IPL2022: ಪಂಜಾಬ್ ಕಿಂಗ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ಗೆ ಹೀನಾಯ ಸೋಲು

 ಇಲ್ಲಿನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧದ ಐಪಿಎಲ್ ಟಿ20 ಪಂದ್ಯದಲ್ಲಿ ಚೆನ್ನೈ ತಂಡವು 54 ರನ್ ಗಳ ಹೀನಾಯ ಸೋಲನ್ನು ಅನುಭವಿಸಿದೆ. ಆ ಮೂಲಕ  ಇದೆ ಮೊದಲ ಬಾರಿಗೆ ಐಪಿಎಲ್ (IPL 2022) ಇತಿಹಾಸದಲ್ಲಿ  ಚೆನ್ನೈ ತಂಡವು ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ ಕುಖ್ಯಾತಿಗೆ ಪಾತ್ರವಾಗಿದೆ.

Written by - Zee Kannada News Desk | Last Updated : Apr 4, 2022, 12:12 AM IST
  • ಇಲ್ಲಿನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧದ ಐಪಿಎಲ್ ಟಿ20 ಪಂದ್ಯದಲ್ಲಿ ಚೆನ್ನೈ ತಂಡವು 54 ರನ್ ಗಳ ಹೀನಾಯ ಸೋಲನ್ನು ಅನುಭವಿಸಿದೆ.
IPL2022: ಪಂಜಾಬ್ ಕಿಂಗ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ಗೆ ಹೀನಾಯ ಸೋಲು title=
Photo Courtesy: Twitter

ಮುಂಬೈ:  ಇಲ್ಲಿನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧದ ಐಪಿಎಲ್ ಟಿ20 ಪಂದ್ಯದಲ್ಲಿ ಚೆನ್ನೈ ತಂಡವು 54 ರನ್ ಗಳ ಹೀನಾಯ ಸೋಲನ್ನು ಅನುಭವಿಸಿದೆ. ಆ ಮೂಲಕ  ಇದೆ ಮೊದಲ ಬಾರಿಗೆ ಐಪಿಎಲ್ (IPL 2022) ಇತಿಹಾಸದಲ್ಲಿ  ಚೆನ್ನೈ ತಂಡವು ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ ಕುಖ್ಯಾತಿಗೆ ಪಾತ್ರವಾಗಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ತಂಡವು ಆರಂಭದಲ್ಲಿ ಪಂಜಾಬ್ ತಂಡವು 14 ರನ್ ಗಳಾಗುವಷ್ಟರಲ್ಲಿ ಮಾಯಾಂಕ್ ಆಗರ್ವಾಲ್ ಹಾಗೂ ರಾಜಪಕ್ಷ ಅವರ ವಿಕೆಟ್ ಕಬಳಿಸುವ ಮೂಲಕ ಮೇಲುಗೈ ಸಾಧಿಸಿತ್ತು, ಆದರೆ  ಈ ಹಂತದಲ್ಲಿ ಲಿವಿಂಗ್ ಸ್ಟೋನ್ ಹಾಗೂ ಶಿಖರ್ ಧವನ್ ಕ್ರಮವಾಗಿ 33, ಹಾಗೂ 60 ರನ್ ಗಳಿಸುವ ಮೂಲಕ ತಂಡವನ್ನು ಆಪಾಯದಿಂದ ಪಾರು ಮಾಡಿದರು.

ಇದನ್ನೂ ಓದಿ: IPL 2022: ತೀವ್ರ ಕುತೂಹಲ ಕೆರಳಿಸಿದ ಎಂ.ಎಸ್.ಧೋನಿ – ಗೌತಮ್ ಗಂಭಿರ್ ಭೇಟಿ!

ಒಂದು ಹಂತದಲ್ಲಿ ಕೇವಲ 10.4 ಓವರ್ ಗಳಲ್ಲಿ ಬರೋಬ್ಬರಿ 115 ರನ್ ಗಳಿಸಿದ್ದ ಪಂಜಾಬ್ ತಂಡವು 200 ರ ಗಡಿಯನ್ನು ಸುಲಭವಾಗಿ ತಲುಪಲಿದೆ ಎಂದು ಭಾವಿಸಲಾಗಿತ್ತು.ಆದರೆ ಲಿವಿಂಗ್ ಸ್ಟೋನ್ ಅವರು 60 ರನ್ ಗಳಾಗಿದ್ದಾಗ ರವೀಂದ್ರ ಜಡೇಜಾ ಎಸೆತದಲ್ಲಿ ರಾಯುಡುಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರು ಕೇವಲ 32 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಐದು ಬೌಂಡರಿಗಳನ್ನು ಸಿಡಿಸಿದ್ದರು. ಇನ್ನೊಂದೆಡೆಗೆ ಇವರಿಗೆ ಸಾಥ್ ನೀಡುತ್ತಿದ್ದ ಜಿತೇಶ್ ಕುಮಾರ್ 26 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಕೊನೆಗೆ ರನ್ ಗಳಿಸಲು ಪರದಾಡಿದ ಪಂಜಾಬ್ ತಂಡವು ಎಂಟು ವಿಕೆಟ್ ನಷ್ಟಕ್ಕೆ 180 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಇದನ್ನೂ ಓದಿ: IPL 2022, CSK vs PBKS: ಕಿಂಗ್ಸ್‌ಗಳ ಕದನದಲ್ಲಿ ಯಾರಿಗೆ ಸಿಗುತ್ತೆ ಗೆಲುವು..?

181  ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಪಂಜಾಬ್ ಕಿಂಗ್ಸ್ (CSK vs PBKS) ತಂಡದ ಬೌಲಿಂಗ್ ದಾಳಿಗೆ ಆರಂಭದಲ್ಲಿಯೇ ಕುಸಿತಕ್ಕೆ ಒಳಗಾಯಿತು. ಕೇವಲ 36 ರನ್ ಗಳಾಗುವಷ್ಟರಲ್ಲಿ ಐದು ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ 100 ಒಳಗೆ ಆಲೌಟ್ ಆಗುವ ಭೀತಿ ಎದುರಾಗಿತ್ತು ಶಿವಂ ದುಭೆ ಮತ್ತು ಧೋನಿ ಕ್ರಮವಾಗಿ 57 ಹಾಗೂ 23 ರನ್ ಗಳಿಸಿದರಾದರೂ ಕೂಡ ಅದು ತಂಡವನ್ನು ಗೆಲುವಿನ ಗುರಿಯನ್ನು ತಲುಪಲು ಸಾಕಾಗಲಿಲ್ಲ.ಚೆನ್ನೈ ತಂಡವು 18 ಓವರ್ ಗಳಲ್ಲಿ ಕೇವಲ 126 ರನ್ ಗಳಿಸುವ ಮೂಲಕ ಸರ್ವಪತನವನ್ನು ಕಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News