13 ವರ್ಷಗಳ ಕ್ರಿಕೆಟ್ ಬದುಕು ಅಂತ್ಯ… 37ರ ಹರೆಯದ ಭಾರತದ ಸ್ಟಾರ್ ಬಲಗೈ ಸ್ಪಿನ್ನರ್ ನಿವೃತ್ತಿ ಘೋಷಣೆ!

R Ashwin Statement on Retirement: 12 ವರ್ಷಗಳ ನಂತರ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ದೊಡ್ಡ ಅವಕಾಶ ಲಭ್ಯವಾಗಿದೆ. 2011ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಟೀಂ ಇಂಡಿಯಾ ಈ ಪ್ರಶಸ್ತಿ ಗೆದ್ದಿತ್ತು.

Written by - Bhavishya Shetty | Last Updated : Oct 1, 2023, 08:47 AM IST
    • ವಿಶ್ವ ಕ್ರಿಕೆಟ್ ಟೂರ್ನಿ ಅಕ್ಟೋಬರ್ 5 ರಿಂದ ಆರಂಭವಾಗಲಿದೆ
    • ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮೊದಲ ಪಂದ್ಯ
    • 12 ವರ್ಷಗಳ ನಂತರ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ದೊಡ್ಡ ಅವಕಾಶ ಲಭ್ಯವಾಗಿದೆ
13 ವರ್ಷಗಳ ಕ್ರಿಕೆಟ್ ಬದುಕು ಅಂತ್ಯ… 37ರ ಹರೆಯದ ಭಾರತದ ಸ್ಟಾರ್ ಬಲಗೈ ಸ್ಪಿನ್ನರ್ ನಿವೃತ್ತಿ ಘೋಷಣೆ! title=
R Ashwin retirement

R Ashwin Statement on Retirement: ವಿಶ್ವ ಕ್ರಿಕೆಟ್ ಟೂರ್ನಿ ಅಕ್ಟೋಬರ್ 5 ರಿಂದ ಆರಂಭವಾಗಲಿದೆ. ಈ ಮೆಗಾ ಈವೆಂಟ್’ಗೆ ಭಾರತವು ಆತಿಥ್ಯ ವಹಿಸಲಿದೆ. ಇನ್ನು ಟೀಂ ಇಂಡಿಯಾದ ನಾಯಕತ್ವ ಬಲಿಷ್ಠ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಕೈಯಲ್ಲಿರಲಿದೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದ್ದು, ಈ ನಡುವೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾದ ಸ್ಟಾರ್ ಆಟಗಾರನೊಬ್ಬ ತನ್ನ ನಿವೃತ್ತಿ ಘೋಷಿಸುವ ಚಿಂತನೆಯಲ್ಲಿದ್ದಾರೆ.

ಇದನ್ನೂ ಓದಿ: ವಿಶ್ವಕಪ್’ನಿಂದ ಟೀಂ ಇಂಡಿಯಾದ 6 ಸ್ಟಾರ್ ಪ್ಲೇಯರ್ಸ್ ಔಟ್! ಬದಲಿಗೆ ಈ ಆಟಗಾರರಿಗೆ ಸ್ಥಾನ..

12 ವರ್ಷಗಳ ನಂತರ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ದೊಡ್ಡ ಅವಕಾಶ ಲಭ್ಯವಾಗಿದೆ. 2011ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಟೀಂ ಇಂಡಿಯಾ ಈ ಪ್ರಶಸ್ತಿ ಗೆದ್ದಿತ್ತು. ಆ ಸಮಯದಲ್ಲಿ, ಅನುಭವಿ ಮಹೇಂದ್ರ ಸಿಂಗ್ ಧೋನಿ ಅವರು ತಂಡವನ್ನು ಮುನ್ನಡೆಸುತ್ತಿದ್ದರು. ಈ ಬಾರಿ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವವನ್ನು ನಿಭಾಯಿಸಲಿದ್ದಾರೆ.

ಇನ್ನು ಕಳೆದ ದಿನ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾಗಿತ್ತು. ಆದರೆ ಈ ಪಂದ್ಯಕ್ಕೂ ಮುನ್ನ ನೀಡಿದ ಸಂದರ್ಶನದಲ್ಲಿ ರವಿಚಂದ್ರನ್ ಅಶ್ವಿನ್, ದಿನೇಶ್ ಕಾರ್ತಿಕ್ ಅವರ ಜೊತೆ ಮಾತನಾಡುತ್ತಾ, “ನಾನು ವಿಶ್ವಕಪ್‌ನಲ್ಲಿ ಆಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಜೀವನವು ಆಶ್ಚರ್ಯಗಳಿಂದ ತುಂಬಿದೆ. ಇನ್ನು ಟೀಮ್ ಮ್ಯಾನೇಜ್ ಮೆಂಟ್ ನನ್ನ ಮೇಲೆ ವಿಶ್ವಾಸ ತೋರಿದೆ” ಎಂದು ಹೇಳಿದರು.

ಇದನ್ನೂ ಓದಿ:  ಅಕ್ಟೋಬರ್’ನಲ್ಲಿ ತೆರೆಯಲಿದೆ ಈ ರಾಶಿಯ ಭಾಗ್ಯದ ಬಾಗಿಲು! ಹರಿದುಬರಲಿದೆ ಧನಸಂಪತ್ತು, ಬಹುದಿನದ ಕನಸು ನನಸಾಗುವ ಸಮಯ

'ನನ್ನ ಕೊನೆಯ ವಿಶ್ವಕಪ್...'

“ಪಂದ್ಯಾವಳಿಗಳಲ್ಲಿ ಒತ್ತಡವನ್ನು ಎದುರಿಸುವುದು ಅತ್ಯುನ್ನತ ವಿಷಯ. ಇದು ಪಂದ್ಯಾವಳಿ ಹೇಗೆ ಎಂಬುದನ್ನು ನಿರ್ಧರಿಸುತ್ತದೆ. ಭಾರತಕ್ಕೆ ಇದು ನನ್ನ ಕೊನೆಯ ವಿಶ್ವಕಪ್ ಆಗಿರಬಹುದು, ಆದ್ದರಿಂದ ಪಂದ್ಯಾವಳಿಯನ್ನು ಆನಂದಿಸುವುದು ಬಹಳ ಮುಖ್ಯ” ಎಂದಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ವಿಶ್ವಕಪ್ ಬಳಿಕ ತಮ್ಮ ನಿವೃತ್ತಿ ಖಚಿತ ಎಂದು ಹೇಳಿದಂತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News