ಭಾರತಕ್ಕೆ ಆಗಮಿಸಿದ ಒಂದೇ ವಾರಕ್ಕೆ ಭಾರತೀಯರ ಅಭಿಮಾನಿಯಾದ ಪಾಕಿಸ್ತಾನ ಈ ಸ್ಟಾರ್ ಆಟಗಾರ!

Babar Azam Statement on Indian Hospitality: ಭಾರತಕ್ಕೆ ಆಗಮಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಭಾರತೀಯರ ಅಭಿಮಾನಿಯಾಗಿದ್ದಾರಂತೆ. ಭಾರತೀಯ ಜನರು ನೀಡಿದ ಸ್ವಾಗತ ಮತ್ತು ತೋರಿದ ಪ್ರೀತಿಯನ್ನು ಬಾಬರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Written by - Bhavishya Shetty | Last Updated : Oct 6, 2023, 02:55 PM IST
    • ಸುಮಾರು 7 ವರ್ಷಗಳ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಿದೆ
    • ಎರಡೂ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿದ್ದವು
    • ಬಿರಿಯಾನಿ ಬಗ್ಗೆ ಬಾಬರ್ ಆಜಮ್ ಹೇಳಿದ್ದೇನು?
ಭಾರತಕ್ಕೆ ಆಗಮಿಸಿದ ಒಂದೇ ವಾರಕ್ಕೆ ಭಾರತೀಯರ ಅಭಿಮಾನಿಯಾದ ಪಾಕಿಸ್ತಾನ ಈ ಸ್ಟಾರ್ ಆಟಗಾರ!  title=
Babar Azam Statement on Indian Hospitality

Pakistan Cricket Team: ಸುಮಾರು 7 ವರ್ಷಗಳ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಿದೆ. ಈ ನಡುವೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಾವಳಿ ನಡೆದಿರಲಿಲ್ಲ. ಆದರೆ ಎರಡೂ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿದ್ದವು ಎಂಬುದು ಇಲ್ಲಿ ಉಲ್ಲೇಖಿಸಲೇಬೇಕಾದ ವಿಷಯ.

ಇದನ್ನೂ ಓದಿ: 6,6,6,6,6,6 ಟೀಂ ಇಂಡಿಯಾ ದಾಂಡಿಗನ ಬಿರುಸಿನ ಬ್ಯಾಟಿಂಗ್ !ಅಬ್ಬರದ ಅರ್ಧಶತಕ

ಈ ಬಾರಿ ಐಸಿಸಿ ಕಾರ್ಯಕ್ರಮ ಭಾರತದಲ್ಲಿ ನಡೆಯುತ್ತಿರುವುದರಿಂದ ಪಾಕಿಸ್ತಾನ ಭಾರತಕ್ಕೆ ಬರುವ ಅವಕಾಶ ಪಡೆದಿದೆ. ಇನ್ನು ಭಾರತಕ್ಕೆ ಆಗಮಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಭಾರತೀಯರ ಅಭಿಮಾನಿಯಾಗಿದ್ದಾರಂತೆ. ಭಾರತೀಯ ಜನರು ನೀಡಿದ ಸ್ವಾಗತ ಮತ್ತು ತೋರಿದ ಪ್ರೀತಿಯನ್ನು ಬಾಬರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ವಿಶ್ವಕಪ್ ಆರಂಭಕ್ಕೆ ಒಂದು ದಿನ ಮೊದಲು ಎಲ್ಲಾ ನಾಯಕರ ಸಾಮೂಹಿಕ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಅಜಮ್ ಈ ಮಾತನ್ನು ಹೇಳಿದರು, "ಭಾರತಕ್ಕೆ ಆಗಮಿಸಿ ಒಂದು ವಾರ ಕಳೆದಿದೆ. ಆದರೆ ಎಂದಿಗೂ ನಾನು ವಿದೇಶದಲ್ಲಿದ್ದೇನೆ ಎಂದು ಭಾವಿಸಿಲ್ಲ. ಈ ರೀತಿಯ ಆತಿಥ್ಯವನ್ನು ನಿರೀಕ್ಷಿಸಿರಲಿಲ್ಲ. ನಾವು ಪಾಕಿಸ್ತಾನದಲ್ಲಿದ್ದೇವೆ ಎಂದು ಅನಿಸುತ್ತಿದೆ. ಬರುವುದಕ್ಕೂ ಮುನ್ನ ನಾವು ಭಾರತದಲ್ಲಿ ಒಂಟಿಯಾಗಿರುತ್ತೇವೆ ಏನೋ ಎಂದುಕೊಂಡಿದ್ದೆವು. ಆದರೆ ವಿಮಾನ ನಿಲ್ದಾಣದಿಂದ ಹೊಟೇಲ್‌’ಗೆ ಮತ್ತು ನಂತರ ಮೈದಾನದವರೆಗೆ ನಮಗೆ ತುಂಬಾ ಪ್ರೀತಿ ಸಿಕ್ಕಿತು” ಎಂದಿದ್ದಾರೆ

ಬಿರಿಯಾನಿ ಬಗ್ಗೆ ಬಾಬರ್ ಆಜಮ್ ಹೇಳಿದ್ದೇನು?

ಇದಾದ ಬಳಿಕ, ನಾಯಕರ ಈ ಸಾಮೂಹಿಕ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ, ಹೈದರಾಬಾದ್‌’ನ ಬಿರಿಯಾನಿ ಬಗ್ಗೆ ಏನನಿಸಿತು ಎಂದು ಬಾಬರ್ ಅಜಮ್ ಬಳಿ ಕೇಳಿದ್ದಾರೆ. ಅದಕ್ಕೆ ಅವರು ನಗುತ್ತಾ, “ಬಿರಿಯಾನಿ ತುಂಬಾ ಚೆನ್ನಾಗಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಹೈದರಾಬಾದಿನ ಬಿರಿಯಾನಿ ಬಗ್ಗೆ ಸಾಕಷ್ಟು ಕೇಳಿದ್ದೆವು. ಈಗ ಅದನ್ನು ತಿಂದಿದ್ದೇವೆ. ನಿಜವಾಗಿಯೂ ತುಂಬಾ ಚೆನ್ನಾಗಿದೆ ಎಂದು ಈಗ ಅರಿತುಕೊಂಡೆವು” ಎಂದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಹೊಸ್ತಿಲಲ್ಲೇ ಟೀಂ ಇಂಡಿಯಾಗೆ ಆಘಾತ ! ಡೆಂಗ್ಯೂನಿಂದಾಗಿ ಈ ಆಟಗಾರ ಆಡುವುದೇ ಅನುಮಾನ

ಇಂದು ಹೈದರಾಬಾದ್‌’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮೊದಲ ಪಂದ್ಯ ನೆದರ್‌ಲ್ಯಾಂಡ್‌ ವಿರುದ್ಧ ನಡೆಯುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News