ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ಗುಡ್ ಬೈ ಹೇಳಿದ್ದರಿಂದ ಈ 4 ಆಟಗಾರರ ವೃತ್ತಿಜೀವನಕ್ಕೆ ಅಪಾಯ!

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾದ ಅನೇಕ ಆಟಗಾರರು ಮ್ಯಾಚ್ ವಿನ್ನರ್‌ಗಳಾಗಿದ್ದರು. ಆದರೆ ಈಗ ಈ ಆಟಗಾರರ ವೃತ್ತಿಜೀವನವು ಅಪಾಯಕ್ಕೆ ಸಿಲುಕಿದೆ.

Written by - Puttaraj K Alur | Last Updated : Jan 16, 2022, 12:58 PM IST
  • ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ಗುಡ್ ಬೈ ಹೇಳುತ್ತಿದ್ದಂತೆಯೇ ಕೆಲವು ಆಟಗಾರರ ವೃತ್ತಿಜೀವನಕ್ಕೆ ಕುತ್ತು!
  • ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ಅಕ್ಸರ್ ಪಟೇಲ್ ಹಾಗೂ ಇಶಾಂತ್ ಶರ್ಮಾ ವೃತ್ತಿಜೀವನಕ್ಕೆ ಅಪಾಯಕ್ಕೆ
  • ಟೀಂ ಇಂಡಿಯಾ ನೂತನ ನಾಯಕನ ನಿರ್ಧಾರದ ಮೇಲೆ ನಿಂತಿದೆ ಹಿರಿಯ ಆಟಗಾರರ ಭವಿಷ್ಯ!
ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ಗುಡ್ ಬೈ ಹೇಳಿದ್ದರಿಂದ ಈ 4 ಆಟಗಾರರ ವೃತ್ತಿಜೀವನಕ್ಕೆ ಅಪಾಯ! title=
ಅಪಾಯಕ್ಕೆ ಸಿಲುಕಿದ ನಾಲ್ವರು ಆಟಗಾರರ ವೃತ್ತಿಜೀವನ!

ನವದೆಹಲಿ: ವಿಶ್ವದ ಶ್ರೇಷ್ಠ ಬ್ಯಾಟ್ಸ್‌ ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ತಂಡದ ನಾಯಕತ್ವವನ್ನು ತೊರೆದು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಅವರ ಈ ದಿಢೀರ್ ನಿರ್ಧಾರದಿಂದ ಅನೇಕರಿಗೆ ಶಾಕ್ ಆಗಿದೆ. ಕೊಹ್ಲಿ ಯಾವಾಗಲೂ ತಮ್ಮ ಆಕ್ರಮಣಶೀಲತೆಗೆ ಹೆಸರುವಾಸಿ. ಸಹ ಆಟಗಾರರನ್ನು ಬೆಂಬಲಿಸುವುದರಲ್ಲಿಯೂ ಕಿಂಗ್ ಕೊಹ್ಲಿ ಹೆಸರುವಾಸಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಅನೇಕ ಆಟಗಾರರು ತಂಡದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಈಗ ಅವರು ನಾಯಕತ್ವ ತೊರೆದಿರುವುದರಿಂದ ಅನೇಕ ಆಟಗಾರರ ವೃತ್ತಿಜೀವನವು ಅಪಾಯಕ್ಕೆ ಸಿಲುಕಿದೆ. ಟೀಂ ಇಂಡಿಯಾಗೆ ಆಯ್ಕೆಯಾಗುವ ಹೊಸ ನಾಯಕ ಈ ನಾಲ್ವರು ಆಟಗಾರರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆಗಳಿವೆ. ಈ ಆಟಗಾರರು ಯಾರು ಅಂತೀರಾ..?   

