ಸೌರವ್ ಗಂಗೂಲಿ ಅಧಿಕಾರ ಕಳೆದುಕೊಳ್ಳಲು ಕಾರಣ ಜೈ ಶಾ ಮಾಡಿದ ಕುತಂತ್ರ! ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

World Cup 2023: ಇತ್ತೀಚೆಗೆ ಐಸಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿದೆ. ಎಸ್‌ ಎಲ್‌ ಸಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇದೆ ಎಂಬುದನ್ನು ಅರಿತ ಐಸಿಸಿ ಈ ಹೆಜ್ಜೆಯನ್ನಿಟ್ಟಿದೆ. ಇದೇ ಸಂದರ್ಭದಲ್ಲಿ, ಮಾಜಿ ವಿಶ್ವ ಚಾಂಪಿಯನ್ ಅರ್ಜುನ್ ರಣತುಂಗಾ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರು ಐಸಿಸಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಆರೋಪಿಸಿದ್ದಾರೆ

Written by - Bhavishya Shetty | Last Updated : Nov 15, 2023, 03:10 PM IST
    • ಐಸಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿದೆ.
    • ಸರ್ಕಾರದ ಹಸ್ತಕ್ಷೇಪ ಇದೆ ಎಂಬುದನ್ನು ಅರಿತ ಐಸಿಸಿ ಈ ಹೆಜ್ಜೆಯನ್ನಿಟ್ಟಿದೆ.
    • ವಿಶ್ವಕಪ್ 2023ರಲ್ಲಿ ಶ್ರೀಲಂಕಾದ ತಂಡ ನೀಡಿದ ಪ್ರದರ್ಶನವು ಕಳಪೆಯಾಗಿತ್ತು
ಸೌರವ್ ಗಂಗೂಲಿ ಅಧಿಕಾರ ಕಳೆದುಕೊಳ್ಳಲು ಕಾರಣ ಜೈ ಶಾ ಮಾಡಿದ ಕುತಂತ್ರ! ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ title=
Arjuna Ranatunga

World Cup 2023: ಐಸಿಸಿ ಒಡಿಐ ವಿಶ್ವಕಪ್ 2023ರಲ್ಲಿ ಶ್ರೀಲಂಕಾದ ತಂಡ ನೀಡಿದ ಪ್ರದರ್ಶನವು ಕಳಪೆಯಾಗಿತ್ತು. ಈ ಪರಿಣಾಮದಿಂದ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ ಪಡೆಯುವಲ್ಲೂ ವಿಫಲವಾಗಿದೆ. ಇದೇ ಕಾರಣದಿಂದ ಶ್ರೀಲಂಕಾದ ಕ್ರಿಕೆಟ್ ಮಂಡಳಿಯ ವಿರುದ್ಧ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಪಂದ್ಯಕ್ಕೆ 2019ರ ಅಂಪೈರ್ಸ್! ಇವರಿದ್ದಾಗ 3 ಪಂದ್ಯಗಳಲ್ಲಿ ಸೋತಿದ್ದ ಟೀಂ

ಇತ್ತೀಚೆಗೆ ಐಸಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿದೆ. ಎಸ್‌ ಎಲ್‌ ಸಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇದೆ ಎಂಬುದನ್ನು ಅರಿತ ಐಸಿಸಿ ಈ ಹೆಜ್ಜೆಯನ್ನಿಟ್ಟಿದೆ. ಇದೇ ಸಂದರ್ಭದಲ್ಲಿ, ಮಾಜಿ ವಿಶ್ವ ಚಾಂಪಿಯನ್ ಅರ್ಜುನ್ ರಣತುಂಗಾ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರು ಐಸಿಸಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಆರೋಪಿಸಿದ್ದಾರೆ.

ಶ್ರೀಲಂಕಾದ ಮಾಜಿ ವಿಶ್ವ ಚಾಂಪಿಯನ್ ಅರ್ಜುನ ರಣತುಂಗ ಬಿಸಿಸಿಐ ಕಾರ್ಯದರ್ಶಿ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಶ್ರೀಲಂಕಾದ ಡೈಲಿ ಮಿರರ್ ನ್ಯೂಸ್ ಪೇಪರ್‌’ನ ಯೂಟ್ಯೂಬ್ ಚಾನೆಲ್‌’ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಶ್ರೀಲಂಕಾ ಕ್ರಿಕೆಟ್’ನ್ನು ಜೈ ಶಾ ನಡೆಸುತ್ತಿದ್ದಾರೆ. ಜೈ ಶಾ ಅವರ ಒತ್ತಡದಿಂದಾಗಿ ಎಸ್‌’ಎಲ್‌’ಸಿ ಹಾಳಾಗುತ್ತಿದೆ. ಭಾರತದ ಒಬ್ಬ ವ್ಯಕ್ತಿ ಶ್ರೀಲಂಕಾದ ಕ್ರಿಕೆಟ್ ಅನ್ನು ಹಾಳು ಮಾಡುತ್ತಿದ್ದಾನೆ” ಎಂದಿದ್ದಾರೆ.

ಇದನ್ನೂ ಓದಿ: 2023ರ ವಿಶ್ವಕಪ್’ನಲ್ಲಿ ರನ್ ಸೋರಲು ಬಿಡದೆ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಯಾರು ಗೊತ್ತಾ?

ಅಷ್ಟೇ ಏಕೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸುವ ಉದ್ದೇಶದಿಂದ ಸೌರವ್ ಗಂಗೂಲಿಯನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿಸಲಾಯಿತು. ಆದರೆ ಗಂಗೂಲಿ ಅದಕ್ಕ ಒಪ್ಪದ ಕಾರಣ ಆತನನ್ನು ಜೈ ಶಾ ಕುತಂತ್ರ ಮಾಡಿ ಕೆಳಗಿಳಿಸಿದ್ದು ಜಯ್ ಶಾ. ಆದರೆ ಆತ ಮಾತ್ರ ಬಿಸಿಸಿಐ ಕಾರ್ಯದರ್ಶಿಯಾಗಿ 2ನೇ ಬಾರಿಗೆ ಆಯ್ಕೆಯಾದ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News