IND vs SA : ರಿಷಬ್ ಪಂತ್ ನಂಬಿಕೆ ಹುಸಿಗೊಳಿಸಿದ ಈ ಇಬ್ಬರು ಆಟಗಾರರು!

ಈ ಆಟಗಾರರು ಕ್ಯಾಪ್ಟನ್  ರಿಷಬ್ ಪಂತ್ ನಂಬಿಕೆಯನ್ನು ಉಸಿಗೊಳಿಸಿದ್ದಾರೆ. ಹೀಗಾಗಿ, ಪಂತ್ ಈ ಆಟಗಾರರನ್ನು ಐದನೇ ಟಿ20 ಪಂದ್ಯದಿಂದ ಹೊರಗಿಡಬಹುದು ಎಂದು ಹೇಳಲಾಗುತ್ತಿದೆ. ಯಾಕೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Written by - Channabasava A Kashinakunti | Last Updated : Jun 18, 2022, 03:10 PM IST
  • ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 2-2 ರಿಂದ ಸಮಬಲಗೊಳಿಸಿದೆ
  • ಈ ಆಟಗಾರರು ಕ್ಯಾಪ್ಟನ್ ರಿಷಬ್ ಪಂತ್ ನಂಬಿಕೆಯನ್ನು ಉಸಿಗೊಳಿಸಿದ್ದಾರೆ.
  • ಪಂತ್ ಈ ಆಟಗಾರರನ್ನು ಐದನೇ ಟಿ20 ಪಂದ್ಯದಿಂದ ಹೊರಗಿಡಬಹುದು
IND vs SA : ರಿಷಬ್ ಪಂತ್ ನಂಬಿಕೆ ಹುಸಿಗೊಳಿಸಿದ ಈ ಇಬ್ಬರು ಆಟಗಾರರು! title=

IND vs SA : ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ, ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 2-2 ರಿಂದ ಸಮಬಲಗೊಳಿಸಿದೆ, ಆದರೆ ಟೀಂ ಇಂಡಿಯಾದ ಇಬ್ಬರು ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದಾರೆ. ಈ ಆಟಗಾರರು ಕ್ಯಾಪ್ಟನ್  ರಿಷಬ್ ಪಂತ್ ನಂಬಿಕೆಯನ್ನು ಉಸಿಗೊಳಿಸಿದ್ದಾರೆ. ಹೀಗಾಗಿ, ಪಂತ್ ಈ ಆಟಗಾರರನ್ನು ಐದನೇ ಟಿ20 ಪಂದ್ಯದಿಂದ ಹೊರಗಿಡಬಹುದು ಎಂದು ಹೇಳಲಾಗುತ್ತಿದೆ. ಯಾಕೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಆಟಗಾರರ ಪ್ರದರ್ಶನ ಫ್ಲಾಪ್

ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶ್ರೇಯಸ್ ಅಯ್ಯರ್ ಅವರ ಬ್ಯಾಟ್ ಸಂಪೂರ್ಣವಾಗಿ ನೀರಸವಾಗಿತ್ತು. ಇವರ ರನ್ ಗಳಿಸಲು ಪರದಾಡುತ್ತಿರುವುದು ಕಂಡು ಬಂತು. ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ನಾಲ್ಕು ಟಿ20 ಪಂದ್ಯಗಳಲ್ಲಿ ಕೇವಲ 84 ರನ್ ಗಳಿಸಿದ್ದಾರೆ. ಹೀಗಾಗಿ ಕ್ಯಾಪ್ಟನ್ ರಿಷಭ್ ಪಂತ್ ಗೆ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿರುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ದೀಪಕ್ ಹೂಡಾಗೆ ಅವಕಾಶ ಸಿಗಬಹುದು.

ಇದನ್ನೂ ಓದಿ : Team India : ಟೀಂ ಇಂಡಿಯಾಕ್ಕೆ ಹೊರೆಯಾಗಿರುವ ಈ ಆಟಗಾರ ಸದ್ಯದಲ್ಲೇ ನಿವೃತ್ತಿ!?

ನಿರಾಸೆ ಮೂಡಿಸಿದ ಈ ಆಲ್ ರೌಂಡರ್ 

ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಷರ್ ಪಟೇಲ್ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರು ಚೆಂಡು ಮತ್ತು ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಲು ವಿಫಲರಾಗಿದ್ದಾರೆ. ಅವರು ಟೀಂ ಇಂಡಿಯಾಕ್ಕೆ ದೊಡ್ಡ ಹೊರೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಐದನೇ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯ್ ಅವರನ್ನು ನಾಯಕ ಬದಲಿಸಬಹುದು. ಭಾರತದ ಪಿಚ್‌ಗಳು ಯಾವಾಗಲೂ ಸ್ಪಿನ್ನರ್‌ಗಳಿಗೆ ಸಹಾಯಕವಾಗಿವೆ. ರವಿ ಬಿಷ್ಣೋಯ್ ಅವರು ಈ ಪಿಚ್‌ಗಳಲ್ಲಿ ವಿಧ್ವಂಸಕರಾಗಲು ಪ್ರಸಿದ್ಧರಾಗಿದ್ದಾರೆ. ರವಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ಪಾದಾರ್ಪಣೆ ಮಾಡಿದರು.

ಸರಣಿ ಗೆಲ್ಲುವತ್ತ ಟೀಂ ಇಂಡಿಯಾ ದೃಷ್ಟಿ 

ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 82 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ತನ್ನ ತವರಿನಲ್ಲಿ ಇಲ್ಲಿಯವರೆಗೆ ಸರಣಿ ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಫ್ರಿಕಾವನ್ನು ಸಂಕಷ್ಟಕ್ಕೆ ದೂಡಲು ಟೀಂ ಇಂಡಿಯಾಗೆ ಸುವರ್ಣಾವಕಾಶವಿದೆ. ಭಾರತವು ಅನೇಕ ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿದೆ, ಅವರು ಸರಣಿಯನ್ನು ಗೆಲ್ಲಬಹುದು. ಟೀಂ ಇಂಡಿಯಾದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ಹೀಗಿರುವಾಗ ಕೊನೆಯ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ವಶಪಡಿಸಿಕೊಳ್ಳಲು ಮುಂದಾಗಿದೆ.

ಇದನ್ನೂ ಓದಿ : ಭಾರತ vs ಐರ್ಲ್ಯಾಂಡ್‌: ಬೂಮ್ರಾಗಿಂತ ಡೇಂಜರಸ್‌ ಆಟಗಾರನನ್ನು ನಿರ್ಲ್ಯಕ್ಷಿಸಿದ ಆಯ್ಕೆ ಸಮಿತಿ!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News