IND vs AUS: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಲು ರೋಹಿತ್-ಗಂಭೀರ್ ಮಾಸ್ಟರ್‌ ಪ್ಲ್ಯಾನ್!

Border Gavaskar Trophy 2024-25: ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ 2 ಟೆಸ್ಟ್‌ಗಳ ಸರಣಿಯನ್ನು ಮತ್ತು ನಂತರ ನ್ಯೂಜಿಲ್ಯಾಂಡ್‌ ವಿರುದ್ಧ ಸ್ವದೇಶಿ ಟೆಸ್ಟ್ ಸರಣಿಯನ್ನು ಆಡಬೇಕಿದ್ದರೂ, ಅದರ ಸಂಪೂರ್ಣ ಗಮನವು ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೇಲೆ ಕೇಂದ್ರೀಕೃತವಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್‌ ಗೌತಮ್ ಗಂಭೀರ್ ಅವರು ಈ ವಿದೇಶಿ ಪ್ರವಾಸದ‌ ಬಗ್ಗೆ ಈಗಾಗಲೇ ಪ್ಲಾನ್ ಮಾಡುತ್ತಿದ್ದಾರೆ.

Written by - Puttaraj K Alur | Last Updated : Sep 14, 2024, 08:48 PM IST
  • ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡವು ಅಭ್ಯಾಸವನ್ನು ಆರಂಭಿಸಿದೆ
  • ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ನಡೆಯಲಿದೆ
  • ಆಸೀಸ್‌ ವಿರುದ್ಧದ ಟೆಸ್ಟ್‌ ಸರಣಿ ಗೆಲ್ಲಲು ರೋಹಿತ್‌ ಶರ್ಮಾ-ಗೌತಮ್‌ ಗಂಭೀರ ಪ್ಲ್ಯಾನ್
IND vs AUS: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಲು ರೋಹಿತ್-ಗಂಭೀರ್ ಮಾಸ್ಟರ್‌ ಪ್ಲ್ಯಾನ್! title=
ಆಸೀಸ್‌ ವಿರುದ್ಧ ಮಾಸ್ಟರ್‌ ಪ್ಲ್ಯಾನ್!

IND vs AUS Border Gavaskar Trophy 2024-25: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡವು ಅಭ್ಯಾಸವನ್ನು ಆರಂಭಿಸಿದೆ. ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಅಭ್ಯಾಸದ ಅವಧಿಯೊಂದಿಗೆ ತಂಡವು ಮುಂಬರುವ ಸುದೀರ್ಘ ಟೆಸ್ಟ್ ಋತುವಿಗಾಗಿ ಸಜ್ಜಾಗಿದೆ. ಈ ಸೆಷನ್‌ನಲ್ಲಿ ವಿರಾಟ್ ಕೊಹ್ಲಿ ಸುಮಾರು 45 ನಿಮಿಷಗಳ ಕಾಲ ಬ್ಯಾಟ್ ಮಾಡಿದರು, ಆದರೆ ರಿಷಬ್ ಪಂತ್ ಕೂಡ ಅಭ್ಯಾಸ ಮಾಡುತ್ತಿದ್ದರು. ಈ ಇಬ್ಬರು 2022ರ ನಂತರ ಮೊದಲ ಬಾರಿಗೆ ಈ ಸ್ವರೂಪದಲ್ಲಿ ಆಡುತ್ತಿದ್ದಾರೆ. ‌

ಬಾಂಗ್ಲಾದೇಶದ ನಂತರ ಭಾರತವು ನ್ಯೂಜಿಲ್ಯಾಂಡ್‌ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಆದರೆ ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೇಲೆ ಟೀಂ ಇಂಡಿಯಾದ ಗಮನ ಕೇಂದ್ರೀಕೃತವಾಗಿದ್ದು, ಕಳೆದ 2 ಬಾರಿ ತಂಡವೇ ಗೆದ್ದಿದೆ. ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಈ ವಿದೇಶಿ ಪ್ರವಾಸಕ್ಕೆ ಯೋಜನೆ ಆರಂಭಿಸಿದ್ದಾರೆ.   

ಇಂಗ್ಲೆಂಡ್ ಸರಣಿ ಬಳಿಕ ನಡೆಯಲಿರುವ ಟೆಸ್ಟ್ 

ಆಗಸ್ಟ್ ತಿಂಗಳ ಆರಂಭದ ವಾರಗಳಲ್ಲಿ ಕೊನೆಯದಾಗಿ ಆಡಿದ ಭಾರತ ತಂಡ, ಮುಂದಿನ ವಾರ ಇದೇ ಮೈದಾನದಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ತಯಾರಿಗಾಗಿ ಚೆನ್ನೈನಲ್ಲಿ ತರಬೇತಿಗಾಗಿ ಒಟ್ಟುಗೂಡಿತ್ತು. ಈ ವರ್ಷದ ಮಾರ್ಚ್‌ನಲ್ಲಿ ತವರಿನಲ್ಲಿ ಇಂಗ್ಲೆಂಡ್ ಅನ್ನು 4-1 ಅಂತರದಿಂದ ಸೋಲಿಸಿದ ನಂತರ ಇದು ಭಾರತದ ಮೊದಲ ಟೆಸ್ಟ್ ಸರಣಿಯಾಗಿದೆ. 

