ವೋಟ್ ಕೌಂಟಿಂಗ್ ಡೇಗೆ ವಿಜಯನಗರ ಸಜ್ಜು. ಇದಿನಿಂದಲೇ ಕೌಂಟಿಂಗ್ ಸ್ಥಳದಲ್ಲಿ 144 ಸೆಕ್ಷನ್ ಜಾರಿ. ಪ್ರೌಢದೇವರಾಯ ಕಾಲೇಜಿನ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ. ಅಹಿತಕರ ಘಟನೆ ನಡೆಯದಂತೆ ಖಾಕಿ ಮುನ್ನೆಚ್ಚರಿಕಾ ಕ್ರಮ.
Karnataka Election Result 2023: ಕರ್ನಾಟಕದಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಜನರು ತಮ್ಮ ನಿರ್ಧಾರವನ್ನು ಈಗಾಗಲೇ ನೀಡಿದ್ದಾರೆ. ಇನ್ನು 24 ಗಂಟೆಗಳಲ್ಲಿ ಕರ್ನಾಟಕದ ದೊರೆ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ. ಈ ಎಲ್ಲದರ ಮಧ್ಯೆ, ಎಕ್ಸಿಟ್ ಪೋಲ್ ಗಳು ವಿಧಾನಸಭೆಯ ಸೀಟುಗಳ ಹಂಚಿಕೆಯ ಬಗ್ಗೆ ಒಂದಿಷ್ಟು ಅಂದಾಜುಗಳನ್ನು ನೀಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಉಭಯ ನಾಯಕರ ಅಸಮಾಧಾನ ಹೆಚ್ಚಾಗಿದೆ.
Karnataka Election 2023 Vote Percentage: ರಾಜ್ಯದ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮತದಾನದ ಪ್ರವೃತ್ತಿ ಮುಂದುವರೆದಿದೆ. ವಿರಾಜಪೇಟೆಯಲ್ಲಿ ಶೇ.74.07ರಷ್ಟು ಮತದಾನವಾಗಿದ್ದರೆ, ಮಡಿಕೇರಿಯಲ್ಲಿ ಶೇ.75.39ರಷ್ಟು ಮತದಾನವಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.81.3, ಕಾಪು ಶೇ.78.79, ಉಡುಪಿ ಶೇ.75.87, ಕುಂದಾಪುರ ಶೇ.78.94 ಮತ್ತು ಬೈಂದೂರಿನಲ್ಲಿ ಶೇ.77.84 ರಷ್ಟು ಮತದಾನವಾಗಿದೆ.
Karnataka Assembly Election : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 216 ರಲ್ಲಿ ಮತದಾರರು ಮತ್ತು ಸಿಪಿಐ ಸದಲಗಿ ನಡುವೆ ತೀವ್ರ ವಾಗ್ವಾದ ನಡೆದಿದೆ.
ಬಿರುಸಿನ ಮತದಾನದ ನಡುವೆ ಕೈ ಕೊಟ್ಟ EVM. ಚಾಮರಾಜನಗರ ಮತಗಟ್ಟೆಯ ಇವಿಎಂನಲ್ಲಿ ದೋಷ. ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಘಟನೆ. ಉಪ್ಪಾರ ಬೀದಿಯ ಮತಗಟ್ಟೆ 69ರಲ್ಲಿ ತಾಂತ್ರಿಕ ದೋಷ. ಬಳಿಕ ಅಧಿಕಾರಿಗಳಿಂದ ಸರಿಪಡಿಸುವ ಕಾರ್ಯ ಪೂರ್ಣ. ಮತದಾರರು ಅರ್ಧ ಗಂಟೆ ಕಾದು ಕಾದು ಅಸಮಾಧಾನ. ಚಾಮರಾಜನಗರದ ಉಳಿದೆಲ್ಲೆಡೆ ಬಿರುಸಿನ ಮತದಾನ.
ಶಿಕಾರಿಪುರದಲ್ಲಿ ಮತದಾನ ಮಾಡುವ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ತಮ್ಮ ಮನೆ ದೇವರಾದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.
ಬೆಂಗಳೂರಲ್ಲಿ ಸಚಿವ ಭೈರತಿ ಬಸವರಾಜ್ ಮತದಾನ. ಕೆ.ಆರ್.ಪುರ ಕ್ಷೇತ್ರದ ಮೇಡಹಳ್ಳಿಯಲ್ಲಿ ಮತದಾನ. ಪತ್ನಿ ಪದ್ಮವತಿಯೊಂದಿಗೆ ಆಗಮಿಸಿ ಸಚಿವರ ವೋಟಿಂಗ್. ಮತ ಚಲಾವಣೆಗೂ ಮುನ್ನ ಗೋಪೂಜೆ ಸಲ್ಲಿಕೆ. ಎಲ್ಲರೂ ಮತದಾನ ಮಾಡುವಂತೆ ಭೈರತಿ ಮನವಿ.
Rishab Shetty : ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕ ರಿಷಭ್ ಶೆಟ್ಟಿ ಅವರು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ಮತದಾನ ಮಾಡಿ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.