ್ಮ ತಂಡಕ್ಕೆ ಹೆಚ್ಚುವರಿ ಸ್ಪಿನ್ ಬೌಲರ್ ಅನ್ನು ಸೇರಿಸುವುದನ್ನು ಪರಿಗಣಿಸುವಂತೆ ಮಾಡಬಹುದು.ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿರುವ ಮೇಲ್ಮೈ ಸಾಮಾನ್ಯವಾಗಿ ಸ್ಪಿನ್ ಬೌಲಿಂಗ್‌ಗೆ ಸೂಕ್ತವಾಗಿರುತ್ತದೆ.ಅದಕ್ಕಾಗಿಯೇ ಭಾರತವು ಫಾಸ್ಟ್ ಬೌಲರ್ ಗಳನ್ನೂ ಸ್ಪಿನ್ನರ್‌ನೊಂದಿಗೆ ಬದಲಾಯಿಸಬಹುದು.ಹೀಗಾದಾಗ ಕುಲದೀಪ್ ಯಾದವ್ ಅಥವಾ ಅಕ್ಷರ್ ಪಟೇಲ್ ಗೆ ಅವಕಾಶ ಸಿಗಬಹುದು.

ಇದನ್ನೂ ಓದಿ: 2ನೇ ಟೆಸ್ಟ್‌ಗೆ ತಂಡ ಪ್ರಕಟಿಸಿ ಈ ಮೂರು ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ.. ನಿವೃತ್ತಿ ಖಚಿತ?!

ಎರಡನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11 :  
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್/ಕುಲದೀಪ್ ಯಾದವ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News