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ವಿಸ್ಮಯ, ಈ 3 ವಿಶ್ವ ದಾಖಲೆಗಳನ್ನು ಕನಸಿನಲ್ಲೂ ಮುರಿಯಲು ಸಾಧ್ಯವಿಲ್ಲ..!

ಕಪ್ಪು-ಕೆಂಪು ಮಣ್ಣಿನ ಪಿಚ್‌ನಲ್ಲಿ ಅಭ್ಯಾಸ  

ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಯ್ಕೆಯಾದ ಬೌಲರ್‌ಗಳನ್ನು ಎದುರಿಸುವುದರೊಂದಿಗೆ ತರಬೇತಿ ಅವಧಿಯು ಪ್ರಾರಂಭವಾಯಿತು. ಇದು ಎರಡು ವಿಭಿನ್ನ ನೆಟ್‌ಗಳಲ್ಲಿ ಬ್ಯಾಟಿಂಗ್ ಅನ್ನು ಒಳಗೊಂಡಿತ್ತು. ಒಂದು ಕಪ್ಪು ಮಣ್ಣನ್ನು ಹೊಂದಿದ್ದು, ಸ್ಪಿನ್ನರ್‌ಗಳನ್ನು ಎದುರಿಸಲು ಪ್ಲ್ಯಾನ್‌ ಮಾಡಲಾಗಿತ್ತು. ಭಾರತವು ಉತ್ತಮ ಸಂಖ್ಯೆಯ ನೆಟ್ ಬೌಲರ್‌ಗಳನ್ನು ಹೊಂದಿತ್ತು. ಎಡಗೈ ಸ್ಪಿನ್ನರ್‌ಗಳಾದ ಎಸ್.ಅಜಿತ್ ರಾಮ್, ಎಂ.ಸಿದ್ಧಾರ್ಥ್ ಮತ್ತು ತಮಿಳುನಾಡಿನ ಪಿ.ವಿಘ್ನೇಶ್ ಮತ್ತು ಆಫ್ ಸ್ಪಿನ್ನರ್‌ಗಳಾದ ತಮಿಳುನಾಡಿನ ಲಕ್ಷ್ಯ ಜೈನ್ ಮತ್ತು ಮುಂಬೈನ ಹಿಮಾಂಶು ಸಿಂಗ್ ನೆಟ್‌ ಬೌಲರ್‌ಗಳಾಗಿದ್ದರು. ೨ನೇ ನೆಟ್‌ನಲ್ಲಿ ಕೆಂಪು ಜೇಡಿಮಣ್ಣು ಇತ್ತು, ಅಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಲೈನ್‌ಅಪ್‌ನಲ್ಲಿದ್ದರು. 

ಇದನ್ನೂ ಓದಿ: ʼಧೋನಿ ನಂತರ ನನ್ನ ನಿವೃತ್ತಿ..ʼ ಶಾಕಿಂಗ್ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಸ್ಟಾರ್ ಆಟಗಾರ!‌

ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧತೆ! 

ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತಯಾರಿ ನಡೆಸಲು ಭಾರತವು ಈ ತಂತ್ರವನ್ನು ಅಳವಡಿಸಿಕೊಂಡಿದೆ. ಈ ತಂತ್ರವು ಹೆಚ್ಚಿನ ಪ್ರಮಾಣದಲ್ಲಿ ಉಳಿಯುವ ಸಾಧ್ಯತೆಯಿದೆ, ಏಕೆಂದರೆ ರೋಹಿತ್ ಮತ್ತು ಗಂಭೀರ್ ಪ್ರಮುಖ ಗಮನವು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಸರಣಿಯ ಮೇಲಿರುತ್ತದೆ.

ವಿದೇಶಿ ಪ್ರವಾಸಗಳತ್ತ ಹೆಚ್ಚಿನ ಗಮನ

ಕಳೆದ ಕೆಲವು ವರ್ಷಗಳಲ್ಲಿ ವಿದೇಶಿ ಪ್ರವಾಸಗಳಿಗೆ ತಯಾರಾಗಲು ಭಾರತವು ತವರು ನೆಲದಲ್ಲಿ ವೇಗದ ಬೌಲಿಂಗ್‌ಗೆ ಅನುಕೂಲಕರ ಪರಿಸ್ಥಿತಿಗಳನ್ನು ಬಳಸಿಕೊಂಡಿದೆ. 2019ರಲ್ಲಿ ಬಾಂಗ್ಲಾದೇಶ ಕೊನೆಯ ಬಾರಿಗೆ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡಾಗ, ಭಾರತವೂ ಇದೇ ರೀತಿಯ ಪರಿಸ್ಥಿತಿಗಳನ್ನು ಸೃಷ್ಟಿಸಿತ್ತು. ಎರಡು ಪಂದ್ಯಗಳಿಗೆ ಭಾರತದ ಲೈನ್-ಅಪ್ ಮೂರು ವೇಗದ ಬೌಲರ್‌ಗಳನ್ನು ಒಳಗೊಂಡಿತ್ತು, ಅವರು 33 ವಿಕೆಟ್‌ಗಳನ್ನು ಪಡೆದರು ಮತ್ತು ಇಬ್ಬರು ಸ್ಪಿನ್ನರ್‌ಗಳ ಪೈಕಿ ಅಶ್ವಿನ್ 5 ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ರವೀಂದ್ರ ಜಡೇಜಾ ಯಾವುದೇ ವಿಕೆಟ್ ಪಡೆದುಕೊಂಡಿರಲಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News