1) ಅಜಿಂಕ್ಯ ರಹಾನೆ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಜಿಂಕ್ಯ ರಹಾನೆ(Ajinkya Rahane)  ತಮ್ಮ ವೃತ್ತಿಜೀವನದ ಹೊಸ ಎತ್ತರ ತಲುಪಿದ್ದಾರೆ. ರಹಾನೆ ಕಳಪೆ ಫಾರ್ಮ್‌ನೊಂದಿಗೆ ಸರ್ಕಸ್ ಮಾಡುತ್ತಿದ್ದರೂ ಕೊಹ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರು. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವವನ್ನೂ ರಹಾನೆ ವಹಿಸಿಕೊಂಡಿದ್ದರು. ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದು ಸಾಧನೆ ಮಾಡಿತು. ರಹಾನೆ ಬ್ಯಾಟ್‌ನಿಂದ ರನ್ ಗಳಿಸುವುದು ಕಷ್ಟವಾಯಿತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದ ನೂತನ ಟೆಸ್ಟ್ ನಾಯಕ ಇವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್(Shreyas Iyer) ಅಥವಾ ಹನುಮ ವಿಹಾರಿಗೆ ಅವಕಾಶ ನೀಡಬಹುದು.

ಇದನ್ನೂ ಓದಿ: ಭಾರತದ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ

2) ಚೇತೇಶ್ವರ ಪೂಜಾರ

ಒಂದು ಕಾಲದಲ್ಲಿ ಟೀಂ ಇಂಡಿಯಾದ ಗೋಡೆ ಎಂದು ಕರೆಯಲಾಗಿದ್ದ ಚೇತೇಶ್ವರ ಪೂಜಾರ(Cheteshwar Pujara)ಅವರ ಕಳಪೆ ಫಾರ್ಮ್ ಅವರ ವೃತ್ತಿಜೀವನಕ್ಕೆ ಕಂಟಕವಾಗಿ ಪರಿಣಮಿಸಿದೆ. ಕಳೆದ 2 ವರ್ಷಗಳಲ್ಲಿ ಅವರು ಯಾವುದೇ ಶತಕ ಗಳಿಸಲು ಸಾಧ್ಯವಾಗಿಲ್ಲ. ಸಾಕಷ್ಟು ಅವಕಾಶ ಸಿಕ್ಕರೂ ಪೂಜಾರ ರನ್ ಗಳಿಸಲು ಹೆಣಗಾಡಿದರು. ವಿರಾಟ್ ಕೊಹ್ಲಿ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದರು. ಕೊಹ್ಲಿ ಯಾವಾಗಲೂ ಪೂಜಾರ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು, ಆದರೆ ಅವರು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಇಂತಹ ಪರಿಸ್ಥಿತಿಯಲ್ಲಿ ನೂತನ ನಾಯಕ ಪೂಜಾರಗೆ ಗೇಟ್ ಪಾಸ್ ನೀಡಬಹುದು. ಅವರ ಸ್ಥಾನಕ್ಕೆ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಿಕೊಳ್ಳಬಹುದು.

3) ಅಕ್ಸರ್ ಪಟೇಲ್

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಕ್ಷರ್ ಪಟೇಲ್ (Axar Patel)  ಭಾರತದ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅಕ್ಷರ್ ಪಟೇಲ್ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನೂತನ ಟೀಂ ಇಂಡಿಯಾದ ನಾಯಕ, ಜಡೇಜಾ ಅಥವಾ ಶಾರ್ದೂಲ್ ಠಾಕೂರ್(Shardul Thakur) ಅವರನ್ನು ತಂಡದಲ್ಲಿ ಸೇರಿಸಬಹುದು. ಅಕ್ಷರ್ ಪಟೇಲ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಪರ ಆಡುತ್ತಿದ್ದಾರೆ.

ಇದನ್ನೂ ಓದಿ: ಟೆಸ್ಟ್ ತಂಡದಿಂದ ಹೊರಗೆ ಹೊಗಲಿದ್ದಾರೆ ಈ ಇಬ್ಬರು ಆಟಗಾರರು...!

4) ಇಶಾಂತ್ ಶರ್ಮಾ

ಇಶಾಂತ್ ಶರ್ಮಾ(Ishant Sharma) ತಂಡದಲ್ಲಿ ಅತ್ಯಂತ ಅನುಭವಿ ಬೌಲರ್. ಆದರೆ ಅವರ ಬೌಲಿಂಗ್ ನಲ್ಲಿ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. ಇಶಾಂತ್ 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಇವರು ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರಿಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಶಾಂತ್ ಶರ್ಮಾ ಬದಲಿಗೆ ದೀಪಕ್ ಚಹಾರ್ ಅಥವಾ ನವದೀಪ್ ಸೈನಿಯನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News